‘ಚುನಾಯಿತ ನಾಯಕರ ಪರಿಕಲ್ಪನೆಯು ಪ್ರಪಂಚದ ಉಳಿದ ಭಾಗಗಳಿಗೆ ಬಹಳ ಹಿಂದೆಯೇ ಪ್ರಾಚೀನ ಭಾರತದಲ್ಲಿ ಒಂದು ಸಾಮಾನ್ಯ ಲಕ್ಷಣವಾಗಿತ್ತು. ಭಾರತ ನಿಜಕ್ಕೂ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವವು ಕೇವಲ ರಚನೆಯಲ್ಲ, ಅದು ಜೀವಾಳ. ಪ್ರತಿ ಮನುಷ್ಯನ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಸಮಾನವಾಗಿ ಕಾಣುವ ನಂಬಿಕೆಯನ್ನು ಇದು ಆಧರಿಸಿದೆ. ಅದಕ್ಕಾಗಿಯೇ ನಾವು ‘ಸಬ್ಕಾ ಸಾತ್, ಸಬ್ಕಾ ವಿಕಾಸ್’ ಸೂತ್ರವನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದೇವೆ. ತಮ್ಮ ಸರ್ಕಾರದ ಪ್ರತಿ ಉಪಕ್ರಮಗಳು ದೇಶದ ನಾಗರಿಕರ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುತ್ತವೆ’ ಎಂದು ಮೋದಿ ಪ್ರತಿಪಾದಿಸಿದರು.