<p><strong>ಲಖನೌ</strong>: ದೇವರಿಗೆ ಸಾವಿದೆಯೇ? ಆಸ್ತಿಕರು ಈ ಮಾತನ್ನು ಸುತಾರಾಂ ಒಪ್ಪುವುದಿಲ್ಲ. ಲಖನೌ ಜಿಲ್ಲೆಯ ಮೋಹನಲಾಲ್ ಗಂಜ್ ಪಟ್ಟಣದ ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ದೇವರಿಗೂ ಸಾವಿದೆ!</p>.<p>ಅಷ್ಟೇ ಅಲ್ಲ, ‘ದಿವಂಗತ‘ರಾಗುವ ಮೊದಲು ದೇವಸ್ಥಾನದ ಅಂದರೆ ತನ್ನ ಹೆಸರಿನಲ್ಲಿದ್ದ ಭೂಮಿಯನ್ನು ತನ್ನ ‘ವಾರಸುದಾರ’ರಿಗೂ ಬರೆದಿದ್ದಾರೆ!</p>.<p class="bodytext">ಇಂಥದೊಂದು ಬೆಳವಣಿಗೆ ನಡೆದಿರುವುದು ಜಿಲ್ಲೆಯ ಕುಸ್ಮೌರಾ ಹಾಲುಪುರ್ ಗ್ರಾಮದಲ್ಲಿ. ದೇವಸ್ಥಾನದ ಹೆಸರಿನಲ್ಲಿದ್ದ ಭೂಮಿಯನ್ನು ಕಬಳಿಸಲು ಕಿಡಿಗೇಡಿಗಳು ದಾಖಲೆಗಳಲ್ಲಿ ದೇವರನ್ನೇ ದಿವಂಗತರಾಗಿಸಿದ್ದಾರೆ.</p>.<p class="bodytext">ವರದಿಗಳ ಪ್ರಕಾರ, ನೂರು ವರ್ಷಗಳ ಇತಿಹಾಸವುಳ್ಳ ದೇವಸ್ಥಾನಕ್ಕೆ ಸೇರಿರುವ ಭೂಮಿಯು ‘ಕೃಷ್ಣ–ರಾಮ್’ (ದೇವರಾದ ಕೃಷ್ಣ, ರಾಮ) ಹೆಸರಿನಲ್ಲಿತ್ತು. ಹೆಸರನ್ನು ಸ್ವಲ್ಪ ತಿದ್ದುಪಡಿ ಮಾಡಿ ಕೃಷ್ಣರಾಮ್ ‘ಮೃತರಾಗಿದ್ದಾರೆ‘ ಎಂದು ಕೆಲ ದಶಕಗಳ ಹಿಂದೆ ವಾರಸುದಾರ ಎಂದು ಗಯಾಪ್ರಸಾದ್ ಎಂಬವರ ಹೆಸರಿಗೆಭೂಮಿ ‘ವರ್ಗಾಯಿಸಲಾಗಿದೆ.</p>.<p class="bodytext">ಕೆಲ ವರ್ಷಗಳ ನಂತರ ಗಯಾ ಪ್ರಸಾದ್ ಅವರೂ ‘ಮೃತಪಟ್ಟಿದ್ದಾರೆ’ ಎಂದು ತೋರಿಸಿ, ಭೂಮಿಯನ್ನು ಅವರ ಇಬ್ಬರು ಸಹೋದರರ ಹೆಸರಿಗೆ ವರ್ಗಾಯಿಸಲಾಗಿದೆ.</p>.<p class="bodytext">ದೇವಸ್ಥಾನದ ಧರ್ಮದರ್ಶಿಗಳ ದೂರು ಆಧರಿಸಿ ತನಿಖೆ ಆರಂಭಿಸಿದಾಗ ಈ ‘ಸಾವಿನ ಸತ್ಯ’ ಬಹಿರಂಗವಾಗಿದೆ. ಕೃಷ್ಣ ಮತ್ತು ರಾಮ ದೇವರ ಹೆಸರನ್ನು ಕೃಷ್ಣರಾಮ್ ಎಂದು ಒಗ್ಗೂಡಿಸಿ, ಒಬ್ಬ ವ್ಯಕ್ತಿ ಎಂದು ಬಿಂಬಿಸಲಾಗಿದ್ದು, ಅದನ್ನೇ ದಾಖಲೆಗಳಲ್ಲಿಯೂ ತೋರಿಸಲಾಗಿದೆ ಎಂದೂ ತನಿಖೆಯಿಂದ ತಿಳಿದುಬಂದಿದೆ.</p>.<p class="bodytext">ದೇವಸ್ಥಾನದ ಭೂಮಿಯನ್ನು ಕಬಳಿಸುವುದೇ ಇದರ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ದೇವರಿಗೆ ಸಾವಿದೆಯೇ? ಆಸ್ತಿಕರು ಈ ಮಾತನ್ನು ಸುತಾರಾಂ ಒಪ್ಪುವುದಿಲ್ಲ. ಲಖನೌ ಜಿಲ್ಲೆಯ ಮೋಹನಲಾಲ್ ಗಂಜ್ ಪಟ್ಟಣದ ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ದೇವರಿಗೂ ಸಾವಿದೆ!</p>.<p>ಅಷ್ಟೇ ಅಲ್ಲ, ‘ದಿವಂಗತ‘ರಾಗುವ ಮೊದಲು ದೇವಸ್ಥಾನದ ಅಂದರೆ ತನ್ನ ಹೆಸರಿನಲ್ಲಿದ್ದ ಭೂಮಿಯನ್ನು ತನ್ನ ‘ವಾರಸುದಾರ’ರಿಗೂ ಬರೆದಿದ್ದಾರೆ!</p>.<p class="bodytext">ಇಂಥದೊಂದು ಬೆಳವಣಿಗೆ ನಡೆದಿರುವುದು ಜಿಲ್ಲೆಯ ಕುಸ್ಮೌರಾ ಹಾಲುಪುರ್ ಗ್ರಾಮದಲ್ಲಿ. ದೇವಸ್ಥಾನದ ಹೆಸರಿನಲ್ಲಿದ್ದ ಭೂಮಿಯನ್ನು ಕಬಳಿಸಲು ಕಿಡಿಗೇಡಿಗಳು ದಾಖಲೆಗಳಲ್ಲಿ ದೇವರನ್ನೇ ದಿವಂಗತರಾಗಿಸಿದ್ದಾರೆ.</p>.<p class="bodytext">ವರದಿಗಳ ಪ್ರಕಾರ, ನೂರು ವರ್ಷಗಳ ಇತಿಹಾಸವುಳ್ಳ ದೇವಸ್ಥಾನಕ್ಕೆ ಸೇರಿರುವ ಭೂಮಿಯು ‘ಕೃಷ್ಣ–ರಾಮ್’ (ದೇವರಾದ ಕೃಷ್ಣ, ರಾಮ) ಹೆಸರಿನಲ್ಲಿತ್ತು. ಹೆಸರನ್ನು ಸ್ವಲ್ಪ ತಿದ್ದುಪಡಿ ಮಾಡಿ ಕೃಷ್ಣರಾಮ್ ‘ಮೃತರಾಗಿದ್ದಾರೆ‘ ಎಂದು ಕೆಲ ದಶಕಗಳ ಹಿಂದೆ ವಾರಸುದಾರ ಎಂದು ಗಯಾಪ್ರಸಾದ್ ಎಂಬವರ ಹೆಸರಿಗೆಭೂಮಿ ‘ವರ್ಗಾಯಿಸಲಾಗಿದೆ.</p>.<p class="bodytext">ಕೆಲ ವರ್ಷಗಳ ನಂತರ ಗಯಾ ಪ್ರಸಾದ್ ಅವರೂ ‘ಮೃತಪಟ್ಟಿದ್ದಾರೆ’ ಎಂದು ತೋರಿಸಿ, ಭೂಮಿಯನ್ನು ಅವರ ಇಬ್ಬರು ಸಹೋದರರ ಹೆಸರಿಗೆ ವರ್ಗಾಯಿಸಲಾಗಿದೆ.</p>.<p class="bodytext">ದೇವಸ್ಥಾನದ ಧರ್ಮದರ್ಶಿಗಳ ದೂರು ಆಧರಿಸಿ ತನಿಖೆ ಆರಂಭಿಸಿದಾಗ ಈ ‘ಸಾವಿನ ಸತ್ಯ’ ಬಹಿರಂಗವಾಗಿದೆ. ಕೃಷ್ಣ ಮತ್ತು ರಾಮ ದೇವರ ಹೆಸರನ್ನು ಕೃಷ್ಣರಾಮ್ ಎಂದು ಒಗ್ಗೂಡಿಸಿ, ಒಬ್ಬ ವ್ಯಕ್ತಿ ಎಂದು ಬಿಂಬಿಸಲಾಗಿದ್ದು, ಅದನ್ನೇ ದಾಖಲೆಗಳಲ್ಲಿಯೂ ತೋರಿಸಲಾಗಿದೆ ಎಂದೂ ತನಿಖೆಯಿಂದ ತಿಳಿದುಬಂದಿದೆ.</p>.<p class="bodytext">ದೇವಸ್ಥಾನದ ಭೂಮಿಯನ್ನು ಕಬಳಿಸುವುದೇ ಇದರ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>