ಮುಂಬೈ: ಭಯೋತ್ಪಾದನೆಯನ್ನು ನಿಗ್ರಹಿಸುವ ಕಾರ್ಯಾಚರಣೆಯ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರಿಲಂಕಾ ನಡುವಿನ ಜಂಟಿ ಸೇನಾ ಅಭ್ಯಾಸಶ್ರೀಲಂಕಾದ ಪೂರ್ವ ಭಾಗದ ಅಂಪಾರಾ ಜಿಲ್ಲೆಯ ಕಾಂಬ್ಯಾಟ್ ಟ್ರೈನಿಂಗ್ ಸ್ಕೂಲ್ನಲ್ಲಿ ಸೋಮವಾರ ಆರಂಭವಾಯಿತು.
‘ಮಿತ್ರ ಶಕ್ತಿ‘ ಹೆಸರಿನ ಸೇನಾ ಅಭ್ಯಾಸದ ಎಂಟನೇ ಆವೃತ್ತಿ ಇದಾಗಿದ್ದು, ಸಮರಾಭ್ಯಾಸ 12 ದಿನಗಳ ಕಾಲ ನಡೆಯಲಿದೆ. ಕರ್ನಲ್ ಪ್ರಕಾಶ್ ಕುಮಾರ್ ನೇತೃತ್ವದ 120 ಮಂದಿಯ ಭಾರತೀಯ ಸೇನಾ ಸಿಬ್ಬಂದಿಯ ತಂಡ ಇದರಲ್ಲಿ ಪಾಲ್ಗೊಂಡಿದೆ.
2019ರ ಏಪ್ರಿಲ್ನಲ್ಲಿ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.