ಸಿಬಿಎಸ್ಇ ಫಲಿತಾಂಶದ ಪ್ರಕರಣದ ವಿಚಾರಣೆಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನವೀನ್ ಚಾವ್ಲಾ ಅವರ ರಜಾಕಾಲದ ಪೀಠ, ‘ನೀವು ಕೊನೆ ಗಳಿಗೆಯಲ್ಲಿ ಬಂದು, ಗೆಲ್ಲುತ್ತೀವಿ ಎಂದು ಭಾವಿಸಿದ್ದೀರಿ. ಇದೆಲ್ಲ ಪ್ರಚಾರದ ಸಾಹಸ. ತುಂಬಾ ಕೆಟ್ಟ ಅಭಿರುಚಿ ಕೂಡ. ನೀವು ನಮ್ಮೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯೂ ಸರಿ ಇಲ್ಲ. ನೀವೊಬ್ಬ ಖಾಸಗಿ ದಾವೆದಾರರಂತೆ ವರ್ತಿಸಬೇಕು. ನೀವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸುತ್ತೀರಿ, ಹಾಗಾಗಿ ನೀವು ಸಾಮಾನ್ಯರಂತೆ ವರ್ತಿಸಲು ಸಾಧ್ಯವಿಲ್ಲ. ನಿಮ್ಮ ಸಮರ್ಥನೆ ಗಟ್ಟಿಯಾಗಿರಬೇಕು‘ ಎಂದು ಹೇಳಿತು.