'ಜಾರಿ ನಿರ್ದೇಶನಾಲಯವು ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು 2015ರಲ್ಲೇ ಮುಕ್ತಾಯಗೊಳಿಸಿದೆ. ಆದರೆ, ಸರ್ಕಾರಕ್ಕೆ ಅದನ್ನು ಸಹಿಸಲಾರದೆ, ಸಂಬಂಧಿಸಿದ ಇ.ಡಿ ಅಧಿಕಾರಗಳನ್ನು ತೆಗೆದುಹಾಕಿದೆ. ಹೊಸ ಅಧಿಕಾರಿಗಳನ್ನು ನಿಯೋಜಿಸಿ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಿದೆ. ಹಣದುಬ್ಬರ ಮತ್ತು ಇತರೆ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಮಾಡಲಾಗಿದೆ' ಎಂದು ಸಿಂಘ್ವಿ ಆರೋಪಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.