<p><strong>ನವದೆಹಲಿ</strong>: ಕೃಷಿ ಮಾರುಕಟ್ಟೆ ಕಾಯ್ದೆಗಳಿಂದ ರೈತರಿಗೆ ಆಗುವ ಲಾಭಗಳನ್ನು ಜನರಿಗೆ ಮನದಟ್ಟು ಮಾಡಲು ಬಿಜೆಪಿ ಮುಂದಾಗಿದೆ.</p>.<p>ಬಿಜೆಪಿ ಸಂಸದ ಹಾಗೂ ಸೂಫಿ ಗಾಯಕ ಹನ್ಸ್ರಾಜ್ ಹನ್ಸ್ ಅವರು ವಾಯವ್ಯ ದೆಹಲಿಯ ಹರಿಯಾಣ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಭೇಟಿ ಮಾಡುತ್ತಿದ್ದಾರೆ.</p>.<p>ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧೂರಿ ಅವರ ಒಡಗೂಡಿ ಭಾನುವಾರ ‘ಕಿಸಾನ್ ಕಾನೂನ್ ಕಲ್ಯಾಣ್ಸಮರ್ಥನ್ ಯಾತ್ರಾ’ದಲ್ಲಿ 9 ಕಿಲೋಮೀಟರ್ ಸಂಚಾರ ನಡೆಸಿದರು.</p>.<p>ತಮ್ಮ ಮತಕ್ಷೇತ್ರ ವ್ಯಾಪ್ತಿಯ ಜೈತ್ಪುರ, ಬಂಡಾರ್ಪುರ್, ಮೀತಾ ಪುರ್, ಮೊಲಾರ್ಬಂದ್ ಮೊದಲಾದ ಹಳ್ಳಿಗಳಲ್ಲಿ ಯಾತ್ರೆ ಸಾಗಿತು.</p>.<p>ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಬರೆದಿರುವ ಪತ್ರವನ್ನು ಕರಪತ್ರದ ರೂಪದಲ್ಲಿ ಹಳ್ಳಿಗಳಲ್ಲಿ ಹಂಚಲಾಯಿತು. ‘ಹೊಸ ಕಾನೂನುಗಳು ಎಷ್ಟುಪ್ರಯೋಜನಗಳನ್ನು ಹೊಂದಿವೆ ಎಂಬುದು ಈ ಕರಪತ್ರಗಳನ್ನುಓದಿದ ಬಳಿಕ ರೈತರಿಗೆ ತಿಳಿಯಲಿದೆ. ಈಗಿರುವ ಪ್ರತಿಭಟನೆಯ ವಾತಾವರಣ ಸಕಾರಾ ತ್ಮಕವಾಗಿ ಬದಲಾಗಲಿದೆ. ರೈತರ ಪ್ರತಿ ಭಟನೆಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಹನ್ಸ್ರಾಜ್ ಹೇಳಿದ್ದಾರೆ.</p>.<p>ಸಚಿವ ತೋಮರ್ ಅವರು ರೈತರಿಗೆ 8 ಪುಟಗಳ ಪತ್ರ ಬರೆದು, ಎಲ್ಲ ಬೇಡಿಕೆಗಳನ್ನೂ ಪರಿಗಣಿಸುವ ಭರವಸೆ ನೀಡಿದ್ದರು. ಹನ್ಸ್ರಾಜ್ ಅವರು ತಮ್ಮ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಲು ನಿರ್ಧರಿಸಿದ್ದಾರೆ. ಪಕ್ಷದ ವಾರ್ಡ್ ಘಟಕಗಳು ಕರಪತ್ರ<br />ಗಳನ್ನು ಜನರಿಗೆ ಮುಟ್ಟಿಸಲಿವೆ.</p>.<p><strong>ಪ್ರಧಾನಿ ಸಂವಾದ:</strong> ಡಿಸೆಂಬರ್ 25ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ರೈತರ ಜೊತೆ ಪ್ರಧಾನಿ ನರೇಂದ್ರಮೋದಿ ಅವರು ಸಂವಾದ ನಡೆಸಲಿದ್ದಾರೆ. ಅಲ್ಲದೆ, ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಉತ್ತರ ಪ್ರದೇಶದ 2,500 ಸ್ಥಳಗಳಲ್ಲಿ ಕಿಸಾನ್ ಸಂವಾದ ಏರ್ಪಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಸಂಬಂಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಹಾಗೂ ಪಕ್ಷದ ನಾಯಕ ರಾಧಾಮೋಹನ್ಸಿಂಗ್ ಅವರು ಪಕ್ಷದ ರಾಜ್ಯ ಮುಖಂಡರ ಜೊತೆ ವರ್ಚ್ಯುವಲ್ ಸಭೆ ನಡೆಸಿದ್ದಾರೆ.</p>.<p class="Subhead"><strong>25ನೇ ದಿನಕ್ಕೆ ಪ್ರತಿಭಟನೆ: </strong>ದೆಹಲಿ ಯಲ್ಲಿ ರೈತರ ಪ್ರತಿಭಟನೆ 25ನೇ ದಿನಕ್ಕೆ ಕಾಲಿರಿಸಿದ್ದು, ಕೊರೆಯುವ ಚಳಿಯಲ್ಲೂ ಮುಂದುವರಿದಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಭಾನುವಾರ 3.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಈ ಋತುವಿನ ಅತಿಕಡಿಮೆ ಉಷ್ಣಾಂಶವಾಗಿದೆ. ಭಾನುವಾರ ಶೀತಗಾಳಿ ಬೀಸಿದೆ ಎಂದು ಇಲಾಖೆ ತಿಳಿಸಿದೆ.</p>.<p class="Subhead">ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗಾಗಿ ವೈದ್ಯರು ಉಚಿತ ನೇತ್ರತಪಾಸಣೆ ಶಿಬಿರ ಆಯೋಜಿಸಿದ್ದಾರೆ. ಪಂಜಾಬ್ನ ಗರಶಂಕರ್ನಿಂದ ವೈದ್ಯರ ತಂಡ ನಾಲ್ಕನೇ ಬಾರಿ ಇಲ್ಲಿಗೆ ಭೇಟಿ ನೀಡಿದೆ.</p>.<p class="Subhead"><strong>ಉಪವಾಸ ಸತ್ಯಾಗ್ರಹ ಇಂದು</strong><br />‘ಪ್ರತಿಭಟನೆ ನಡೆಯುತ್ತಿರುವ ಎಲ್ಲಾ ಕೆಂದ್ರಗಳಲ್ಲೂ ರೈತರು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ’ ಎಂದು ಸ್ವರಾಜ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.</p>.<p>ದೇಶದ ಇತರ ಭಾಗಗಳಲ್ಲಿರುವ ರೈತರೂ ಒಂದು ದಿನ ಉಪವಾಸ ನಡೆಸುವ ಮೂಲಕ ಪ್ರತಿಭಟನಾನಿರತರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.</p>.<p>ಡಿ.25ರಿಂದ 27ರವರೆಗೆ ರೈತರು ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ತಡೆಯಲಿದ್ದಾರೆ ಎಂದು ರೈತ ಮುಖಂಡ ಜಗಜೀತ್ ಸಿಂಗ್ ದಲೆವಾಲಾ ತಿಳಿಸಿದರು.</p>.<p><strong>ಶೀಘ್ರ ಮಾತುಕತೆ: ಅಮಿತ್ ಶಾ</strong><br />ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ಎರಡು ದಿನದೊಳಗೆ ರೈತ ಪ್ರತಿನಿಧಿಗಳನ್ನು ಭೇಟಿಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.</p>.<p>‘ಯಾವ ಸಮಯದಲ್ಲಿ ಭೇಟಿಯಾಗುತ್ತಾರೆ ಎಂಬುದು ನಿಖರವಾಗಿ ನನಗೆ ತಿಳಿದಿಲ್ಲ. ಆದರೆ, ಸಚಿವರು ನಾಳೆ ಅಥವಾ ನಾಡಿದ್ದು ರೈತ ಪ್ರತಿನಿಧಿಗಳನ್ನು ಭೇಟಿಮಾಡಲಿದ್ದಾರೆ’ ಎಂದು ಶಾ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.</p>.<p><strong>‘ಕಾಯ್ದೆ ತಿದ್ದುಪಡಿಗೆ ಸಿದ್ಧ, ರದ್ದುಪಡಿಸುವುದಿಲ್ಲ’</strong><br />ಬೆಂಗಳೂರು: ಇತ್ತೀಚೆಗೆ ಜಾರಿಗೊಳಿಸಿರುವ ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಒಪ್ಪುವುದಿಲ್ಲ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದರು.</p>.<p>ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಸಂಬಂಧಿ ಕಾಯ್ದೆಗಳ ಬದಲಾವಣೆಯಿಂದ ರೈತರಿಗೆ ಅನುಕೂಲವಾಗಲಿದೆ. ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದರು.</p>.<p>ರೈತರ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಚರ್ಚೆಯ ಬಳಿಕ ಕಾಯ್ದೆಗಳ ತಿದ್ದುಪಡಿ ಕುರಿತು ನಿರ್ಧಾರಕ್ಕೆ ಬರಲಾಗುವುದು. ಆದರೆ, ಈಗಾಗಲೇ ರೈತರ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ಟೀಕಿಸಿದರು.</p>.<p>**</p>.<p>ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಪಡಿಸಲಾಗಿದೆ. ವಿಸ್ತಾ ಪ್ರಾಜೆಕ್ಟ್ಗೆ ಸಾವಿರ ಕೋಟಿ ಸುರಿಯುವ ಔಚಿತ್ಯವೇನು?<br /><em><strong>-ಸಂಜಯ್ ರಾವುತ್, ಶಿವಸೇನಾ ಸಂಸದ</strong></em></p>.<p>**</p>.<p>ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜಕೀಯ ಬೆರೆತಿದೆ. ನಿಜವಾದ ರೈತರಿಗೆ ಕಳೆದ ಆರು ತಿಂಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ತೃಪ್ತಿಯಿದೆ.<br /><em><strong>-ವಿ.ಕೆ. ಸಿಂಗ್, ಕೇಂದ್ರ ಸಚಿವ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೃಷಿ ಮಾರುಕಟ್ಟೆ ಕಾಯ್ದೆಗಳಿಂದ ರೈತರಿಗೆ ಆಗುವ ಲಾಭಗಳನ್ನು ಜನರಿಗೆ ಮನದಟ್ಟು ಮಾಡಲು ಬಿಜೆಪಿ ಮುಂದಾಗಿದೆ.</p>.<p>ಬಿಜೆಪಿ ಸಂಸದ ಹಾಗೂ ಸೂಫಿ ಗಾಯಕ ಹನ್ಸ್ರಾಜ್ ಹನ್ಸ್ ಅವರು ವಾಯವ್ಯ ದೆಹಲಿಯ ಹರಿಯಾಣ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಭೇಟಿ ಮಾಡುತ್ತಿದ್ದಾರೆ.</p>.<p>ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧೂರಿ ಅವರ ಒಡಗೂಡಿ ಭಾನುವಾರ ‘ಕಿಸಾನ್ ಕಾನೂನ್ ಕಲ್ಯಾಣ್ಸಮರ್ಥನ್ ಯಾತ್ರಾ’ದಲ್ಲಿ 9 ಕಿಲೋಮೀಟರ್ ಸಂಚಾರ ನಡೆಸಿದರು.</p>.<p>ತಮ್ಮ ಮತಕ್ಷೇತ್ರ ವ್ಯಾಪ್ತಿಯ ಜೈತ್ಪುರ, ಬಂಡಾರ್ಪುರ್, ಮೀತಾ ಪುರ್, ಮೊಲಾರ್ಬಂದ್ ಮೊದಲಾದ ಹಳ್ಳಿಗಳಲ್ಲಿ ಯಾತ್ರೆ ಸಾಗಿತು.</p>.<p>ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಬರೆದಿರುವ ಪತ್ರವನ್ನು ಕರಪತ್ರದ ರೂಪದಲ್ಲಿ ಹಳ್ಳಿಗಳಲ್ಲಿ ಹಂಚಲಾಯಿತು. ‘ಹೊಸ ಕಾನೂನುಗಳು ಎಷ್ಟುಪ್ರಯೋಜನಗಳನ್ನು ಹೊಂದಿವೆ ಎಂಬುದು ಈ ಕರಪತ್ರಗಳನ್ನುಓದಿದ ಬಳಿಕ ರೈತರಿಗೆ ತಿಳಿಯಲಿದೆ. ಈಗಿರುವ ಪ್ರತಿಭಟನೆಯ ವಾತಾವರಣ ಸಕಾರಾ ತ್ಮಕವಾಗಿ ಬದಲಾಗಲಿದೆ. ರೈತರ ಪ್ರತಿ ಭಟನೆಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಹನ್ಸ್ರಾಜ್ ಹೇಳಿದ್ದಾರೆ.</p>.<p>ಸಚಿವ ತೋಮರ್ ಅವರು ರೈತರಿಗೆ 8 ಪುಟಗಳ ಪತ್ರ ಬರೆದು, ಎಲ್ಲ ಬೇಡಿಕೆಗಳನ್ನೂ ಪರಿಗಣಿಸುವ ಭರವಸೆ ನೀಡಿದ್ದರು. ಹನ್ಸ್ರಾಜ್ ಅವರು ತಮ್ಮ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಲು ನಿರ್ಧರಿಸಿದ್ದಾರೆ. ಪಕ್ಷದ ವಾರ್ಡ್ ಘಟಕಗಳು ಕರಪತ್ರ<br />ಗಳನ್ನು ಜನರಿಗೆ ಮುಟ್ಟಿಸಲಿವೆ.</p>.<p><strong>ಪ್ರಧಾನಿ ಸಂವಾದ:</strong> ಡಿಸೆಂಬರ್ 25ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ರೈತರ ಜೊತೆ ಪ್ರಧಾನಿ ನರೇಂದ್ರಮೋದಿ ಅವರು ಸಂವಾದ ನಡೆಸಲಿದ್ದಾರೆ. ಅಲ್ಲದೆ, ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಉತ್ತರ ಪ್ರದೇಶದ 2,500 ಸ್ಥಳಗಳಲ್ಲಿ ಕಿಸಾನ್ ಸಂವಾದ ಏರ್ಪಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಸಂಬಂಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಹಾಗೂ ಪಕ್ಷದ ನಾಯಕ ರಾಧಾಮೋಹನ್ಸಿಂಗ್ ಅವರು ಪಕ್ಷದ ರಾಜ್ಯ ಮುಖಂಡರ ಜೊತೆ ವರ್ಚ್ಯುವಲ್ ಸಭೆ ನಡೆಸಿದ್ದಾರೆ.</p>.<p class="Subhead"><strong>25ನೇ ದಿನಕ್ಕೆ ಪ್ರತಿಭಟನೆ: </strong>ದೆಹಲಿ ಯಲ್ಲಿ ರೈತರ ಪ್ರತಿಭಟನೆ 25ನೇ ದಿನಕ್ಕೆ ಕಾಲಿರಿಸಿದ್ದು, ಕೊರೆಯುವ ಚಳಿಯಲ್ಲೂ ಮುಂದುವರಿದಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಭಾನುವಾರ 3.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಈ ಋತುವಿನ ಅತಿಕಡಿಮೆ ಉಷ್ಣಾಂಶವಾಗಿದೆ. ಭಾನುವಾರ ಶೀತಗಾಳಿ ಬೀಸಿದೆ ಎಂದು ಇಲಾಖೆ ತಿಳಿಸಿದೆ.</p>.<p class="Subhead">ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗಾಗಿ ವೈದ್ಯರು ಉಚಿತ ನೇತ್ರತಪಾಸಣೆ ಶಿಬಿರ ಆಯೋಜಿಸಿದ್ದಾರೆ. ಪಂಜಾಬ್ನ ಗರಶಂಕರ್ನಿಂದ ವೈದ್ಯರ ತಂಡ ನಾಲ್ಕನೇ ಬಾರಿ ಇಲ್ಲಿಗೆ ಭೇಟಿ ನೀಡಿದೆ.</p>.<p class="Subhead"><strong>ಉಪವಾಸ ಸತ್ಯಾಗ್ರಹ ಇಂದು</strong><br />‘ಪ್ರತಿಭಟನೆ ನಡೆಯುತ್ತಿರುವ ಎಲ್ಲಾ ಕೆಂದ್ರಗಳಲ್ಲೂ ರೈತರು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ’ ಎಂದು ಸ್ವರಾಜ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.</p>.<p>ದೇಶದ ಇತರ ಭಾಗಗಳಲ್ಲಿರುವ ರೈತರೂ ಒಂದು ದಿನ ಉಪವಾಸ ನಡೆಸುವ ಮೂಲಕ ಪ್ರತಿಭಟನಾನಿರತರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.</p>.<p>ಡಿ.25ರಿಂದ 27ರವರೆಗೆ ರೈತರು ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ತಡೆಯಲಿದ್ದಾರೆ ಎಂದು ರೈತ ಮುಖಂಡ ಜಗಜೀತ್ ಸಿಂಗ್ ದಲೆವಾಲಾ ತಿಳಿಸಿದರು.</p>.<p><strong>ಶೀಘ್ರ ಮಾತುಕತೆ: ಅಮಿತ್ ಶಾ</strong><br />ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ಎರಡು ದಿನದೊಳಗೆ ರೈತ ಪ್ರತಿನಿಧಿಗಳನ್ನು ಭೇಟಿಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.</p>.<p>‘ಯಾವ ಸಮಯದಲ್ಲಿ ಭೇಟಿಯಾಗುತ್ತಾರೆ ಎಂಬುದು ನಿಖರವಾಗಿ ನನಗೆ ತಿಳಿದಿಲ್ಲ. ಆದರೆ, ಸಚಿವರು ನಾಳೆ ಅಥವಾ ನಾಡಿದ್ದು ರೈತ ಪ್ರತಿನಿಧಿಗಳನ್ನು ಭೇಟಿಮಾಡಲಿದ್ದಾರೆ’ ಎಂದು ಶಾ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.</p>.<p><strong>‘ಕಾಯ್ದೆ ತಿದ್ದುಪಡಿಗೆ ಸಿದ್ಧ, ರದ್ದುಪಡಿಸುವುದಿಲ್ಲ’</strong><br />ಬೆಂಗಳೂರು: ಇತ್ತೀಚೆಗೆ ಜಾರಿಗೊಳಿಸಿರುವ ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಒಪ್ಪುವುದಿಲ್ಲ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದರು.</p>.<p>ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಸಂಬಂಧಿ ಕಾಯ್ದೆಗಳ ಬದಲಾವಣೆಯಿಂದ ರೈತರಿಗೆ ಅನುಕೂಲವಾಗಲಿದೆ. ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದರು.</p>.<p>ರೈತರ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಚರ್ಚೆಯ ಬಳಿಕ ಕಾಯ್ದೆಗಳ ತಿದ್ದುಪಡಿ ಕುರಿತು ನಿರ್ಧಾರಕ್ಕೆ ಬರಲಾಗುವುದು. ಆದರೆ, ಈಗಾಗಲೇ ರೈತರ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ಟೀಕಿಸಿದರು.</p>.<p>**</p>.<p>ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಪಡಿಸಲಾಗಿದೆ. ವಿಸ್ತಾ ಪ್ರಾಜೆಕ್ಟ್ಗೆ ಸಾವಿರ ಕೋಟಿ ಸುರಿಯುವ ಔಚಿತ್ಯವೇನು?<br /><em><strong>-ಸಂಜಯ್ ರಾವುತ್, ಶಿವಸೇನಾ ಸಂಸದ</strong></em></p>.<p>**</p>.<p>ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜಕೀಯ ಬೆರೆತಿದೆ. ನಿಜವಾದ ರೈತರಿಗೆ ಕಳೆದ ಆರು ತಿಂಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ತೃಪ್ತಿಯಿದೆ.<br /><em><strong>-ವಿ.ಕೆ. ಸಿಂಗ್, ಕೇಂದ್ರ ಸಚಿವ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>