<p class="title"><strong>ನವದೆಹಲಿ:</strong> ‘ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಪ್ರಚಾರ ಕಾರ್ಯಗಳು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದರ ಮೇಲೂ ಪರಿಣಾಮ ಬೀರುತ್ತಿವೆ’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.</p>.<p class="bodytext">ಜರ್ಮನಿ ವಿದೇಶಾಂಗ ಸಚಿವೆ ಅನ್ನಲೀನಾ ಬೇರ್ಬಾಕ್ ನೇತೃತ್ವದ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಪ್ರವೃತ್ತಿ ಚುನಾವಣೆ ನಿರ್ವಹಣೆ ಕುರಿತು ಯಾವುದೇ ಸಂಸ್ಥೆಗೆ ಸಾಮಾನ್ಯ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p class="bodytext">ನಿಯೋಗಕ್ಕೆ ಭಾರತದ ಚುನಾವಣಾ ವ್ಯವಸ್ಥೆಯ ಚಿತ್ರಣ ನೀಡಿದ ಅವರು, ‘ಚುನಾವಣೆ ಅತಿದೊಡ್ಡದಾದ ಕಸರತ್ತು. 95 ಕೋಟಿ ಮತದಾರರಿದ್ದು, 11 ಲಕ್ಷ ಮತಗಟ್ಟೆಗಳಿವೆ.ಚುನಾವಣೆಗೆ ಒಂದು ಕೋಟಿ ಸಿಬ್ಬಂದಿ ನಿಯೋಜಿಸಲಾಗುತ್ತದೆ’ ಎಂದರು.</p>.<p>ಚುನಾವಣಾ ಆಯೋಗವು ಈ ಕುರಿತ ಹೇಳಿಕೆಯಲ್ಲಿ ‘ಸಾಗಣೆ, ಸಂಚಾರದ ಸವಾಲಿನ ಜೊತೆಗೆ ಜಾಲತಾಣಗಳಲ್ಲಿ ನಡೆಯುವ ನಕಲಿ ಪ್ರಚಾರಗಳು ಆಯೋಗಕ್ಕೆ ಇತ್ತೀಚಿಗೆ ಎದುರಾಗುತ್ತಿರುವ ಸಾಮಾನ್ಯ ಸವಾಲಾಗಿವೆ ಎಂದು ಆಯುಕ್ತರು ತಿಳಿಸಿದರು’ ಎಂದಿದೆ.</p>.<p>ಜರ್ಮನಿಯ ವಿದೇಶಾಂಗ ಸಚಿವೆಯು ಇದೇ ಸಂದರ್ಭದಲ್ಲಿ ದೇಶದಲ್ಲಿನ ಚುನಾವಣಾ ಕಾರ್ಯಶೈಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ನಿಯೋಗಕ್ಕೆ ಪ್ರಾತ್ಯಕ್ಷಿಕೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ‘ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಪ್ರಚಾರ ಕಾರ್ಯಗಳು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದರ ಮೇಲೂ ಪರಿಣಾಮ ಬೀರುತ್ತಿವೆ’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.</p>.<p class="bodytext">ಜರ್ಮನಿ ವಿದೇಶಾಂಗ ಸಚಿವೆ ಅನ್ನಲೀನಾ ಬೇರ್ಬಾಕ್ ನೇತೃತ್ವದ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಪ್ರವೃತ್ತಿ ಚುನಾವಣೆ ನಿರ್ವಹಣೆ ಕುರಿತು ಯಾವುದೇ ಸಂಸ್ಥೆಗೆ ಸಾಮಾನ್ಯ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p class="bodytext">ನಿಯೋಗಕ್ಕೆ ಭಾರತದ ಚುನಾವಣಾ ವ್ಯವಸ್ಥೆಯ ಚಿತ್ರಣ ನೀಡಿದ ಅವರು, ‘ಚುನಾವಣೆ ಅತಿದೊಡ್ಡದಾದ ಕಸರತ್ತು. 95 ಕೋಟಿ ಮತದಾರರಿದ್ದು, 11 ಲಕ್ಷ ಮತಗಟ್ಟೆಗಳಿವೆ.ಚುನಾವಣೆಗೆ ಒಂದು ಕೋಟಿ ಸಿಬ್ಬಂದಿ ನಿಯೋಜಿಸಲಾಗುತ್ತದೆ’ ಎಂದರು.</p>.<p>ಚುನಾವಣಾ ಆಯೋಗವು ಈ ಕುರಿತ ಹೇಳಿಕೆಯಲ್ಲಿ ‘ಸಾಗಣೆ, ಸಂಚಾರದ ಸವಾಲಿನ ಜೊತೆಗೆ ಜಾಲತಾಣಗಳಲ್ಲಿ ನಡೆಯುವ ನಕಲಿ ಪ್ರಚಾರಗಳು ಆಯೋಗಕ್ಕೆ ಇತ್ತೀಚಿಗೆ ಎದುರಾಗುತ್ತಿರುವ ಸಾಮಾನ್ಯ ಸವಾಲಾಗಿವೆ ಎಂದು ಆಯುಕ್ತರು ತಿಳಿಸಿದರು’ ಎಂದಿದೆ.</p>.<p>ಜರ್ಮನಿಯ ವಿದೇಶಾಂಗ ಸಚಿವೆಯು ಇದೇ ಸಂದರ್ಭದಲ್ಲಿ ದೇಶದಲ್ಲಿನ ಚುನಾವಣಾ ಕಾರ್ಯಶೈಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ನಿಯೋಗಕ್ಕೆ ಪ್ರಾತ್ಯಕ್ಷಿಕೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>