<p><strong>ನವದೆಹಲಿ:</strong> ರಸ್ತೆ ಅಪಘಾತಪ್ರಕರಣಗಳಲ್ಲಿ ಪರಿಹಾರ ನ್ಯಾಯಾಲಯಗಳು ತೀರಾ ಕಡಿಮೆ ಪರಿಹಾರ ಘೋಷಿಸಬಾರದು. ಈ ಕುರಿತು ದೂರದೃಷ್ಟಿ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಲಯಗಳಿಗೆ ಸೂಚಿಸಿದೆ.</p>.<p>ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರು ಅನುಭವಿಸಿದ ಮಾನಸಿಕ ಮತ್ತು ಭಾವಾನಾತ್ಮಕ ಗಾಯಗಳು ಆಳವಾಗಿರುತ್ತವೆ. ಜೊತೆಗೆ ಅಪಘಾತದಿಂದಾಗಿ ಆದ ದೈಹಿಕ ಅಸಾಮರ್ಥ್ಯವೂ ಅವರ ಜೀವನವನ್ನೇ ಕಸಿದುಕೊಂಡಿರುತ್ತದೆ. ಸಂಪೂರ್ಣ ಬದಲಾದ ಲೋಕದಲ್ಲಿ ಸಂತ್ರಸ್ತರುತಮ್ಮ ವೈಯಕ್ತಿಕ ಆಯ್ಕೆ ಕಳೆದುಕೊಂಡು ಬದುಕಬೇಕಾಗಿರುತ್ತದೆ. ಈ ಎಲ್ಲ ಅಂಶಗಳನ್ನು, ಪರಿಹಾರ ಕೋರಿ ಬಂದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಗಮನಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಕೃಷ್ಣ ಮುರಾರಿ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ಪೀಠವು ಹೇಳಿತು.</p>.<p>‘ದೈಹಿಕವಾಗಿ ಯಾವುದೇ ತೊಂದರೆಯಿಲ್ಲದ ವ್ಯಕ್ತಿಯು ಅಪಘಾತದ ನಂತರ ಅಂಗವಿಕಲರಾದಾಗ, ಸಂಪೂರ್ಣವಾಗಿ ಕಂಗೆಡುತ್ತಾರೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳುತೀರಾ ಕಡಿಮೆ ಪರಿಹಾರ ಘೋಷಿಸಿದರೆ ಅದು ಸಂತ್ರಸ್ತರಿಗೆ ಮಾಡಿದ ಅಪಮಾನ’ ಎಂದು ಪೀಠವು ಅಭಿಪ್ರಾಯಪಟ್ಟಿತು.</p>.<p><strong>₹19 ಲಕ್ಷ ಪರಿಹಾರ: </strong>ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಪ್ಪು ಯಾದವ್ ಎಂಬುವವರೊಬ್ಬರು 2012ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ಬಲಗೈ ಕಳೆದುಕೊಂಡಿದ್ದರು. ಈ ಕುರಿತು ಗುರುವಾರ ವಿಚಾರಣೆ ಸಂದರ್ಭದಲ್ಲಿ ಪೀಠವು, ಪರಿಹಾರ ಮೊತ್ತವನ್ನು ₹7.77 ಲಕ್ಷದಿಂದ ₹19.65 ಲಕ್ಷಕ್ಕೆ ಏರಿಕೆ ಮಾಡಿ ತೀರ್ಪು ಪ್ರಕಟಿಸಿತು. ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅವರ ಕೈಗಳೇ ಜೀವನಾಧಾರ. ಹೀಗಾಗಿ ಅವರ ಆದಾಯವನ್ನೇ ಅವರು ಕಳೆದುಕೊಂಡಿದ್ದಾರೆ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಸ್ತೆ ಅಪಘಾತಪ್ರಕರಣಗಳಲ್ಲಿ ಪರಿಹಾರ ನ್ಯಾಯಾಲಯಗಳು ತೀರಾ ಕಡಿಮೆ ಪರಿಹಾರ ಘೋಷಿಸಬಾರದು. ಈ ಕುರಿತು ದೂರದೃಷ್ಟಿ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಲಯಗಳಿಗೆ ಸೂಚಿಸಿದೆ.</p>.<p>ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರು ಅನುಭವಿಸಿದ ಮಾನಸಿಕ ಮತ್ತು ಭಾವಾನಾತ್ಮಕ ಗಾಯಗಳು ಆಳವಾಗಿರುತ್ತವೆ. ಜೊತೆಗೆ ಅಪಘಾತದಿಂದಾಗಿ ಆದ ದೈಹಿಕ ಅಸಾಮರ್ಥ್ಯವೂ ಅವರ ಜೀವನವನ್ನೇ ಕಸಿದುಕೊಂಡಿರುತ್ತದೆ. ಸಂಪೂರ್ಣ ಬದಲಾದ ಲೋಕದಲ್ಲಿ ಸಂತ್ರಸ್ತರುತಮ್ಮ ವೈಯಕ್ತಿಕ ಆಯ್ಕೆ ಕಳೆದುಕೊಂಡು ಬದುಕಬೇಕಾಗಿರುತ್ತದೆ. ಈ ಎಲ್ಲ ಅಂಶಗಳನ್ನು, ಪರಿಹಾರ ಕೋರಿ ಬಂದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಗಮನಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಕೃಷ್ಣ ಮುರಾರಿ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ಪೀಠವು ಹೇಳಿತು.</p>.<p>‘ದೈಹಿಕವಾಗಿ ಯಾವುದೇ ತೊಂದರೆಯಿಲ್ಲದ ವ್ಯಕ್ತಿಯು ಅಪಘಾತದ ನಂತರ ಅಂಗವಿಕಲರಾದಾಗ, ಸಂಪೂರ್ಣವಾಗಿ ಕಂಗೆಡುತ್ತಾರೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳುತೀರಾ ಕಡಿಮೆ ಪರಿಹಾರ ಘೋಷಿಸಿದರೆ ಅದು ಸಂತ್ರಸ್ತರಿಗೆ ಮಾಡಿದ ಅಪಮಾನ’ ಎಂದು ಪೀಠವು ಅಭಿಪ್ರಾಯಪಟ್ಟಿತು.</p>.<p><strong>₹19 ಲಕ್ಷ ಪರಿಹಾರ: </strong>ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಪ್ಪು ಯಾದವ್ ಎಂಬುವವರೊಬ್ಬರು 2012ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ಬಲಗೈ ಕಳೆದುಕೊಂಡಿದ್ದರು. ಈ ಕುರಿತು ಗುರುವಾರ ವಿಚಾರಣೆ ಸಂದರ್ಭದಲ್ಲಿ ಪೀಠವು, ಪರಿಹಾರ ಮೊತ್ತವನ್ನು ₹7.77 ಲಕ್ಷದಿಂದ ₹19.65 ಲಕ್ಷಕ್ಕೆ ಏರಿಕೆ ಮಾಡಿ ತೀರ್ಪು ಪ್ರಕಟಿಸಿತು. ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅವರ ಕೈಗಳೇ ಜೀವನಾಧಾರ. ಹೀಗಾಗಿ ಅವರ ಆದಾಯವನ್ನೇ ಅವರು ಕಳೆದುಕೊಂಡಿದ್ದಾರೆ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>