'ಮಳೆ ನೀರಿನಲ್ಲಿ ತೈಲ', 'ತೈಲ ವರ್ಣದಮಳೆ'ಯಾಗುತ್ತಿದೆ ಎಂದು ದೂರಿದ 55 ಕರೆಗಳು ವಿವಿಧ ಪ್ರದೇಶಗಳ ನಾಗರಿಕರಿಂದ ದೆಹಲಿಯ ಅಗ್ನಿಶಾಮಕ ದಳಕ್ಕೆ ಭಾನುವಾರ ರಾತ್ರಿ ಬಂದಿದೆ,' ಎಂದು ದೆಹಲಿಯ ಅಗ್ನಿಶಾಮ ಸೇವೆಗಳ ಮುಖ್ಯಸ್ಥ ಅತುಲ್ ಗರ್ಗ್ ಮಾಹಿತಿ ನೀಡಿದ್ದಾರೆ. ಕರೆ ಮಾಡಿದವರಲ್ಲಿ ಬಹುತೇಕರು ವಾಹನ ಸವಾರರರಾಗಿದ್ದು, ಮಳೆ ನೀರಿನಿಂದಾಗಿ ರಸ್ತೆ ಜಿಡ್ಡು ಜಿಡ್ಡಾಗಿದ್ದು, ವಾಹನಗಳು ಜಾರುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.