<p><strong>ನೋಯ್ಡಾ</strong>: ಅದಾನಿ ಸಮೂಹದ ನಿರ್ಮಾಣ ಹಂತದಲ್ಲಿರುವ ದತ್ತಾಂಶ ಕೇಂದ್ರ (ಡೇಟಾ ಸೆಂಟರ್)ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಂಗಳವಾರ ರಾತ್ರಿ 11.20ರ ಸುಮಾರಿಗೆ ಸೆಕ್ಟರ್ 62 ಪ್ರದೇಶದ ಕೈಗಾರಿಕಾ ಕೇಂದ್ರದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಬೆಂಕಿಯನ್ನು ನಂದಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಹೇಳಿದ್ದಾರೆ.</p>.<p>ಸೆಕ್ಟರ್ 62ರ ಪ್ರದೇಶದಲ್ಲಿ ಅದಾನಿ ಕಾನೆಕ್ಸ್ ಡಾಟಾ ಸೆಂಟರ್ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕೆಲವು ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಹಾಳೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಚೌಬೆ ತಿಳಿಸಿದ್ದಾರೆ.</p>.<p>ನೋಯ್ಡಾದಲ್ಲಿ ಅದಾನಿ ಸಮೂಹ ಮುಂಬರುವ ಡೇಟಾ ಸೆಂಟರ್ 100 MW IT ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಡೇಟಾ ಸೆಂಟರ್ ಪ್ರಾರಂಭವಾಗಲಿದೆ ಎಂದು ಅದಾನಿ ಕನೆಕ್ಸ್ ವೆಬ್ಸೈಟ್ ತಿಳಿಸಿದೆ.</p>.<p>ಇವನ್ನೂ ಓದಿ: <a href="https://www.prajavani.net/india-news/alert-citizens-found-cricketer-kedar-jadhavs-father-hours-after-he-went-missing-says-pune-police-1027556.html" itemprop="url">ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ಪತ್ತೆ: ಪುಣೆ ಪೊಲೀಸರು </a></p>.<p> <a href="https://www.prajavani.net/india-news/kerala-lokayukta-to-take-up-case-against-cm-vijayan-on-friday-1027557.html" itemprop="url">ಕೇರಳ ಸಿಎಂ ಪಿಣರಾಯಿ ಪ್ರಕರಣ: ಲೋಕಾಯುಕ್ತ ತೀರ್ಪು ಪ್ರಕಟಿಸುವ ನಿರೀಕ್ಷೆ </a></p>.<p> <a href="https://www.prajavani.net/india-news/india-witnesses-3016-fresh-covid-19-cases-highest-in-nearly-six-months-1027555.html" itemprop="url">India Covid Update | ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೋಯ್ಡಾ</strong>: ಅದಾನಿ ಸಮೂಹದ ನಿರ್ಮಾಣ ಹಂತದಲ್ಲಿರುವ ದತ್ತಾಂಶ ಕೇಂದ್ರ (ಡೇಟಾ ಸೆಂಟರ್)ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಂಗಳವಾರ ರಾತ್ರಿ 11.20ರ ಸುಮಾರಿಗೆ ಸೆಕ್ಟರ್ 62 ಪ್ರದೇಶದ ಕೈಗಾರಿಕಾ ಕೇಂದ್ರದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಬೆಂಕಿಯನ್ನು ನಂದಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಹೇಳಿದ್ದಾರೆ.</p>.<p>ಸೆಕ್ಟರ್ 62ರ ಪ್ರದೇಶದಲ್ಲಿ ಅದಾನಿ ಕಾನೆಕ್ಸ್ ಡಾಟಾ ಸೆಂಟರ್ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕೆಲವು ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಹಾಳೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಚೌಬೆ ತಿಳಿಸಿದ್ದಾರೆ.</p>.<p>ನೋಯ್ಡಾದಲ್ಲಿ ಅದಾನಿ ಸಮೂಹ ಮುಂಬರುವ ಡೇಟಾ ಸೆಂಟರ್ 100 MW IT ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಡೇಟಾ ಸೆಂಟರ್ ಪ್ರಾರಂಭವಾಗಲಿದೆ ಎಂದು ಅದಾನಿ ಕನೆಕ್ಸ್ ವೆಬ್ಸೈಟ್ ತಿಳಿಸಿದೆ.</p>.<p>ಇವನ್ನೂ ಓದಿ: <a href="https://www.prajavani.net/india-news/alert-citizens-found-cricketer-kedar-jadhavs-father-hours-after-he-went-missing-says-pune-police-1027556.html" itemprop="url">ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ಪತ್ತೆ: ಪುಣೆ ಪೊಲೀಸರು </a></p>.<p> <a href="https://www.prajavani.net/india-news/kerala-lokayukta-to-take-up-case-against-cm-vijayan-on-friday-1027557.html" itemprop="url">ಕೇರಳ ಸಿಎಂ ಪಿಣರಾಯಿ ಪ್ರಕರಣ: ಲೋಕಾಯುಕ್ತ ತೀರ್ಪು ಪ್ರಕಟಿಸುವ ನಿರೀಕ್ಷೆ </a></p>.<p> <a href="https://www.prajavani.net/india-news/india-witnesses-3016-fresh-covid-19-cases-highest-in-nearly-six-months-1027555.html" itemprop="url">India Covid Update | ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>