ಮಾಧ್ಯಮ ವರದಿಗಳ ಪ್ರಕಾರ, ನಾಯಿಯನ್ನು ವಾಯುವಿಹಾರ ಮಾಡಿಸುವುದಕ್ಕೆಂದು ಐಎಎಸ್ ದಂಪತಿ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಅವಧಿಗೂ ಮೊದಲೇ ಮುಚ್ಚಿಸಿದ್ದರು. ಸಂಜೆ 6 ಅಥವಾ 7 ಗಂಟೆ ಒಳಗೆಯೇ ಕ್ರೀಡಾಂಗಣವನ್ನು ಮುಚ್ಚಿಸಿ ಅಥ್ಲೀಟ್ಗಳು, ತರಬೇತುದಾರರನ್ನು ಕ್ರೀಡಾಂಗಣದಿಂದ ಹೊರಹೋಗುವಂತೆ ಸೂಚಿಸಲಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.