<p><strong>ನವದೆಹಲಿ</strong>: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (.ಇ.ಡಿ) ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದಾರೆ.</p>.<p>ಜರ್ಮನಿಯ ರಾಬರ್ಟ್ ಬಾಷ್ ಅಕಾಡೆಮಿಯ ಫೆಲೋಷಿಪ್ ಹಿನ್ನೆಲೆಯಲ್ಲಿ ಹರ್ಷ ಮಂದರ್ ಅವರು ಬೆಳಿಗ್ಗೆ ಬರ್ಲಿನ್ಗೆ ಪ್ರಯಾಣ ಬೆಳಸಿದ ಕೆಲವೇ ಗಂಟೆಗಳ ನಂತರ, ಈ ಶೋಧ ಕಾರ್ಯ ನಡೆದಿದೆ.</p>.<p>ಹರ್ಷ ಮಂದರ್ ವಿರುದ್ಧ ದೆಹಲಿ ಪೊಲೀಸ್ನ ಆರ್ಥಿಕ ಅಪರಾಧಗಳ ವಿಭಾಗವು ಎಫ್ಐಆರ್ ದಾಖಲಿಸಿದೆ. ಈ ಎಫ್ಐಆರ್ನ ಆಧಾರದ ಮೇಲೆ ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿರುವ ಇ.ಡಿ. ಈಗ ಶೋಧ ನಡೆಸಿದೆ.</p>.<p>ವಸಂತ್ ಕುಂಜದಲ್ಲಿರುವ ಮನೆ, ಅಡ್ಚಿನಿಯಲ್ಲಿರುವ ಅವರ ಒಡೆತನದ ಎನ್ಜಿಒ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ನ (ಸಿಇಎಸ್) ಕಚೇರಿಯಲ್ಲಿ ಶೋಧ ನಡೆಸಿದ್ದಾರೆ.</p>.<p>ಮೆಹ್ರೌಲಿಯಲ್ಲಿರುವ ಸಿಇಎಸ್ ಒಡೆತನದ ಬಾಲಮಂದಿರಗಳ ಮೇಲೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡರು.</p>.<p>ಮಂದರ್ ಅವರು ಸಿಇಎಸ್ನ ನಿರ್ದೇಶಕರಾಗಿದ್ದಾರೆ. ಈ ಎನ್ಜಿಒ ‘ಉಮೀದ್ ಅಮನ್ ಘರ್’ ಹಾಗೂ ‘ಖುಷಿ ರೇನ್ಬೊ ಹೋಂ’ ಎಂಬ ಬಾಲಮಂದಿರಗಳನ್ನು ನಡೆಸುತ್ತಿದೆ. ರಾಜಕೀಯ ವಿಜ್ಞಾನಿ ಝೋಯಾ ಹಸನ್, ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಹಾಗೂ ಆರ್ಥಿಕ ತಜ್ಞೆ ದೀಪ ಸಿನ್ಹಾ ಅವರು ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರಾಗಿದ್ದಾರೆ.</p>.<p>ಈ ಬಾಲಮಂದಿರಗಳ ನಿರ್ವಹಣೆಯಲ್ಲಿ ಸಿಇಎಸ್ನಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಆರೋಪಿಸಿತ್ತು.</p>.<p>‘ಸಿಎಎ ವಿರೋಧಿಸಿ ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ನಡೆದ ಸ್ಥಳಗಳಿಗೆ ತಮ್ಮನ್ನು ಸಿಇಎಸ್ ಸದಸ್ಯರು ಕರೆದೊಯ್ದಿದ್ದರು ಎಂಬುದಾಗಿ ಬಾಲಮಂದಿರಗಳಲ್ಲಿರುವ ಮಕ್ಕಳು ತಿಳಿಸಿದ್ದಾರೆ’ ಎಂಬುದಾಗಿ ಎನ್ಸಿಪಿಸಿಆರ್ ಆರೋಪಿಸಿತ್ತು.</p>.<p>ಈ ಸಂಬಂಧ ಎನ್ಸಿಪಿಸಿಆರ್ ಸಲ್ಲಿಸಿದ ದೂರಿನ ಅನ್ವಯ ದೆಹಲಿ ಪೊಲೀಸರು ಕಳೆದ ಫೆಬ್ರುವರಿಯಲ್ಲಿ ಸಿಇಎಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<p>ಆದರೆ, ಎನ್ಸಿಪಿಸಿಆರ್ನ ಆರೋಪಗಳನ್ನು ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಡಿಸಿಪಿಸಿಆರ್) ತಳ್ಳಿ ಹಾಕಿತ್ತು.</p>.<p>‘ರಾಜಕೀಯ ಪ್ರತೀಕಾರದಿಂದಾಗಿ ತನ್ನ ಒಡೆತನದ ಎನ್ಜಿಒ ತೊಂದರೆ ಅನುಭವಿಸುತ್ತಿದೆ’ ಎಂಬ ಹರ್ಷ ಮಂದರ್ ಅವರ ಹೇಳಿಕೆಯನ್ನು ಡಿಸಿಪಿಸಿಆರ್ ಬೆಂಬಲಿಸಿತ್ತು.</p>.<p><strong>ಆಕ್ರೋಶ: </strong>ಹರ್ಷ ಮಂದರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಕೈಗೊಂಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.</p>.<p>ವಿರೋಧ ಪಕ್ಷಗಳ ಮುಖಂಡರು, ಸಾಮಾಜಿಕ ಹೋರಾಟಗಾರರು ಹಾಗೂ ಹರ್ಷ ಮಂದರ್ ಅವರ ಸ್ನೇಹಿತರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ನಾನು ಕಳೆದ 40 ವರ್ಷಗಳಿಂದ ಹರ್ಷ ಮಂದರ್ ಅವರನ್ನು ಬಲ್ಲೆ. ಮಧ್ಯಪ್ರದೇಶ ಕೇಡರ್ನ ಅಧಿಕಾರಿಯಾಗಿದ್ದ ಹರ್ಷ, ಪ್ರಾಮಾಣಿಕ ವ್ಯಕ್ತಿ’ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.</p>.<p>‘ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡುವವರನ್ನು ಹಾಗೂ ಸಂಘಟನೆಗಳನ್ನು ತುಳಿಯುವುದಕ್ಕಾಗಿ ಇ.ಡಿ ಯಂತಹ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೋರಾಟಗಾರ ಹಾಗೂ ವಕೀಲ ಪ್ರಶಾಂತಭೂಷಣ್ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (.ಇ.ಡಿ) ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದಾರೆ.</p>.<p>ಜರ್ಮನಿಯ ರಾಬರ್ಟ್ ಬಾಷ್ ಅಕಾಡೆಮಿಯ ಫೆಲೋಷಿಪ್ ಹಿನ್ನೆಲೆಯಲ್ಲಿ ಹರ್ಷ ಮಂದರ್ ಅವರು ಬೆಳಿಗ್ಗೆ ಬರ್ಲಿನ್ಗೆ ಪ್ರಯಾಣ ಬೆಳಸಿದ ಕೆಲವೇ ಗಂಟೆಗಳ ನಂತರ, ಈ ಶೋಧ ಕಾರ್ಯ ನಡೆದಿದೆ.</p>.<p>ಹರ್ಷ ಮಂದರ್ ವಿರುದ್ಧ ದೆಹಲಿ ಪೊಲೀಸ್ನ ಆರ್ಥಿಕ ಅಪರಾಧಗಳ ವಿಭಾಗವು ಎಫ್ಐಆರ್ ದಾಖಲಿಸಿದೆ. ಈ ಎಫ್ಐಆರ್ನ ಆಧಾರದ ಮೇಲೆ ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿರುವ ಇ.ಡಿ. ಈಗ ಶೋಧ ನಡೆಸಿದೆ.</p>.<p>ವಸಂತ್ ಕುಂಜದಲ್ಲಿರುವ ಮನೆ, ಅಡ್ಚಿನಿಯಲ್ಲಿರುವ ಅವರ ಒಡೆತನದ ಎನ್ಜಿಒ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ನ (ಸಿಇಎಸ್) ಕಚೇರಿಯಲ್ಲಿ ಶೋಧ ನಡೆಸಿದ್ದಾರೆ.</p>.<p>ಮೆಹ್ರೌಲಿಯಲ್ಲಿರುವ ಸಿಇಎಸ್ ಒಡೆತನದ ಬಾಲಮಂದಿರಗಳ ಮೇಲೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡರು.</p>.<p>ಮಂದರ್ ಅವರು ಸಿಇಎಸ್ನ ನಿರ್ದೇಶಕರಾಗಿದ್ದಾರೆ. ಈ ಎನ್ಜಿಒ ‘ಉಮೀದ್ ಅಮನ್ ಘರ್’ ಹಾಗೂ ‘ಖುಷಿ ರೇನ್ಬೊ ಹೋಂ’ ಎಂಬ ಬಾಲಮಂದಿರಗಳನ್ನು ನಡೆಸುತ್ತಿದೆ. ರಾಜಕೀಯ ವಿಜ್ಞಾನಿ ಝೋಯಾ ಹಸನ್, ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಹಾಗೂ ಆರ್ಥಿಕ ತಜ್ಞೆ ದೀಪ ಸಿನ್ಹಾ ಅವರು ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರಾಗಿದ್ದಾರೆ.</p>.<p>ಈ ಬಾಲಮಂದಿರಗಳ ನಿರ್ವಹಣೆಯಲ್ಲಿ ಸಿಇಎಸ್ನಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಆರೋಪಿಸಿತ್ತು.</p>.<p>‘ಸಿಎಎ ವಿರೋಧಿಸಿ ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ನಡೆದ ಸ್ಥಳಗಳಿಗೆ ತಮ್ಮನ್ನು ಸಿಇಎಸ್ ಸದಸ್ಯರು ಕರೆದೊಯ್ದಿದ್ದರು ಎಂಬುದಾಗಿ ಬಾಲಮಂದಿರಗಳಲ್ಲಿರುವ ಮಕ್ಕಳು ತಿಳಿಸಿದ್ದಾರೆ’ ಎಂಬುದಾಗಿ ಎನ್ಸಿಪಿಸಿಆರ್ ಆರೋಪಿಸಿತ್ತು.</p>.<p>ಈ ಸಂಬಂಧ ಎನ್ಸಿಪಿಸಿಆರ್ ಸಲ್ಲಿಸಿದ ದೂರಿನ ಅನ್ವಯ ದೆಹಲಿ ಪೊಲೀಸರು ಕಳೆದ ಫೆಬ್ರುವರಿಯಲ್ಲಿ ಸಿಇಎಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<p>ಆದರೆ, ಎನ್ಸಿಪಿಸಿಆರ್ನ ಆರೋಪಗಳನ್ನು ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಡಿಸಿಪಿಸಿಆರ್) ತಳ್ಳಿ ಹಾಕಿತ್ತು.</p>.<p>‘ರಾಜಕೀಯ ಪ್ರತೀಕಾರದಿಂದಾಗಿ ತನ್ನ ಒಡೆತನದ ಎನ್ಜಿಒ ತೊಂದರೆ ಅನುಭವಿಸುತ್ತಿದೆ’ ಎಂಬ ಹರ್ಷ ಮಂದರ್ ಅವರ ಹೇಳಿಕೆಯನ್ನು ಡಿಸಿಪಿಸಿಆರ್ ಬೆಂಬಲಿಸಿತ್ತು.</p>.<p><strong>ಆಕ್ರೋಶ: </strong>ಹರ್ಷ ಮಂದರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಕೈಗೊಂಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.</p>.<p>ವಿರೋಧ ಪಕ್ಷಗಳ ಮುಖಂಡರು, ಸಾಮಾಜಿಕ ಹೋರಾಟಗಾರರು ಹಾಗೂ ಹರ್ಷ ಮಂದರ್ ಅವರ ಸ್ನೇಹಿತರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ನಾನು ಕಳೆದ 40 ವರ್ಷಗಳಿಂದ ಹರ್ಷ ಮಂದರ್ ಅವರನ್ನು ಬಲ್ಲೆ. ಮಧ್ಯಪ್ರದೇಶ ಕೇಡರ್ನ ಅಧಿಕಾರಿಯಾಗಿದ್ದ ಹರ್ಷ, ಪ್ರಾಮಾಣಿಕ ವ್ಯಕ್ತಿ’ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.</p>.<p>‘ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡುವವರನ್ನು ಹಾಗೂ ಸಂಘಟನೆಗಳನ್ನು ತುಳಿಯುವುದಕ್ಕಾಗಿ ಇ.ಡಿ ಯಂತಹ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೋರಾಟಗಾರ ಹಾಗೂ ವಕೀಲ ಪ್ರಶಾಂತಭೂಷಣ್ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>