ಗಾಂಧಿನಗರ: ತೀವ್ರಗೊಂಡಿರುವ 'ತೌತೆ' ಚಂಡಮಾರುತವು ಸೋಮವಾರ ರಾತ್ರಿ ಗುಜರಾತ್ ಕರಾವಳಿಯನ್ನು ಪ್ರವೇಶಿಸಿದೆ. ಮಳೆ, ಗಾಳಿಯ ಅಬ್ಬರವು ಮುಂದಿನ ಎರಡು ಗಂಟೆಗಳು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಗಾಂಧಿನಗರದಲ್ಲಿರುವ ನಿಯಂತ್ರಣ ಕೇಂದ್ರದಲ್ಲಿ ತೌತೆ ಚಂಡಮಾರುತದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕರಾವಳಿ ಪ್ರದೇಶದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.
#WATCH | Earlier visuals from Veraval - Somnath in Gujarat as the sea turned rough in wake of #CycloneTauktae.
Extremely severe cyclonic storm Tauktae lies close to the Gujarat coast. The landfall process has started and will continue during next 2 hours, says IMD. pic.twitter.com/7KojZcXS27
ಭಾರತೀಯ ಸೇನೆಯ 180 ತಂಡಗಳು ಹಾಗೂ ಒಂಬತ್ತು ಎಂಜಿನಿಯರ್ ಕಾರ್ಯಪಡೆಗಳು ಚಂಡಮಾರುತದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ. ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರೊಂದಿಗೆ ವಲಯದ ಮುಖ್ಯಕಚೇರಿ, ವಲಯದ ಕಮಾಂಡರ್ಗಳು ಸಂಪರ್ಕದಲ್ಲಿದ್ದಾರೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕನಿಷ್ಠ 1.50 ಲಕ್ಷ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
ಗುಜರಾತ್ನಲ್ಲಿ 1998ರಲ್ಲಿ ಅಬ್ಬರಿಸಿದ್ದ ಭಾರೀ ಚಂಡಮಾರುತದಲ್ಲಿ ಸುಮಾರು 4,000 ಜನರು ಸಾವಿಗೀಡಾಗಿದ್ದರು ಹಾಗೂ ನೂರಾರು ಕೋಟಿ ಮೌಲ್ಯದ ಆಸ್ತಿ–ಪಾಸ್ತಿಗೆ ಹಾನಿಯಾಗಿತ್ತು.