‘ಅವರು (ಶಾಸಕರು ಮತ್ತು ಸಚಿವರು) ಸೇನಾ ಕಾರ್ಯಕರ್ತರಿಂದ ಗೆದ್ದಿದ್ದರು. ಪಕ್ಷ ಅವರಿಗೆ ಎಲ್ಲ ಸ್ಥಾನಮಾನವನ್ನು ಪಕ್ಷದೊಳಗೂ ನೀಡಿತ್ತು. ಆದರೂ, ಅವರು ಪಕ್ಷ ತೊರೆದರು. ಇದರಿಂದ ತುಂಬಾ ನೋವಾಗಿದೆ. ಆದರೆ, ಏನನ್ನೂ ಪಡೆಯದವರು ನನ್ನೊಂದಿಗೆ ಉಳಿದಿದ್ದಾರೆ’ ಎಂದು ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ತಿಳಿಸಿರುವುದಾಗಿಸೇನಾದ ನಾಯಕ ರಮೇಶ್ ಶಿಂಧೆ ತಿಳಿಸಿದ್ದಾರೆ. ಈ ಸಭೆಯ ವಿಡಿಯೊ ವೈರಲ್ ಆಗಿದೆ.