ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀಸ್ತಾ ಬಂಧನ: ಒಎಚ್‌ಸಿಎಚ್‌ಆರ್‌ ವಿರುದ್ಧ ಹರಿಹಾಯ್ದ ಭಾರತ

Last Updated 29 ಜೂನ್ 2022, 11:39 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯು (ಒಎಚ್‌ಸಿಎಚ್‌ಆರ್‌) ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಬಂಧನವನ್ನು ಖಂಡಿಸಿದೆ. ತೀಸ್ತಾ ಪರ ಟ್ವೀಟ್‌ ಮಾಡಿರುವ ಒಎಚ್‌ಸಿಎಚ್‌ಆರ್‌ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹರಿಹಾಯ್ದಿದ್ದಾರೆ.

‘ತೀಸ್ತಾ ಹಾಗೂ ಇಬ್ಬರುಮಾಜಿ ಐಪಿಎಸ್‌ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ಕಳವಳಕಾರಿ. ಅವರಿಗೆ ಕಿರುಕುಳ ನೀಡದೆ ಬಂಧಿತರನ್ನೆಲ್ಲಾ ಕೂಡಲೇ ಬಿಡುಗಡೆ ಮಾಡಬೇಕು’ ಎಂದುಒಎಚ್‌ಸಿಎಚ್‌ಆರ್‌ ಟ್ವೀಟ್‌ ಮೂಲಕ ಆಗ್ರಹಿಸಿದೆ.

‘ತೀಸ್ತಾ ಪ್ರಕರಣದ ಕುರಿತು ಒಎಚ್‌ಸಿಎಚ್‌ಆರ್‌ ಮಾಡಿರುವ ಟ್ವೀಟ್‌ ನಮ್ಮ ಗಮನಕ್ಕೆ ಬಂದಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿದೆ. ಇದರಲ್ಲಿ ಮೂಗು ತೂರಿಸುವ ಕೆಲಸವನ್ನುಒಎಚ್‌ಸಿಎಚ್‌ಆರ್‌ ಮಾಡಬಾರದು’ ಎಂದು ಬಾಗ್ಚಿ ‍‍ಹೇಳಿದ್ದಾರೆ.

‘ಕಾನೂನು ಉಲ್ಲಂಘಿಸುವವರ ವಿರುದ್ಧ ನ್ಯಾಯಾಂಗದ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಕಿಡಿಕಾರಿದ್ದಾರೆ.

2002ರ ಗುಜರಾತ್‌ ಗಲಭೆ ಪ‍್ರಕರಣಗಳಲ್ಲಿ ‘ಮುಗ್ಧ’ ಜನರನ್ನು ಸಿಲುಕಿಸುವುದಕ್ಕಾಗಿ ದಾಖಲೆಗಳನ್ನು ತಿರುಚಿದ ಮತ್ತು ಅಪರಾಧ ಒಳಸಂಚು ನಡೆಸಿದ ಆರೋಪದಲ್ಲಿತೀಸ್ತಾ, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ.ಶ್ರೀಕುಮಾರ್ ಮತ್ತು ಸಂಜೀವ್‌ ಭಟ್‌ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT