ಇದೇ ವೇಳೆ ವಿರೋಧ ಪಕ್ಷದ ಶಾಸಕರು ಎದ್ದು ನಿಂತು, ‘ಪಳನಿಸ್ವಾಮಿ ಅವರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು‘ ಎಂದು ಸಭಾಧಕ್ಷ ಅಪ್ಪಾವು ಅವರಲ್ಲಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ‘ಸಾಮಾನ್ಯ ಚರ್ಚೆಯ ವೇಳೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಈಗ ನೀವು ಕುಳಿತುಕೊಳ್ಳಿ‘ ಎಂದು ಹೇಳಿದರು. ಆದರೆ ಪಳನಿಸ್ವಾಮಿ ತಮ್ಮ ಮಾತುಗಳನ್ನು ಮುಂದುವರಿಸಿದರು.