ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ನಷ್ಟವಾಗುತ್ತಿದ್ದು, ಈ ಸಂಬಂಧ ಸರ್ಕಾರ ನೆರವು ನೀಡಬೇಕೆಂದು ಕಂಪನಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು, ಎಲ್ ಅಂಡ್ ಟಿ ಮೆಟ್ರೊ ರೈಲು ಕಾರ್ಯನಿರ್ವಹಣೆ ವಿಭಾಗ, ಸಚಿವರು ಹಾಗೂ ಸರ್ಕಾರದ ಅಧಿಕಾರಿಗೊಳೊಂದಿಗೆ ಸಭೆ ನಡೆಸಿ, ಮೆಟ್ರೊ ರೈಲು ಯೋಜನೆಯನ್ನು ಬೆಂಬಲಿಸುವ ಜೊತೆಗೆ, ಪುನಶ್ಚೇತನಕ್ಕೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.