ರೂಪಾಣಿ ಅವರನ್ನು ಬದಲಿಸುವುದರ ಹಿಂದೆ ಇನ್ನೂ ಇತರ ಕಾರಣಗಳಿವೆ. ಅವರಿಗೆ ಇರುವ ‘ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ’ ಎಂಬ ಇಮೇಜ್ ಕೂಡ ಅದರಲ್ಲೊಂದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ‘ಸೂಪರ್ ಸಿಎಂ’ ರೀತಿ ವರ್ತಿಸುತ್ತಿದ್ದು, ಐಎಎಸ್ ಅಧಿಕಾರಿಗಳು ಸಚಿವರಿಗಿಂತ ಪ್ರಬಲವಾಗಿದ್ದಾರೆ ಎಂಬ ಮಾತುಗಳಿಗೆ ಹಾಗೂ ರೂಪಾಣಿ ಅವರು ಕೋವಿಡ್ ನಿರ್ವಹಿಸಿದ ಬಗ್ಗೆ ಜನರಲ್ಲಿ ಕೋಪವಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.