ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ: ದೆಹಲಿಯ ಗಡಿಯಲ್ಲಿ ಹುತಾತ್ಮರ ಸ್ಮಾರಕ

Last Updated 7 ಏಪ್ರಿಲ್ 2021, 6:22 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಸ್ಮರಣಾರ್ಥ ಪ್ರತಿಭಟನಾ ಸ್ಥಳ ‘ಗಾಜಿಪುರ–ಗಾಜಿಯಾಬಾದ್‌(ಉತ್ತರ ಪ್ರದೇಶದ ಗಡಿ)ಗಡಿಯಲ್ಲಿ ‘ಹುತಾತ್ಮರ ಸ್ಮಾರಕ'ನಿರ್ಮಾಣಕ್ಕೆ ಭಾರತೀಯ ಕಿಸಾನ್‌ ಒಕ್ಕೂಟ(ಬಿಕೆಯು) ಅಡಿಗಲ್ಲು ಹಾಕಿದೆ.

ಬಿಕೆಯು ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಸಾಮಾಜಿಕ ಹೋರಾಟಗಾರ್ತಿ ಮೇಧಾಪಾಟ್ಕರ್ ಅವರು ಮಂಗಳವಾರ ‘ಹುತಾತ್ಮ ಸ್ಮಾರಕ‘ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಮುಂದೆ ಇಲ್ಲಿ ಶಾಶ್ವತವಾದ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗಾಜಿಯಾಬಾದ್ ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ, 'ಹುತಾತ್ಮರ ಸ್ಮಾರಕ'ಕ್ಕೆ ನೆರವೇರಿರುವ ಶಂಕುಸ್ಥಾಪನೆ ಕೇವಲ ಸಾಂಕೇತಿಕವಷ್ಟೇ ಹೊರತು ಶಾಶ್ವತವಲ್ಲ‘ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ 320 ರೈತರು ಸಾವನ್ನಪ್ಪಿದ್ದಾರೆ.ಸಾಮಾಜಿಕ ಕಾರ್ಯಕರ್ತರು ‘ಹುತಾತ್ಮರ ಸ್ಮಾರಕ‘ ನಿರ್ಮಾಣಕ್ಕಾಗಿ ಎಲ್ಲ ಮೃತ ರೈತರ ಹಳ್ಳಿಗಳಿಂದ ಮಣ್ಣನ್ನು ಸಂಗ್ರಹಿಸಿ ಪ್ರತಿಭಟನಾ ಸ್ಥಳಕ್ಕೆ ತಂದಿದ್ದಾರೆ ಎಂದು ಬಿಕೆಯು ತಿಳಿಸಿದೆ.

ಇದರ ಜತೆಗೆ, ಸಾಮಾಜಿಕ ಹೋರಾಟಗಾರರ ಒಂದು ಗುಂಪು ‘ಮಿಟ್ಟಿ ಸತ್ಯಾಗ್ರಹದ (ಮಣ್ಣಿನ ಸತ್ಯಾಗ್ರಹ)‘ ಹೆಸರಲ್ಲಿ ವಿವಿಧ ರಾಜ್ಯಗಳಿಂದ ಮಣ್ಣನ್ನು ಸಂಗ್ರಹಿಸಿದೆ. ಇದರ ಜತೆಗೆ, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್, ಸುಖದೇವ್‌ ರಾಜಗುರು, ಚಂದ್ರಶೇಖರ್ ಆಜಾದ್, ರಾಮ್‌ ಪ್ರಸಾದ್‌ ಮತ್ತು ಅಶಫಾಖ್‌ ಉಲ್ಲಾ ಖಾನ್‌ ಜನಿಸಿದ ಸ್ಥಳದಿಂದ ಮಣ್ಣನ್ನು ಸಂಗ್ರಹಿಸಿ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT