<p class="title"><strong>ಮುಂಬೈ: </strong>‘ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ (ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸಲು ಕೆಟ್ಟ ರಾಜಕಾರಣ ನಡೆಯುತ್ತಿದೆ. ಇಂತಹ ಯತ್ನಗಳು ಫಲ ನೀಡುವುದಿಲ್ಲ’ ಎಂದು ಶಿವಸೇನೆ ಸಂಸದ ಸಂಜಯ ರಾವುತ್ ಪ್ರತಿಪಾದಿಸಿದ್ದಾರೆ.</p>.<p class="title">‘ಸೇವೆಯಲ್ಲಿ ಮುಂದುವರಿಸಲು ₹ 2 ಕೋಟಿ ನೀಡುವಂತೆ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕೇಳಿದ್ದರು. ಅಲ್ಲದೆ, ಮತ್ತೊಬ್ಬ ಮಂತ್ರಿ ಅನಿಲ್ ಪರಬ್ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿಕೊಡಲು ತಿಳಿಸಿದ್ದರು’ ಎಂದು ಆರೋಪಿಸಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಪತ್ರದ ಹಿಂದೆಯೇ ರಾವುತ್ ಈ ಹೇಳಿಕೆ ನೀಡಿದ್ದಾರೆ.</p>.<p>ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಮತ್ತು ನಂತರ ಆ ವಾಹನದ ಮಾಲೀಕ ಮನ್ಸುಖ್ ಹಿರೇನ್ ಶಂಕಾಸ್ಪದ ಸಾವಿಗೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಸದ್ಯ ವಾಜೆ ಅವರನ್ನು ಬಂಧಿಸಿದ್ದಾರೆ.</p>.<p>ಈ ಮಧ್ಯೆ ವಾಜೆ ಆರೋಪವನ್ನು ಶಿವಸೇನೆ ನಾಯಕ ಪರಬ್ ತಳ್ಳಿಹಾಕಿದ್ದು, ‘ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ. ನಾನು ಬಾಬಾಸಾಹೇಬ್ ಠಾಕ್ರೆ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದೇನೆ, ಯಾವುದೇ ತಪ್ಪುಮಾಡಿಲ್ಲ’ ಎಂದು ಹೇಳಿದ್ದಾರೆ.</p>.<p>‘ಆರೋಪಿಗಳು ಈಗ ಜೈಲಿನಿಂದಲೇ ಪತ್ರ ಬರೆಯುವ ಹೊಸ ಪ್ರವೃತ್ತಿ ರಾಜ್ಯದಲ್ಲಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಐ.ಟಿ ಸೆಲ್ ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವ್ಯಕ್ತಿತ್ವಕ್ಕೆ ಕುಂದುತರುವ ಕೆಲಸ ಮಾಡುತ್ತಿವೆ.ಇಂಥ ಕೆಟ್ಟ ರಾಜಕಾರಣವನ್ನೇ ದೇಶ ಹಿಂದೆಂದೂ ನೋಡಿರಲಿಲ್ಲ’ ಎಂದು ರಾವುತ್ ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದರು.</p>.<p><strong>ಮತ್ತೆ ವೈದ್ಯಕೀಯ ಪರೀಕ್ಷೆ: </strong>ಈ ಮಧ್ಯೆ, ಸಚಿನ್ ವಾಜೆ ಅವರನ್ನುಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಎನ್ಐಎ ಅಧಿಕಾರಿಗಳು ಗುರುವಾರ 2ನೇ ಬಾರಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.</p>.<p><strong>ಶೀಘ್ರ ಇಬ್ಬರು ಸಚಿವರ ರಾಜೀನಾಮೆ: ರಾಜ್ಯ ಬಿಜೆಪಿ ಅಧ್ಯಕ್ಷ ಪಾಟೀಲ್ ಭವಿಷ್ಯ<br />ಮುಂಬೈ:</strong> ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಪರಿಸ್ಥಿತಿ ಸೂಕ್ತವಾಗಿದೆ. 15 ದಿನದಲ್ಲಿ ಇನ್ನು ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ’ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.</p>.<p>ಇಬ್ಬರು ಸಚಿವರ ವಿರುದ್ಧ ಸಚಿನ್ ವಾಜೆ ಪತ್ರ ಬರೆದ ಹಿನ್ನೆಲೆಯಲ್ಲಿ ಹೀಗೇ ಪ್ರತಿಕ್ರಿಯಿಸಿರುವ ಪಾಟೀಲ್ ಅವರು, ಭವಿಷ್ಯದಲ್ಲಿ ಏನಾಗಬಹುದು ಎಂಬುದು ಸಾಮಾನ್ಯರ ಊಹೆಗೂ ನಿಲುಕುತ್ತದೆ ಎಂದಿದ್ದಾರೆ.</p>.<p>‘ಇಬ್ಬರು ಸಚಿವರ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲು ಏರಲಿದ್ದು, ಆ ನಂತರ 15 ದಿನದಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಲೇಬೇಕಾಗುತ್ತದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆನಾನು ಒತ್ತಡ ಹೇರುವುದಿಲ್ಲ. ಆದರೆ, ಈಗಿನ ಸ್ಥಿತಿಯಲ್ಲಿ ಏನು ಮಾರ್ಗವಿದೆ ಎಂದು ಪರಿಣತರೇ ಹೇಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮುಂಬೈ: </strong>‘ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ (ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸಲು ಕೆಟ್ಟ ರಾಜಕಾರಣ ನಡೆಯುತ್ತಿದೆ. ಇಂತಹ ಯತ್ನಗಳು ಫಲ ನೀಡುವುದಿಲ್ಲ’ ಎಂದು ಶಿವಸೇನೆ ಸಂಸದ ಸಂಜಯ ರಾವುತ್ ಪ್ರತಿಪಾದಿಸಿದ್ದಾರೆ.</p>.<p class="title">‘ಸೇವೆಯಲ್ಲಿ ಮುಂದುವರಿಸಲು ₹ 2 ಕೋಟಿ ನೀಡುವಂತೆ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕೇಳಿದ್ದರು. ಅಲ್ಲದೆ, ಮತ್ತೊಬ್ಬ ಮಂತ್ರಿ ಅನಿಲ್ ಪರಬ್ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿಕೊಡಲು ತಿಳಿಸಿದ್ದರು’ ಎಂದು ಆರೋಪಿಸಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಪತ್ರದ ಹಿಂದೆಯೇ ರಾವುತ್ ಈ ಹೇಳಿಕೆ ನೀಡಿದ್ದಾರೆ.</p>.<p>ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಮತ್ತು ನಂತರ ಆ ವಾಹನದ ಮಾಲೀಕ ಮನ್ಸುಖ್ ಹಿರೇನ್ ಶಂಕಾಸ್ಪದ ಸಾವಿಗೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಸದ್ಯ ವಾಜೆ ಅವರನ್ನು ಬಂಧಿಸಿದ್ದಾರೆ.</p>.<p>ಈ ಮಧ್ಯೆ ವಾಜೆ ಆರೋಪವನ್ನು ಶಿವಸೇನೆ ನಾಯಕ ಪರಬ್ ತಳ್ಳಿಹಾಕಿದ್ದು, ‘ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ. ನಾನು ಬಾಬಾಸಾಹೇಬ್ ಠಾಕ್ರೆ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದೇನೆ, ಯಾವುದೇ ತಪ್ಪುಮಾಡಿಲ್ಲ’ ಎಂದು ಹೇಳಿದ್ದಾರೆ.</p>.<p>‘ಆರೋಪಿಗಳು ಈಗ ಜೈಲಿನಿಂದಲೇ ಪತ್ರ ಬರೆಯುವ ಹೊಸ ಪ್ರವೃತ್ತಿ ರಾಜ್ಯದಲ್ಲಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಐ.ಟಿ ಸೆಲ್ ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವ್ಯಕ್ತಿತ್ವಕ್ಕೆ ಕುಂದುತರುವ ಕೆಲಸ ಮಾಡುತ್ತಿವೆ.ಇಂಥ ಕೆಟ್ಟ ರಾಜಕಾರಣವನ್ನೇ ದೇಶ ಹಿಂದೆಂದೂ ನೋಡಿರಲಿಲ್ಲ’ ಎಂದು ರಾವುತ್ ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದರು.</p>.<p><strong>ಮತ್ತೆ ವೈದ್ಯಕೀಯ ಪರೀಕ್ಷೆ: </strong>ಈ ಮಧ್ಯೆ, ಸಚಿನ್ ವಾಜೆ ಅವರನ್ನುಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಎನ್ಐಎ ಅಧಿಕಾರಿಗಳು ಗುರುವಾರ 2ನೇ ಬಾರಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.</p>.<p><strong>ಶೀಘ್ರ ಇಬ್ಬರು ಸಚಿವರ ರಾಜೀನಾಮೆ: ರಾಜ್ಯ ಬಿಜೆಪಿ ಅಧ್ಯಕ್ಷ ಪಾಟೀಲ್ ಭವಿಷ್ಯ<br />ಮುಂಬೈ:</strong> ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಪರಿಸ್ಥಿತಿ ಸೂಕ್ತವಾಗಿದೆ. 15 ದಿನದಲ್ಲಿ ಇನ್ನು ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ’ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.</p>.<p>ಇಬ್ಬರು ಸಚಿವರ ವಿರುದ್ಧ ಸಚಿನ್ ವಾಜೆ ಪತ್ರ ಬರೆದ ಹಿನ್ನೆಲೆಯಲ್ಲಿ ಹೀಗೇ ಪ್ರತಿಕ್ರಿಯಿಸಿರುವ ಪಾಟೀಲ್ ಅವರು, ಭವಿಷ್ಯದಲ್ಲಿ ಏನಾಗಬಹುದು ಎಂಬುದು ಸಾಮಾನ್ಯರ ಊಹೆಗೂ ನಿಲುಕುತ್ತದೆ ಎಂದಿದ್ದಾರೆ.</p>.<p>‘ಇಬ್ಬರು ಸಚಿವರ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲು ಏರಲಿದ್ದು, ಆ ನಂತರ 15 ದಿನದಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಲೇಬೇಕಾಗುತ್ತದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆನಾನು ಒತ್ತಡ ಹೇರುವುದಿಲ್ಲ. ಆದರೆ, ಈಗಿನ ಸ್ಥಿತಿಯಲ್ಲಿ ಏನು ಮಾರ್ಗವಿದೆ ಎಂದು ಪರಿಣತರೇ ಹೇಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>