<p><strong>ನವದೆಹಲಿ:</strong> ಭಾರತವು ಅತೀ ಶೀಘ್ರದಲ್ಲೇ ಕೋವಿಡ್ನ ಸಣ್ಣ ಅಲೆಯೊಂದನ್ನು ಎದುರಿಸಲಿದೆ. ಅದು ಅಕ್ಟೋಬರ್ ಹೊತ್ತಿಗೆ ಉತ್ತುಂಗಕ್ಕೇರಲಿದೆ ಎಂದು ಸಂಶೋಧಕರು ಗಣಿತದ ಮಾದರಿಯ ಮೂಲಕ ಎಚ್ಚರಿಕೆ ನೀಡಿದ್ದಾರೆ.</p>.<p>ಈ ತಿಂಗಳಲ್ಲಿ ದೇಶವು ಸಾಂಕ್ರಾಮಿಕ ರೋಗದ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದೆ. ಈ ಅಲೆಯು ಉತ್ತುಂಗಕ್ಕೆ ಏರಲಿದ್ದು, ದಿನವೊಂದಕ್ಕೆ 1,00,000 ಅಥವಾ 1,50,000 ಸನಿಹದ ಪ್ರಕರಣಗಳು ವರದಿಯಾಗಲಿವೆ ಎಂದು ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮತುಕುಮಳ್ಳಿ ವಿದ್ಯಾಸಾಗರ್ ಮತ್ತು ಮಣೀಂದ್ರ ಅಗರವಾಲ್ ನೇತೃತ್ವದ ಸಂಶೋಧನಾ ತಂಡ ತಿಳಿಸಿದೆ.</p>.<p>ಇದೇ ತಂಡ, ಗಣಿತದ ಮಾದರಿಯ ಮೂಲಕ ಎರಡನೇ ಅಲೆಯ ಏರಿಳಿತಗಳ ಸ್ಪಷ್ಟ ಮುನ್ಸುಚನೆ ನೀಡಿತ್ತು.</p>.<p>ಸದ್ಯ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಚಿತ್ರಣವೇ ಬದಲಾಗಬಹುದು ಎಂದೂ ವಿದ್ಯಾಸಾಗರ್ ಅವರು ತಿಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ‘ಬ್ಲೂಮ್ಬರ್ಗ್’ ವರದಿ ಮಾಡಿದೆ.</p>.<p>ಎರಡನೇ ಅಲೆಗೆ ಹೋಲಿಸಿದರೆ ಸಂಭಾವ್ಯ ಅಲೆಯು ಸಣ್ಣದಾಗಿರುವ ಸಾಧ್ಯತೆಗಳಿವೆ. ಎರಡನೇ ಅಲೆ ಉತ್ತುಂಗದಲ್ಲಿದ್ದ ವೇಳೆ ಮೇ 7ರಂದು 4 ಲಕ್ಷ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದವು. ನಂತರ ತೀವ್ರವಾಗಿ ಕುಸಿಯಲಾರಂಭಿಸಿತ್ತು.</p>.<p>ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆಯೂ, ಹಾಟ್ಸ್ಪಾಟ್ಗಳನ್ನು ಪತ್ತೆಹಚ್ಚುವಂತೆಯೂ ಸಂಶೋಧಕರು ಸಲಹೆ ನೀಡಿದ್ದಾರೆ. ಜೊತೆಗೆ ಹೊಸ ಮಾದರಿ ಹೊರ ಹೊಮ್ಮಲು ಕಾರಣವಾಗುವ ಅಂಶಗಳತ್ತ ಗಮನಹರಿಸಬೇಕು ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತವು ಅತೀ ಶೀಘ್ರದಲ್ಲೇ ಕೋವಿಡ್ನ ಸಣ್ಣ ಅಲೆಯೊಂದನ್ನು ಎದುರಿಸಲಿದೆ. ಅದು ಅಕ್ಟೋಬರ್ ಹೊತ್ತಿಗೆ ಉತ್ತುಂಗಕ್ಕೇರಲಿದೆ ಎಂದು ಸಂಶೋಧಕರು ಗಣಿತದ ಮಾದರಿಯ ಮೂಲಕ ಎಚ್ಚರಿಕೆ ನೀಡಿದ್ದಾರೆ.</p>.<p>ಈ ತಿಂಗಳಲ್ಲಿ ದೇಶವು ಸಾಂಕ್ರಾಮಿಕ ರೋಗದ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದೆ. ಈ ಅಲೆಯು ಉತ್ತುಂಗಕ್ಕೆ ಏರಲಿದ್ದು, ದಿನವೊಂದಕ್ಕೆ 1,00,000 ಅಥವಾ 1,50,000 ಸನಿಹದ ಪ್ರಕರಣಗಳು ವರದಿಯಾಗಲಿವೆ ಎಂದು ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮತುಕುಮಳ್ಳಿ ವಿದ್ಯಾಸಾಗರ್ ಮತ್ತು ಮಣೀಂದ್ರ ಅಗರವಾಲ್ ನೇತೃತ್ವದ ಸಂಶೋಧನಾ ತಂಡ ತಿಳಿಸಿದೆ.</p>.<p>ಇದೇ ತಂಡ, ಗಣಿತದ ಮಾದರಿಯ ಮೂಲಕ ಎರಡನೇ ಅಲೆಯ ಏರಿಳಿತಗಳ ಸ್ಪಷ್ಟ ಮುನ್ಸುಚನೆ ನೀಡಿತ್ತು.</p>.<p>ಸದ್ಯ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಚಿತ್ರಣವೇ ಬದಲಾಗಬಹುದು ಎಂದೂ ವಿದ್ಯಾಸಾಗರ್ ಅವರು ತಿಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ‘ಬ್ಲೂಮ್ಬರ್ಗ್’ ವರದಿ ಮಾಡಿದೆ.</p>.<p>ಎರಡನೇ ಅಲೆಗೆ ಹೋಲಿಸಿದರೆ ಸಂಭಾವ್ಯ ಅಲೆಯು ಸಣ್ಣದಾಗಿರುವ ಸಾಧ್ಯತೆಗಳಿವೆ. ಎರಡನೇ ಅಲೆ ಉತ್ತುಂಗದಲ್ಲಿದ್ದ ವೇಳೆ ಮೇ 7ರಂದು 4 ಲಕ್ಷ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದವು. ನಂತರ ತೀವ್ರವಾಗಿ ಕುಸಿಯಲಾರಂಭಿಸಿತ್ತು.</p>.<p>ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆಯೂ, ಹಾಟ್ಸ್ಪಾಟ್ಗಳನ್ನು ಪತ್ತೆಹಚ್ಚುವಂತೆಯೂ ಸಂಶೋಧಕರು ಸಲಹೆ ನೀಡಿದ್ದಾರೆ. ಜೊತೆಗೆ ಹೊಸ ಮಾದರಿ ಹೊರ ಹೊಮ್ಮಲು ಕಾರಣವಾಗುವ ಅಂಶಗಳತ್ತ ಗಮನಹರಿಸಬೇಕು ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>