<p><strong>ನವದೆಹಲಿ: </strong>ಕೋವಿಡ್–19 ರೋಗಿಗಳಲ್ಲಿ ಸತತವಾಗಿ 2–3 ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಕಂಡುಬಂದರೆ ಅವರನ್ನು ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸಲಹೆ ನೀಡಿದೆ.</p>.<p>ಸಚಿವಾಲಯವು ‘ವಯಸ್ಕ ಕೋವಿಡ್–19 ರೋಗಿಗಳ ನಿರ್ವಹಣೆಗಾಗಿ ವೈದ್ಯಕೀಯ ಮಾರ್ಗಸೂಚಿ’ಯನ್ನು ಪರಿಷ್ಕರಿಸಿದ್ದು, ಹಲವು ವಿಷಯಗಳ ಕುರಿತು ಎಚ್ಚರಿಕೆ–ಸಲಹೆಗಳನ್ನು ನೀಡಿದೆ.</p>.<p>ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್), ಐಸಿಎಂಆರ್–ಕೋವಿಡ್–19 ರಾಷ್ಟ್ರೀಯ ಕಾರ್ಯಪಡೆ ಹಾಗೂ ಜಂಟಿ ಮೇಲ್ವಿಚಾರಣಾ ತಂಡ (ಡಿಜಿಎಚ್ಎಸ್) ನೀಡಿರುವ ಸಲಹೆಯಂತೆ ಮಾರ್ಗಸೂಚಿಗಳನ್ನು ಸಚಿವಾಲಯ ಪರಿಷ್ಕರಿಸಿದೆ.</p>.<p>‘ಸಾಧಾರಣದಿಂದ ತೀವ್ರ’ ಸ್ವರೂಪದ ಕೋವಿಡ್ ಇರುವವರು ಹಾಗೂ ಕೋವಿಡ್–19 ಲಕ್ಷಣಗಳು ಕಂಡುಬಂದ 10 ದಿನಗಳ ಒಳಗೆ ಮೂತ್ರಪಿಂಡಗಳ ಸಮಸ್ಯೆ ಕಾಣಿಸದವರಿಗೆ ‘ತುರ್ತು ಬಳಕೆಯಾಗಿ’ ರೆಮ್ಡಿಸಿವಿರ್ ನೀಡಬಹುದು’ ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ.</p>.<p>ಸ್ಟಿರಾಯ್ಡ್ಗಳನ್ನು ನೀಡುವುದರಿಂದ ಕೋವಿಡ್ ರೋಗಿಗಳಿಗೆ ಆಮ್ಲಜನಕ ನೀಡಬೇಕಾದ ಸಂದರ್ಭ ಉದ್ಭವಿಸುವುದಿಲ್ಲ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂಬ ಅಂಶದ ಬಗ್ಗೆ ಮಾರ್ಗಸೂಚಿಯಲ್ಲಿ ಗಮನ ಸೆಳೆಯಲಾಗಿದೆ.</p>.<p>ಅಗತ್ಯಕ್ಕಿಂತ ಮೊದಲೇ ಸ್ಟಿರಾಯ್ಡ್ಗಳ ಅಧಿಕ ಡೋಸ್ಗಳನ್ನು ನೀಡಿದರೆ ಅಥವಾ ಅಗತ್ಯಕ್ಕಿಂತಲೂ ಹೆಚ್ಚು ಕಾಲ ನೀಡಿದರೆ ಕಪ್ಪುಶಿಲೀಂಧ್ರದಂತಹ ತೀವ್ರಸ್ವರೂಪದ ಸೋಂಕು ತಗುಲುವ ಅಪಾಯ ಹೆಚ್ಚು ಎಂದೂ ಸಚಿವಾಲಯ ಎಚ್ಚರಿಸಿದೆ.</p>.<p><strong>ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ</strong></p>.<p>ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್–19 ಪರೀಕ್ಷೆಗಳು ಇಳಿಮುಖವಾಗಿರುವ ಬಗ್ಗೆ ಗಮನಸೆಳೆದಿರುವ ಕೇಂದ್ರ ಸರ್ಕಾರ, ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದೆ.</p>.<p>ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಅವರು ಈ ಸಂಬಂಧ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.</p>.<p>‘ಕೋವಿಡ್ ಪಿಡುಗಿನ ನಿರ್ವಹಣೆಯಲ್ಲಿ ಪರೀಕ್ಷೆಗಳು ಮಹತ್ವದ ಪಾತ್ರ ವಹಿಸುತ್ತದೆ. ಹೊಸ ಕ್ಲಸ್ಟರ್ಗಳು/ಹಾಟ್ಸ್ಪಾಟ್ಗಳನ್ನು ಗುರುತಿಸಿ, ಸೋಂಕು ಪ್ರಸರಣಕ್ಕೆ ಕಡಿವಾಣ ಹಾಕುವ ಸಂಬಂಧ ಕಾರ್ಯತಂತ್ರ ರೂಪಿಸಲು ಅನುಕೂಲವಾಗುವುದು’ ಎಂದೂ ವಿವರಿಸಿದ್ದಾರೆ.</p>.<p>ರೂಪಾಂತರಿ ಓಮೈಕ್ರಾನ್ ಅನ್ನು ‘ಕಳವಳಕಾರಿ ತಳಿ’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ. ಈ ತಳಿ ಸೋಂಕು ದೇಶದಲ್ಲಿ ವೇಗವಾಗಿ ಪ್ರಸರಣಗೊಳ್ಳುತ್ತಿದೆ. ಹೀಗಾಗಿ ಕೋವಿಡ್ ದೃಢ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು’ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೋವಿಡ್–19 ರೋಗಿಗಳಲ್ಲಿ ಸತತವಾಗಿ 2–3 ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಕಂಡುಬಂದರೆ ಅವರನ್ನು ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸಲಹೆ ನೀಡಿದೆ.</p>.<p>ಸಚಿವಾಲಯವು ‘ವಯಸ್ಕ ಕೋವಿಡ್–19 ರೋಗಿಗಳ ನಿರ್ವಹಣೆಗಾಗಿ ವೈದ್ಯಕೀಯ ಮಾರ್ಗಸೂಚಿ’ಯನ್ನು ಪರಿಷ್ಕರಿಸಿದ್ದು, ಹಲವು ವಿಷಯಗಳ ಕುರಿತು ಎಚ್ಚರಿಕೆ–ಸಲಹೆಗಳನ್ನು ನೀಡಿದೆ.</p>.<p>ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್), ಐಸಿಎಂಆರ್–ಕೋವಿಡ್–19 ರಾಷ್ಟ್ರೀಯ ಕಾರ್ಯಪಡೆ ಹಾಗೂ ಜಂಟಿ ಮೇಲ್ವಿಚಾರಣಾ ತಂಡ (ಡಿಜಿಎಚ್ಎಸ್) ನೀಡಿರುವ ಸಲಹೆಯಂತೆ ಮಾರ್ಗಸೂಚಿಗಳನ್ನು ಸಚಿವಾಲಯ ಪರಿಷ್ಕರಿಸಿದೆ.</p>.<p>‘ಸಾಧಾರಣದಿಂದ ತೀವ್ರ’ ಸ್ವರೂಪದ ಕೋವಿಡ್ ಇರುವವರು ಹಾಗೂ ಕೋವಿಡ್–19 ಲಕ್ಷಣಗಳು ಕಂಡುಬಂದ 10 ದಿನಗಳ ಒಳಗೆ ಮೂತ್ರಪಿಂಡಗಳ ಸಮಸ್ಯೆ ಕಾಣಿಸದವರಿಗೆ ‘ತುರ್ತು ಬಳಕೆಯಾಗಿ’ ರೆಮ್ಡಿಸಿವಿರ್ ನೀಡಬಹುದು’ ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ.</p>.<p>ಸ್ಟಿರಾಯ್ಡ್ಗಳನ್ನು ನೀಡುವುದರಿಂದ ಕೋವಿಡ್ ರೋಗಿಗಳಿಗೆ ಆಮ್ಲಜನಕ ನೀಡಬೇಕಾದ ಸಂದರ್ಭ ಉದ್ಭವಿಸುವುದಿಲ್ಲ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂಬ ಅಂಶದ ಬಗ್ಗೆ ಮಾರ್ಗಸೂಚಿಯಲ್ಲಿ ಗಮನ ಸೆಳೆಯಲಾಗಿದೆ.</p>.<p>ಅಗತ್ಯಕ್ಕಿಂತ ಮೊದಲೇ ಸ್ಟಿರಾಯ್ಡ್ಗಳ ಅಧಿಕ ಡೋಸ್ಗಳನ್ನು ನೀಡಿದರೆ ಅಥವಾ ಅಗತ್ಯಕ್ಕಿಂತಲೂ ಹೆಚ್ಚು ಕಾಲ ನೀಡಿದರೆ ಕಪ್ಪುಶಿಲೀಂಧ್ರದಂತಹ ತೀವ್ರಸ್ವರೂಪದ ಸೋಂಕು ತಗುಲುವ ಅಪಾಯ ಹೆಚ್ಚು ಎಂದೂ ಸಚಿವಾಲಯ ಎಚ್ಚರಿಸಿದೆ.</p>.<p><strong>ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ</strong></p>.<p>ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್–19 ಪರೀಕ್ಷೆಗಳು ಇಳಿಮುಖವಾಗಿರುವ ಬಗ್ಗೆ ಗಮನಸೆಳೆದಿರುವ ಕೇಂದ್ರ ಸರ್ಕಾರ, ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದೆ.</p>.<p>ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಅವರು ಈ ಸಂಬಂಧ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.</p>.<p>‘ಕೋವಿಡ್ ಪಿಡುಗಿನ ನಿರ್ವಹಣೆಯಲ್ಲಿ ಪರೀಕ್ಷೆಗಳು ಮಹತ್ವದ ಪಾತ್ರ ವಹಿಸುತ್ತದೆ. ಹೊಸ ಕ್ಲಸ್ಟರ್ಗಳು/ಹಾಟ್ಸ್ಪಾಟ್ಗಳನ್ನು ಗುರುತಿಸಿ, ಸೋಂಕು ಪ್ರಸರಣಕ್ಕೆ ಕಡಿವಾಣ ಹಾಕುವ ಸಂಬಂಧ ಕಾರ್ಯತಂತ್ರ ರೂಪಿಸಲು ಅನುಕೂಲವಾಗುವುದು’ ಎಂದೂ ವಿವರಿಸಿದ್ದಾರೆ.</p>.<p>ರೂಪಾಂತರಿ ಓಮೈಕ್ರಾನ್ ಅನ್ನು ‘ಕಳವಳಕಾರಿ ತಳಿ’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ. ಈ ತಳಿ ಸೋಂಕು ದೇಶದಲ್ಲಿ ವೇಗವಾಗಿ ಪ್ರಸರಣಗೊಳ್ಳುತ್ತಿದೆ. ಹೀಗಾಗಿ ಕೋವಿಡ್ ದೃಢ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು’ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>