<p><strong>ಪಿತೋರ್ಗಡ(ಉತ್ತರಾಖಂಡ): </strong>ಉತ್ತರಾಖಂಡದ ಪಿತೋರ್ಗಡ ಜಿಲ್ಲೆಯ ಧಾರ್ಚುಲಾದಲ್ಲಿ ಉಪ–ವಿಭಾಗದ ವ್ಯಾಪ್ತಿಯಲ್ಲಿ ಭಾರತ– ಚೀನಾ ಗಡಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಮೂರು ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ಸಿಂಗ್ ಸೋಮವಾರ ಉದ್ಘಾಟಿಸಿದರು.</p>.<p>ರಕ್ಷಣಾ ಸಚಿವರು ರಾಷ್ಟ್ರರಾಜಧಾನಿ ದೆಹಲಿಯಿಂದಲೇ ಆನ್ಲೈನ್ ಮೂಲಕ ಮೂರು ಸೇತುವೆಗಳ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದರು ಎಂದು ಬಾರ್ಡರ್ ರೋಡ್ ಆರ್ಗನೈಸೇಷನ್(ಬಿಆರ್ಒ) ಮುಖ್ಯ ಎಂಜಿನಿಯರ್ ಎಂಎನ್ವಿ ಪ್ರಸಾದ್ ತಿಳಿಸಿದರು.</p>.<p>‘ಮೂರರಲ್ಲಿ ಒಂದು ಸೇತುವೆ ತವಾಘಾಟ್ ಸಮೀಪ ನಿರ್ಮಿಸಿರುವ ತವಘಾಟ್–ಘಾಟಿಯಾ ಬಗರ್ ರಸ್ತೆಯಲ್ಲಿದ್ದರೆ, ಮತ್ತೊಂದು ಕಿರ್ಕುಟಿಯಾ ಸಮೀಪದ ಜೌಲಗಿಬಿ–ಮನ್ಸಿಯಾರಿ ರಸ್ತೆಯಲ್ಲಿದೆ. ಮೂರನೆಯದು ಲಾಸ್ಪಾ ಸಮೀಪ ನಿರ್ಮಿಸಿರುವ ಮನ್ಸುಯಾರಿ–ಬುಗಡಿಯಾರ್–ಮಿಲಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.</p>.<p>ಬಿಆರ್ಒ ನಿರ್ಮಾಣ ಮಾಡಿರುವ ಈ ಮೂರು ಸೇತುವೆಗಳು, ಹಿಮಾಲಯ ಪ್ರದೇಶದಲ್ಲಿರುವ ಗಡಿ ಭದ್ರತಾ ಚೌಕಿಗಳೊಂದಿಗೆ ಭಾರತದ ಪ್ರಮುಖ ಭೂಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ ಎಂದು ಅವರು ತಿಳಿಸಿದರು.</p>.<p>ಬಿಆರ್ಒ ನಿರ್ಮಿಸಿದ ಈ ಸೇತುವೆಗಳು ಹಿಮಾಲಯನ್ ಪ್ರದೇಶದ ಈ ಭಾಗದಲ್ಲಿರುವ ಗಡಿ ಭದ್ರತಾ ಪೋಸ್ಟ್ಗಳೊಂದಿಗೆ ಭಾರತೀಯ ಮುಖ್ಯ ಭೂಮಿಯನ್ನು ಸಂಪರ್ಕಿಸುತ್ತವೆ ಎಂದು ಪ್ರಸಾದ್ ಹೇಳಿದರು.</p>.<p>ಈ ಸೇತುವೆಗಳು 140-180 ಮೀಟರ್ ಉದ್ದವಿದ್ದು, ಪ್ರತಿಕೂಲ ಹವಾಮಾನವನ್ನು ಎದುರಿಸುತ್ತಾ, ಎತ್ತರದ ಪ್ರದೇಶಗಳಲ್ಲಿ ಇವುಗಳನ್ನು ಬಿಆರ್ಒ ನಿರ್ಮಾಣ ಮಾಡಿದೆ ಎಂದು ಅವರು ಹೇಳಿದರು.</p>.<p>ಈ ಸೇತುವೆಗಳು ಭದ್ರತಾ ಪಡೆಗಳು ಹಾಗೂ ಪ್ರವಾಸಿಗರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಬಿಆರ್ಒ ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿತೋರ್ಗಡ(ಉತ್ತರಾಖಂಡ): </strong>ಉತ್ತರಾಖಂಡದ ಪಿತೋರ್ಗಡ ಜಿಲ್ಲೆಯ ಧಾರ್ಚುಲಾದಲ್ಲಿ ಉಪ–ವಿಭಾಗದ ವ್ಯಾಪ್ತಿಯಲ್ಲಿ ಭಾರತ– ಚೀನಾ ಗಡಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಮೂರು ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ಸಿಂಗ್ ಸೋಮವಾರ ಉದ್ಘಾಟಿಸಿದರು.</p>.<p>ರಕ್ಷಣಾ ಸಚಿವರು ರಾಷ್ಟ್ರರಾಜಧಾನಿ ದೆಹಲಿಯಿಂದಲೇ ಆನ್ಲೈನ್ ಮೂಲಕ ಮೂರು ಸೇತುವೆಗಳ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದರು ಎಂದು ಬಾರ್ಡರ್ ರೋಡ್ ಆರ್ಗನೈಸೇಷನ್(ಬಿಆರ್ಒ) ಮುಖ್ಯ ಎಂಜಿನಿಯರ್ ಎಂಎನ್ವಿ ಪ್ರಸಾದ್ ತಿಳಿಸಿದರು.</p>.<p>‘ಮೂರರಲ್ಲಿ ಒಂದು ಸೇತುವೆ ತವಾಘಾಟ್ ಸಮೀಪ ನಿರ್ಮಿಸಿರುವ ತವಘಾಟ್–ಘಾಟಿಯಾ ಬಗರ್ ರಸ್ತೆಯಲ್ಲಿದ್ದರೆ, ಮತ್ತೊಂದು ಕಿರ್ಕುಟಿಯಾ ಸಮೀಪದ ಜೌಲಗಿಬಿ–ಮನ್ಸಿಯಾರಿ ರಸ್ತೆಯಲ್ಲಿದೆ. ಮೂರನೆಯದು ಲಾಸ್ಪಾ ಸಮೀಪ ನಿರ್ಮಿಸಿರುವ ಮನ್ಸುಯಾರಿ–ಬುಗಡಿಯಾರ್–ಮಿಲಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.</p>.<p>ಬಿಆರ್ಒ ನಿರ್ಮಾಣ ಮಾಡಿರುವ ಈ ಮೂರು ಸೇತುವೆಗಳು, ಹಿಮಾಲಯ ಪ್ರದೇಶದಲ್ಲಿರುವ ಗಡಿ ಭದ್ರತಾ ಚೌಕಿಗಳೊಂದಿಗೆ ಭಾರತದ ಪ್ರಮುಖ ಭೂಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ ಎಂದು ಅವರು ತಿಳಿಸಿದರು.</p>.<p>ಬಿಆರ್ಒ ನಿರ್ಮಿಸಿದ ಈ ಸೇತುವೆಗಳು ಹಿಮಾಲಯನ್ ಪ್ರದೇಶದ ಈ ಭಾಗದಲ್ಲಿರುವ ಗಡಿ ಭದ್ರತಾ ಪೋಸ್ಟ್ಗಳೊಂದಿಗೆ ಭಾರತೀಯ ಮುಖ್ಯ ಭೂಮಿಯನ್ನು ಸಂಪರ್ಕಿಸುತ್ತವೆ ಎಂದು ಪ್ರಸಾದ್ ಹೇಳಿದರು.</p>.<p>ಈ ಸೇತುವೆಗಳು 140-180 ಮೀಟರ್ ಉದ್ದವಿದ್ದು, ಪ್ರತಿಕೂಲ ಹವಾಮಾನವನ್ನು ಎದುರಿಸುತ್ತಾ, ಎತ್ತರದ ಪ್ರದೇಶಗಳಲ್ಲಿ ಇವುಗಳನ್ನು ಬಿಆರ್ಒ ನಿರ್ಮಾಣ ಮಾಡಿದೆ ಎಂದು ಅವರು ಹೇಳಿದರು.</p>.<p>ಈ ಸೇತುವೆಗಳು ಭದ್ರತಾ ಪಡೆಗಳು ಹಾಗೂ ಪ್ರವಾಸಿಗರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಬಿಆರ್ಒ ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>