<p><strong>ಭುವನೇಶ್ವರ್: </strong>ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಬಾಲಸೋರ್ ಜಿಲ್ಲೆಗೆ ಚಂಡಮಾರುತ ಧರೆಗಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ದೊಡ್ಡ ಪ್ರಮಾಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿದೆ.</p>.<p>ಹವಾಮಾನ ಇಲಾಖೆ ನೀಡಿದ ಮಾಹಿತಿ ಆಧರಿಸಿ, ಒಡಿಶಾದಲ್ಲಿ ಚಂಡಮಾರುತದ ಸಂಭವನೀಯ ಅಪಾಯವನ್ನು ಮನಗಂಡು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಪಿಕೆ ಜೆನಾ ಸುದ್ದಿಗಾರರಿಗೆ ತಿಳಿಸಿದರು.</p>.<p>ಯಸ್ ಚಂಡಮಾರುತ ಧರೆಗಪ್ಪಳಿಸುವ ವೇಳೆ ಸಮುದ್ರದಲ್ಲಿ 2-4.5 ಮೀಟರ್ ಅಲೆಗಳು ಏಳುವ ಮುನ್ಸೂಚನೆ ಇರುವುದರಿಂದ, ಎಲ್ಲಾ ತಗ್ಗು ಪ್ರದೇಶಗಳು ಮತ್ತು ನೀರು ನುಗ್ಗುವ ಪ್ರದೇಶಗಳ ಜನರ ಬೃಹತ್ ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು ಎಂದು ಜೆನಾ ಹೇಳಿದರು.</p>.<p>‘ತಗ್ಗು ಪ್ರದೇಶದ ಜನರ ಸ್ಥಳಾಂತರಿಸುವ ಪ್ರಕ್ರಿಯೆಯು ಈಗಾಗಲೇ ರಾಜ್ಯದಲ್ಲಿ ಪ್ರಾರಂಭವಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳಲಿದೆ. ಚಂಡಮಾರುತದಿಂದ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಹೇಳಿದರು.</p>.<p>ಮಯೂರ್ ಭಂಜ್ ಮತ್ತು ಕಿಯೋಂಜರ್ ಜಿಲ್ಲೆಗಳ ಜೊತೆ ಬಾಲಸೋರ್, ಭದ್ರಾಕ್, ಕೇಂದ್ರಪಾರ ಮತ್ತು ಜಗಸ್ಟಿಂಗ್ಪುರ ಜಿಲ್ಲೆಗಳನ್ನು ಹೆಚ್ಚಿನ ಅಪಾಯದ ವಲಯಗಳಾಗಿ ಗುರುತಿಸಲಾಗಿದೆ.</p>.<p>ಅಲ್ಲದೆ, ಕಟಕ್, ಪುರಿ, ಖುರಾ, ನಾಯಗಢ ಮತ್ತು ಧೆಂಕನಾಲ್ ಜಿಲ್ಲಾಧಿಕಾರಿಗಳನ್ನು ಸಹ ಯಾವುದೇ ಸಂಭವನೀಯ ಅಪಾಯ ಎದುರಿಸಲು ಸಜ್ಜಾಗುವಂತೆ ಸೂಚನೆ ನೀಡಲಾಗಿದೆ.</p>.<p>ರಾಜ್ಯ ಸರ್ಕಾರವು ಈಗಾಗಲೇ ಎನ್ಡಿಆರ್ಎಫ್ನ 22 ತಂಡಗಳು, ಒಡಿಆರ್ಎಎಫ್ನ 50 ತಂಡಗಳು, ಅಗ್ನಿಶಾಮಕ ಸೇವೆಗಳ 150 ಸಿಬ್ಬಂದಿಗಳು ಮತ್ತು 35 ಮರಗಳನ್ನು ಕಡಿಯುವ ತಂಡಗಳನ್ನು ದುರ್ಬಲ ಜಿಲ್ಲೆಗಳಲ್ಲಿ ನಿಯೋಜಿಸಿದೆ ಎಂದು ಜೆನಾ ಹೇಳಿದರು.</p>.<p>ರಾಜ್ಯವು 30 ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ್: </strong>ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಬಾಲಸೋರ್ ಜಿಲ್ಲೆಗೆ ಚಂಡಮಾರುತ ಧರೆಗಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ದೊಡ್ಡ ಪ್ರಮಾಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿದೆ.</p>.<p>ಹವಾಮಾನ ಇಲಾಖೆ ನೀಡಿದ ಮಾಹಿತಿ ಆಧರಿಸಿ, ಒಡಿಶಾದಲ್ಲಿ ಚಂಡಮಾರುತದ ಸಂಭವನೀಯ ಅಪಾಯವನ್ನು ಮನಗಂಡು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಪಿಕೆ ಜೆನಾ ಸುದ್ದಿಗಾರರಿಗೆ ತಿಳಿಸಿದರು.</p>.<p>ಯಸ್ ಚಂಡಮಾರುತ ಧರೆಗಪ್ಪಳಿಸುವ ವೇಳೆ ಸಮುದ್ರದಲ್ಲಿ 2-4.5 ಮೀಟರ್ ಅಲೆಗಳು ಏಳುವ ಮುನ್ಸೂಚನೆ ಇರುವುದರಿಂದ, ಎಲ್ಲಾ ತಗ್ಗು ಪ್ರದೇಶಗಳು ಮತ್ತು ನೀರು ನುಗ್ಗುವ ಪ್ರದೇಶಗಳ ಜನರ ಬೃಹತ್ ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು ಎಂದು ಜೆನಾ ಹೇಳಿದರು.</p>.<p>‘ತಗ್ಗು ಪ್ರದೇಶದ ಜನರ ಸ್ಥಳಾಂತರಿಸುವ ಪ್ರಕ್ರಿಯೆಯು ಈಗಾಗಲೇ ರಾಜ್ಯದಲ್ಲಿ ಪ್ರಾರಂಭವಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳಲಿದೆ. ಚಂಡಮಾರುತದಿಂದ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಹೇಳಿದರು.</p>.<p>ಮಯೂರ್ ಭಂಜ್ ಮತ್ತು ಕಿಯೋಂಜರ್ ಜಿಲ್ಲೆಗಳ ಜೊತೆ ಬಾಲಸೋರ್, ಭದ್ರಾಕ್, ಕೇಂದ್ರಪಾರ ಮತ್ತು ಜಗಸ್ಟಿಂಗ್ಪುರ ಜಿಲ್ಲೆಗಳನ್ನು ಹೆಚ್ಚಿನ ಅಪಾಯದ ವಲಯಗಳಾಗಿ ಗುರುತಿಸಲಾಗಿದೆ.</p>.<p>ಅಲ್ಲದೆ, ಕಟಕ್, ಪುರಿ, ಖುರಾ, ನಾಯಗಢ ಮತ್ತು ಧೆಂಕನಾಲ್ ಜಿಲ್ಲಾಧಿಕಾರಿಗಳನ್ನು ಸಹ ಯಾವುದೇ ಸಂಭವನೀಯ ಅಪಾಯ ಎದುರಿಸಲು ಸಜ್ಜಾಗುವಂತೆ ಸೂಚನೆ ನೀಡಲಾಗಿದೆ.</p>.<p>ರಾಜ್ಯ ಸರ್ಕಾರವು ಈಗಾಗಲೇ ಎನ್ಡಿಆರ್ಎಫ್ನ 22 ತಂಡಗಳು, ಒಡಿಆರ್ಎಎಫ್ನ 50 ತಂಡಗಳು, ಅಗ್ನಿಶಾಮಕ ಸೇವೆಗಳ 150 ಸಿಬ್ಬಂದಿಗಳು ಮತ್ತು 35 ಮರಗಳನ್ನು ಕಡಿಯುವ ತಂಡಗಳನ್ನು ದುರ್ಬಲ ಜಿಲ್ಲೆಗಳಲ್ಲಿ ನಿಯೋಜಿಸಿದೆ ಎಂದು ಜೆನಾ ಹೇಳಿದರು.</p>.<p>ರಾಜ್ಯವು 30 ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>