<p><strong>ಲಖನೌ:</strong> ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿರುವುದು ಬಿಜೆಪಿ ಸರ್ಕಾರವು ತಮ್ಮ ಚುನಾವಣಾ ಆಸಕ್ತಿಯನ್ನು ಮುಂದಿಟ್ಟುಕೊಂಡು ಮಾಡಿರುವ 'ಮೋಸ ಮತ್ತು ವಂಚನೆಯ' ಕ್ರಮ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.</p>.<p>'2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇದು 'ವಂಚನೆ', 'ಮೋಸ' ಮತ್ತು 'ನಾಟಕ' ಆಗಿರದಿದ್ದರೆ, ಈ ವೇಳೆಗಾಗಲೇ ರಾಷ್ಟ್ರಪತಿಗಳು ಕೇಂದ್ರವನ್ನು ಉದ್ಘಾಟಿಸುತ್ತಿದ್ದರು ಹೊರತು ಅದಕ್ಕೆ ಅಡಿಪಾಯ ಹಾಕುತ್ತಿರಲಿಲ್ಲ' ಎಂದು ಮಾಯಾವತಿ ಆರೋಪಿಸಿದ್ದಾರೆ.</p>.<p>ಸರಣಿ ಟ್ವೀಟ್ ಮಾಡಿರುವ ಅವರು, ದಲಿತರು ಮತ್ತು ಹಿಂದುಳಿದ ವರ್ಗದ ಜನರ ಹಕ್ಕುಗಳನ್ನು ತಿರಸ್ಕರಿಸುವಲ್ಲಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಗಳಿಗಿಂತ ಯೋಗಿ ಆದಿತ್ಯನಾಥ್ ಅವರ ಸರ್ಕಾರವೇನು ಭಿನ್ನವಾಗಿಲ್ಲ ಎಂದು ಪ್ರತಿಪಾದಿಸಿದರು.</p>.<p>'ಈಗ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಬಾಬಾ ಸಾಹೇಬರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರವೊಂದರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಇದು ನಾಟಕವಲ್ಲದಿದ್ದರೆ, ತಾವು ಅಧಿಕಾರದಲ್ಲಿದ್ದಾಗ ಬಾಬಾ ಸಾಹೇಬರ ಕೋಟಿಗಟ್ಟಲೆ ಅನುಯಾಯಿಗಳನ್ನು ನಿರ್ಲಕ್ಷಿಸಿದ್ದರ ಅರ್ಥವೇನು?' ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.</p>.<p>'ಪೂಜ್ಯ ಬಾಬಾ ಸಾಹೇಬರ ಹೆಸರಿನಲ್ಲಿ ಯಾವುದೇ ಕೇಂದ್ರವನ್ನು ಸ್ಥಾಪಿಸುವುದಕ್ಕೆ ಬಿಎಸ್ಪಿ ವಿರೋಧಿಸುವುದಿಲ್ಲ, ಆದರೆ ಚುನಾವಣಾ ಹಿತದೃಷ್ಟಿಯಿಂದ ಈಗ ಇದನ್ನೆಲ್ಲ ಮಾಡುವುದು ಸಂಪೂರ್ಣ ವಂಚನೆಯಾಗಿದೆ. ಈ ಮೊದಲು ಯುಪಿ ಸರ್ಕಾರ ಈ ಕೆಲಸವನ್ನು ಮಾಡಿದ್ದರೆ, ರಾಷ್ಟ್ರಪತಿಗಳು ಈಗ ಕೇಂದ್ರವನ್ನು ಉದ್ಘಾಟಿಸುತ್ತಿದ್ದರು ಮತ್ತು ಅಡಿಪಾಯ ಹಾಕುತ್ತಿರಲಿಲ್ಲ' ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿರುವುದು ಬಿಜೆಪಿ ಸರ್ಕಾರವು ತಮ್ಮ ಚುನಾವಣಾ ಆಸಕ್ತಿಯನ್ನು ಮುಂದಿಟ್ಟುಕೊಂಡು ಮಾಡಿರುವ 'ಮೋಸ ಮತ್ತು ವಂಚನೆಯ' ಕ್ರಮ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.</p>.<p>'2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇದು 'ವಂಚನೆ', 'ಮೋಸ' ಮತ್ತು 'ನಾಟಕ' ಆಗಿರದಿದ್ದರೆ, ಈ ವೇಳೆಗಾಗಲೇ ರಾಷ್ಟ್ರಪತಿಗಳು ಕೇಂದ್ರವನ್ನು ಉದ್ಘಾಟಿಸುತ್ತಿದ್ದರು ಹೊರತು ಅದಕ್ಕೆ ಅಡಿಪಾಯ ಹಾಕುತ್ತಿರಲಿಲ್ಲ' ಎಂದು ಮಾಯಾವತಿ ಆರೋಪಿಸಿದ್ದಾರೆ.</p>.<p>ಸರಣಿ ಟ್ವೀಟ್ ಮಾಡಿರುವ ಅವರು, ದಲಿತರು ಮತ್ತು ಹಿಂದುಳಿದ ವರ್ಗದ ಜನರ ಹಕ್ಕುಗಳನ್ನು ತಿರಸ್ಕರಿಸುವಲ್ಲಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಗಳಿಗಿಂತ ಯೋಗಿ ಆದಿತ್ಯನಾಥ್ ಅವರ ಸರ್ಕಾರವೇನು ಭಿನ್ನವಾಗಿಲ್ಲ ಎಂದು ಪ್ರತಿಪಾದಿಸಿದರು.</p>.<p>'ಈಗ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಬಾಬಾ ಸಾಹೇಬರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರವೊಂದರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಇದು ನಾಟಕವಲ್ಲದಿದ್ದರೆ, ತಾವು ಅಧಿಕಾರದಲ್ಲಿದ್ದಾಗ ಬಾಬಾ ಸಾಹೇಬರ ಕೋಟಿಗಟ್ಟಲೆ ಅನುಯಾಯಿಗಳನ್ನು ನಿರ್ಲಕ್ಷಿಸಿದ್ದರ ಅರ್ಥವೇನು?' ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.</p>.<p>'ಪೂಜ್ಯ ಬಾಬಾ ಸಾಹೇಬರ ಹೆಸರಿನಲ್ಲಿ ಯಾವುದೇ ಕೇಂದ್ರವನ್ನು ಸ್ಥಾಪಿಸುವುದಕ್ಕೆ ಬಿಎಸ್ಪಿ ವಿರೋಧಿಸುವುದಿಲ್ಲ, ಆದರೆ ಚುನಾವಣಾ ಹಿತದೃಷ್ಟಿಯಿಂದ ಈಗ ಇದನ್ನೆಲ್ಲ ಮಾಡುವುದು ಸಂಪೂರ್ಣ ವಂಚನೆಯಾಗಿದೆ. ಈ ಮೊದಲು ಯುಪಿ ಸರ್ಕಾರ ಈ ಕೆಲಸವನ್ನು ಮಾಡಿದ್ದರೆ, ರಾಷ್ಟ್ರಪತಿಗಳು ಈಗ ಕೇಂದ್ರವನ್ನು ಉದ್ಘಾಟಿಸುತ್ತಿದ್ದರು ಮತ್ತು ಅಡಿಪಾಯ ಹಾಕುತ್ತಿರಲಿಲ್ಲ' ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>