ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರು ಅನುಭವಿಸಿದ ಮಾನಸಿಕ ಮತ್ತು ಭಾವಾನಾತ್ಮಕ ಗಾಯಗಳು ಆಳವಾಗಿರುತ್ತವೆ. ಜೊತೆಗೆ ಅಪಘಾತದಿಂದಾಗಿ ಆದ ದೈಹಿಕ ಅಸಾಮರ್ಥ್ಯವೂ ಅವರ ಜೀವನವನ್ನೇ ಕಸಿದುಕೊಂಡಿರುತ್ತದೆ. ಸಂಪೂರ್ಣ ಬದಲಾದ ಲೋಕದಲ್ಲಿ ಸಂತ್ರಸ್ತರುತಮ್ಮ ವೈಯಕ್ತಿಕ ಆಯ್ಕೆ ಕಳೆದುಕೊಂಡು ಬದುಕಬೇಕಾಗಿರುತ್ತದೆ. ಈ ಎಲ್ಲ ಅಂಶಗಳನ್ನು, ಪರಿಹಾರ ಕೋರಿ ಬಂದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಗಮನಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಕೃಷ್ಣ ಮುರಾರಿ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ಪೀಠವು ಹೇಳಿತು.