<p class="title"><strong>ಪಟ್ನಾ:</strong> ಪ್ರಧಾನಿ ನರೇಂದ್ರ ಮೋದಿ ಅವರು 2013ರಲ್ಲಿ ಭಾಗವಹಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದಲ್ಲಿ ನಾಲ್ವರಿಗೆ ಪಟ್ನಾದ ವಿಶೇಷ ಎನ್ಐಎ ನ್ಯಾಯಾಲಯವು ಸೋಮವಾರ ಮರಣದಂಡನೆ ವಿಧಿಸಿದೆ.</p>.<p class="title">ಸ್ಫೋಟ ಪ್ರಕರಣದಲ್ಲಿ ಮಾರಣಾಂತಿಕ ದಾಳಿ ನಡೆಸಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.</p>.<p class="bodytext">ಮೋದಿ ಅವರು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವ ಮುನ್ನ, ಪಟ್ನಾದ ಉದ್ಯಾನವೊಂದರಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದವು.</p>.<p class="bodytext">ಸಮೀಪದ ರೈಲ್ವೆ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದ್ದ ಈ ಬಾಂಬ್ ದಾಳಿಯಲ್ಲಿ ಒಟ್ಟು ಆರು ಜನರು ಸಾವಿಗೀಡಾಗಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.</p>.<p class="bodytext">ಅಪರಾಧಿಗಳೆಲ್ಲರೂ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ಸ್ ಆಫ್ ಇಂಡಿಯಾ ಗುಂಪಿಗೆ ಸೇರಿದವರು ಎಂದು ಎಂದು ರಾಷ್ಟ್ರೀಯ ತನಿಖಾ ದಳವು ತಿಳಿಸಿದೆ.</p>.<p class="bodytext">‘ಸರ್ಕಾರದ ವಿರುದ್ಧ ದಾಳಿ ನಡೆಸಲು ಹಾಗೂ ಪಿತೂರಿ ನಡೆಸಿದ್ದ ಕಾರಣಕ್ಕಾಗಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ’ ಎಂದು ಸಾರ್ವಜನಿಕ ಅಭಿಯೋಜಕ ಲಲನ್ ಕುಮಾರ್ ಸಿನ್ಹಾ ಎಎಫ್ಪಿಗೆ ತಿಳಿಸಿದ್ದಾರೆ.</p>.<p>‘ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಇತರ ಮೂವರಿಗೆ ನ್ಯಾಯಾಲಯವು 7 ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು’ ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ.</p>.<p>‘ಪ್ರಕರಣದ ಮುಖ್ಯ ಸಂಚುಕೋರನನ್ನು ಗುರುತಿಸುವಲ್ಲಿ ಎನ್ಐಎ ವಿಫಲವಾಗಿದೆ. ಶಿಕ್ಷೆಗೆ ಒಳಗಾದವರು ಭಯೋತ್ಪಾದಕರಲ್ಲ. ಅವರು ಯಾವುದೇ ಕ್ರಿಮಿನಲ್ ದಾಖಲೆಯನ್ನೂ ಹೊಂದಿಲ್ಲ’ ಎಂದು ವಕೀಲ ಸೈಯದ್ ಇಮ್ರಾನ್ ಘನಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪಟ್ನಾ:</strong> ಪ್ರಧಾನಿ ನರೇಂದ್ರ ಮೋದಿ ಅವರು 2013ರಲ್ಲಿ ಭಾಗವಹಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದಲ್ಲಿ ನಾಲ್ವರಿಗೆ ಪಟ್ನಾದ ವಿಶೇಷ ಎನ್ಐಎ ನ್ಯಾಯಾಲಯವು ಸೋಮವಾರ ಮರಣದಂಡನೆ ವಿಧಿಸಿದೆ.</p>.<p class="title">ಸ್ಫೋಟ ಪ್ರಕರಣದಲ್ಲಿ ಮಾರಣಾಂತಿಕ ದಾಳಿ ನಡೆಸಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.</p>.<p class="bodytext">ಮೋದಿ ಅವರು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವ ಮುನ್ನ, ಪಟ್ನಾದ ಉದ್ಯಾನವೊಂದರಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದವು.</p>.<p class="bodytext">ಸಮೀಪದ ರೈಲ್ವೆ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದ್ದ ಈ ಬಾಂಬ್ ದಾಳಿಯಲ್ಲಿ ಒಟ್ಟು ಆರು ಜನರು ಸಾವಿಗೀಡಾಗಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.</p>.<p class="bodytext">ಅಪರಾಧಿಗಳೆಲ್ಲರೂ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ಸ್ ಆಫ್ ಇಂಡಿಯಾ ಗುಂಪಿಗೆ ಸೇರಿದವರು ಎಂದು ಎಂದು ರಾಷ್ಟ್ರೀಯ ತನಿಖಾ ದಳವು ತಿಳಿಸಿದೆ.</p>.<p class="bodytext">‘ಸರ್ಕಾರದ ವಿರುದ್ಧ ದಾಳಿ ನಡೆಸಲು ಹಾಗೂ ಪಿತೂರಿ ನಡೆಸಿದ್ದ ಕಾರಣಕ್ಕಾಗಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ’ ಎಂದು ಸಾರ್ವಜನಿಕ ಅಭಿಯೋಜಕ ಲಲನ್ ಕುಮಾರ್ ಸಿನ್ಹಾ ಎಎಫ್ಪಿಗೆ ತಿಳಿಸಿದ್ದಾರೆ.</p>.<p>‘ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಇತರ ಮೂವರಿಗೆ ನ್ಯಾಯಾಲಯವು 7 ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು’ ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ.</p>.<p>‘ಪ್ರಕರಣದ ಮುಖ್ಯ ಸಂಚುಕೋರನನ್ನು ಗುರುತಿಸುವಲ್ಲಿ ಎನ್ಐಎ ವಿಫಲವಾಗಿದೆ. ಶಿಕ್ಷೆಗೆ ಒಳಗಾದವರು ಭಯೋತ್ಪಾದಕರಲ್ಲ. ಅವರು ಯಾವುದೇ ಕ್ರಿಮಿನಲ್ ದಾಖಲೆಯನ್ನೂ ಹೊಂದಿಲ್ಲ’ ಎಂದು ವಕೀಲ ಸೈಯದ್ ಇಮ್ರಾನ್ ಘನಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>