ಮಹಾತ್ಮ ಗಾಂಧಿ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದ ಇತಿಹಾಸ ಪುನಃ ಬರೆಯುವ ಮೊದಲ ಪ್ರಯತ್ನವೆಂದರೆ ಗಾಂಧೀಜಿಯ ಹತ್ಯೆಗೆ ಸಂಬಂಧಿಸಿದ್ದಾಗಿರಲಿದೆ. ದಲಿತ ಮತ್ತು ಹರಿಜನರ ಮೇಲಿನ ದೌರ್ಜನ್ಯಕ್ಕೆ ಪಶ್ಚಾತ್ತಾಪ ಪಡುವಂತೆ ಮತ್ತು ಭಾರತವನ್ನು ಜಾತ್ಯತೀತ ದೇಶವೆಂದು ಕರೆಯುವಂತೆಸನಾತನ ಹಿಂದೂ ಧರ್ಮವನ್ನು ಒತ್ತಾಯಿಸಿ ಮಾಡಿದ ಭಾಷಣವೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು ಎಂದರು.