ಎಸ್ಕೆಎಂ ನಾಯಕರ ಪ್ರಕಾರ, ಟ್ರ್ಯಾಕ್ಟರ್ ಪೆರೇಡ್ನಲ್ಲಿ ಭಾಗವಹಿಸಿದ್ದ 16 ರೈತರು ಇನ್ನೂ ಪತ್ತೆಯಾಗಿಲ್ಲ.
ಮತ್ತೋರ್ವ ನಾಯಕ ರವೀಂದ್ರ ಸಿಂಗ್ ಮಾತನಾಡಿ, 44 ಎಫ್ಐಆರ್ಗಳಲ್ಲಿ 14 ಪ್ರಕರಣಗಳಿಗೆ ಸಂಬಂಧಿಸಿದಂತೆ 122 ರೈತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಎಲ್ಲ ರೈತರಿಗೆ ಎಸ್ಕೆಎಂ ಕಾನೂನು ಮತ್ತು ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.