<p><strong>ನವದೆಹಲಿ: </strong>ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಿಂದ ದೆಹಲಿ ಪೊಲೀಸರು ಬಂಧಿಸಿದ್ದ ಫ್ರೀಲಾನ್ಸ್ ಪತ್ರಕರ್ತ ಮನ್ದೀಪ್ ಪೂನಿಯಾ ಅವರಿಗೆ ದೆಹಲಿಯ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.</p>.<p>ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸತ್ವೀರ್ ಸಿಂಗ್ ಲಾಂಬಾ ಅವರು, ‘ಪ್ರಕರಣದಲ್ಲಿ ದೂರುದಾರರು, ಸಾಕ್ಷಿಗಳು ಪೊಲೀಸರೇ ಆಗಿರುವುದರಿಂದ ಆರೋಪಿಯು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಪೂನಿಯಾ ಅವರನ್ನು ಭಾನುವಾರ ಬಂಧಿಸಿದ್ದ ಪೊಲೀಸರು, ಅವರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿದ್ದರು.</p>.<p>ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ದೇಶ ಬಿಟ್ಟು ಹೋಗಬಾರದು. ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಪೂನಿಯಾ ಅವರಿಗೆ ನಿರ್ದೇಶಿದೆ.</p>.<p><strong>ಇವನ್ನೂ ಓದಿ... </strong></p>.<p><a href="https://www.prajavani.net/india-news/sanjay-raut-meets-farmer-leader-rakesh-tikait-at-ghazipur-protest-site-801746.html" target="_blank"><strong>ರೈತರ ಹೋರಾಟಕ್ಕೆ ಬೆಂಬಲ: ರಾಕೇಶ್ ಟಿಕಾಯತ್ ಭೇಟಿಯಾದ ಸಂಜಯ್ ರಾವುತ್</strong></a></p>.<p><strong><a href="https://www.prajavani.net/india-news/no-formal-talks-with-govt-until-harassment-stops-detained-farmers-freed-samyukt-kisan-morcha-801743.html" target="_blank">ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಮಾತುಕತೆ ಸಾಧ್ಯವಿಲ್ಲ: ಕಿಸಾನ್ ಮೋರ್ಚಾ ಪಟ್ಟು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಿಂದ ದೆಹಲಿ ಪೊಲೀಸರು ಬಂಧಿಸಿದ್ದ ಫ್ರೀಲಾನ್ಸ್ ಪತ್ರಕರ್ತ ಮನ್ದೀಪ್ ಪೂನಿಯಾ ಅವರಿಗೆ ದೆಹಲಿಯ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.</p>.<p>ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸತ್ವೀರ್ ಸಿಂಗ್ ಲಾಂಬಾ ಅವರು, ‘ಪ್ರಕರಣದಲ್ಲಿ ದೂರುದಾರರು, ಸಾಕ್ಷಿಗಳು ಪೊಲೀಸರೇ ಆಗಿರುವುದರಿಂದ ಆರೋಪಿಯು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಪೂನಿಯಾ ಅವರನ್ನು ಭಾನುವಾರ ಬಂಧಿಸಿದ್ದ ಪೊಲೀಸರು, ಅವರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿದ್ದರು.</p>.<p>ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ದೇಶ ಬಿಟ್ಟು ಹೋಗಬಾರದು. ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಪೂನಿಯಾ ಅವರಿಗೆ ನಿರ್ದೇಶಿದೆ.</p>.<p><strong>ಇವನ್ನೂ ಓದಿ... </strong></p>.<p><a href="https://www.prajavani.net/india-news/sanjay-raut-meets-farmer-leader-rakesh-tikait-at-ghazipur-protest-site-801746.html" target="_blank"><strong>ರೈತರ ಹೋರಾಟಕ್ಕೆ ಬೆಂಬಲ: ರಾಕೇಶ್ ಟಿಕಾಯತ್ ಭೇಟಿಯಾದ ಸಂಜಯ್ ರಾವುತ್</strong></a></p>.<p><strong><a href="https://www.prajavani.net/india-news/no-formal-talks-with-govt-until-harassment-stops-detained-farmers-freed-samyukt-kisan-morcha-801743.html" target="_blank">ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಮಾತುಕತೆ ಸಾಧ್ಯವಿಲ್ಲ: ಕಿಸಾನ್ ಮೋರ್ಚಾ ಪಟ್ಟು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>