<p class="title"><strong>ಬಾಲಾಸೋರ್, ಒಡಿಶಾ (ಪಿಟಿಐ)</strong>: ದೇಶಿಯವಾಗಿ ಅಭಿವೃದ್ಧಿಪಡಿಸಿರುವ, ಲಂಬವಾಗಿ ಭೂಮಿಯಿಂದ ಗಗನಮುಖಿಯಾಗಿ ಉಡಾವಣೆ ಮಾಡಬಹುದಾದ ನೂತನ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಮಂಗಳವಾರ ಯಶಸ್ವಿಯಾಗಿ ನಡೆಸಿತು.</p>.<p class="title">ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಕರಾವಳಿ ಭಾಗದ ಚಾಂಡಿಪುರ್ನಲ್ಲಿ ಮಧ್ಯಾಹ್ನ 3.08ಕ್ಕೆ ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಿಳಿಸಿದೆ.</p>.<p class="title">ಕ್ಷಿಪಣಿಯ ವೇಗದ ಗತಿಯನ್ನು ಗಮನಿಸಲು ಹಲವು ಕಣ್ಗಾವಲು ಪರಿಕರಗಳನ್ನು ಬಳಸಲಾಗಿತ್ತು. ಈ ಕ್ಷಿಪಣಿಯ ಕಾರ್ಯವ್ಯಾಪ್ತಿ 50 ಕಿ.ಮೀ ಆಗಿದೆ ಎಂದು ಡಿಆರ್ಡಿಒ ಟ್ವೀಟ್ ಮಾಡಿದೆ.</p>.<p class="title">ಕಡಿಮೆ ಸಾಂದ್ರತೆಯ ವಿದ್ಯುನ್ಮಾನ ಗುರಿಯನ್ನು ಕೇಂದ್ರೀಕರಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸಲಾಗುವುದು ಎಂದು ಡಿಆರ್ಡಿಒ ತಿಳಿಸಿದೆ. ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿ ನಡೆದುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಒಗೆ ಅಭಿನಂದಿಸಿದ್ದಾರೆ.</p>.<p>ಜನರ ಸ್ಥಳಾಂತರ: ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಹಿನ್ನೆಲೆಯಲ್ಲಿ ಬಾಲಾಸೋರ್ ಜಿಲ್ಲಾಡಳಿತವು ಉಡಾವಣೆ ಸ್ಥಳದಿಂದ 2.5 ಕಿ.ಮೀ ವ್ಯಾಪ್ತಿಯಲ್ಲಿದ್ದ ಸುಮಾರು 4,500 ಜನರನ್ನು ಸ್ಥಳಾಂತರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಬಾಲಾಸೋರ್, ಒಡಿಶಾ (ಪಿಟಿಐ)</strong>: ದೇಶಿಯವಾಗಿ ಅಭಿವೃದ್ಧಿಪಡಿಸಿರುವ, ಲಂಬವಾಗಿ ಭೂಮಿಯಿಂದ ಗಗನಮುಖಿಯಾಗಿ ಉಡಾವಣೆ ಮಾಡಬಹುದಾದ ನೂತನ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಮಂಗಳವಾರ ಯಶಸ್ವಿಯಾಗಿ ನಡೆಸಿತು.</p>.<p class="title">ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಕರಾವಳಿ ಭಾಗದ ಚಾಂಡಿಪುರ್ನಲ್ಲಿ ಮಧ್ಯಾಹ್ನ 3.08ಕ್ಕೆ ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಿಳಿಸಿದೆ.</p>.<p class="title">ಕ್ಷಿಪಣಿಯ ವೇಗದ ಗತಿಯನ್ನು ಗಮನಿಸಲು ಹಲವು ಕಣ್ಗಾವಲು ಪರಿಕರಗಳನ್ನು ಬಳಸಲಾಗಿತ್ತು. ಈ ಕ್ಷಿಪಣಿಯ ಕಾರ್ಯವ್ಯಾಪ್ತಿ 50 ಕಿ.ಮೀ ಆಗಿದೆ ಎಂದು ಡಿಆರ್ಡಿಒ ಟ್ವೀಟ್ ಮಾಡಿದೆ.</p>.<p class="title">ಕಡಿಮೆ ಸಾಂದ್ರತೆಯ ವಿದ್ಯುನ್ಮಾನ ಗುರಿಯನ್ನು ಕೇಂದ್ರೀಕರಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸಲಾಗುವುದು ಎಂದು ಡಿಆರ್ಡಿಒ ತಿಳಿಸಿದೆ. ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿ ನಡೆದುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಒಗೆ ಅಭಿನಂದಿಸಿದ್ದಾರೆ.</p>.<p>ಜನರ ಸ್ಥಳಾಂತರ: ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಹಿನ್ನೆಲೆಯಲ್ಲಿ ಬಾಲಾಸೋರ್ ಜಿಲ್ಲಾಡಳಿತವು ಉಡಾವಣೆ ಸ್ಥಳದಿಂದ 2.5 ಕಿ.ಮೀ ವ್ಯಾಪ್ತಿಯಲ್ಲಿದ್ದ ಸುಮಾರು 4,500 ಜನರನ್ನು ಸ್ಥಳಾಂತರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>