<p><strong>ಅಹಮದಾಬಾದ್:</strong> ‘ದೇಶೀಯ ತಂತ್ರಜ್ಞಾನ ಬಳಸಿ ರಾಡಾರ್ ಇಮೇಜಿಂಗ್ ಉಪಗ್ರಹಗಳನ್ನು (ರಿಸ್ಯಾಟ್) ಅಭಿವೃದ್ಧಿಪಡಿಸಿದ್ದಕ್ಕಾಗಿ ನನಗೆ ಆರ್ಸೆನಿಕ್ ಟ್ರೈ ಆಕ್ಸೈಡ್ ಎಂಬ ವಿಷಕಾರಿ ರಾಸಾಯನಿಕ ನೀಡಿ ಕೊಲ್ಲಲು ಯತ್ನಿಸಿರಬಹುದು’ ಎಂದು ಇಸ್ರೊ ವಿಜ್ಞಾನಿ ತಪನ್ ಮಿಶ್ರಾ ಬುಧವಾರ ಹೇಳಿದರು.</p>.<p>ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಡಾರ್ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಕೆಲವು ದೇಶಗಳು ಭಾರತಕ್ಕೆ ಮಾರಾಟ ಮಾಡುತ್ತಿವೆ. ದೇಶೀಯವಾಗಿ ಈ ಸಾಧನಗಳನ್ನು ಅಭಿವೃದ್ಧಿಪಡಿಸಿದಾಗ, ತನ್ನ ಉತ್ಪನ್ನಗಳಿಗೆ ಬೇಡಿಕೆ ಕಳೆದುಕೊಳ್ಳುವ ಭೀತಿಯಿಂದ ಕೆಲವು ದೇಶಗಳು ಈ ಕೃತ್ಯ ಎಸಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.</p>.<p>‘ಭವಿಷ್ಯದಲ್ಲಿ ಇಂಥ ದುಷ್ಕೃತ್ಯಗಳು ನಡೆಯದಂತೆ ತಡೆಯಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ನನ್ನ ಕೊಲೆ ಯತ್ನದ ಘಟನೆಯನ್ನು ಬಹಿರಂಗಗೊಳಿಸಲು ನಿರ್ಧರಿಸಿದೆ’ ಎಂದೂ ಹೇಳಿದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/ong-kept-secret-isro-scientist-claims-he-was-poisoned-three-years-ago-793832.html" target="_blank">ಮೂರು ವರ್ಷಗಳ ಹಿಂದೆ ವಿಷವುಣಿಸಿ ಕೊಲೆಗೆ ಯತ್ನ: ಇಸ್ರೋ ವಿಜ್ಞಾನಿ</a></p>.<p>‘ನಿವೃತ್ತಿ ಹೊಂದಿದ ನಂತರ ಈ ವಿಷಯವನ್ಜು ನಾನು ಬಹಿರಂಗಪಡಿಸಬಹುದು ಎಂದು ನನ್ನ ಕೊಲೆಗೆ ಯತ್ನಿಸಿದವರು ಭಾವಿಸಿರಬೇಕು. ಅದಕ್ಕಾಗಿ ನಿವೃತ್ತಿಗೂ ಮೊದಲೇ ನನ್ನನ್ನು ಮುಗಿಸಲು ಅವರು ಸಂಚು ರೂಪಿಸಿರುವ ಸಾಧ್ಯತೆಯೂ ಇದೆ. ಒಂದು ವೇಳೆ ನನಗೆ ಏನಾದರೂ ತೊಂದರೆಯಾದರೆ ಮಾಧ್ಯಮಗಳು ದನಿ ಎತ್ತಬಹುದು’ ಎಂದೂ ಅಭಿಪ್ರಾಯಪಟ್ಟರು.</p>.<p>2017 ಮೇ 23ರಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ, ಆರ್ಸೆನಿಕ್ ಟ್ರೈ ಆಕ್ಸೆೈಡ್ ನೀಡಿ ತಮ್ಮ ಕೊಲೆಗೆ ಯತ್ನಿಸಲಾಗಿತ್ತು ಎಂದು ಅವರು ಮಂಗಳವಾರ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.</p>.<p>‘ರಾಡಾರ್ ಬಳಸಿ ಚಿತ್ರ ಸೆರೆ ಹಿಡಿಯುವುದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸುವ ಉಪಗ್ರಹಗಳ ನೆರವಿನಿಂದ ಭೂಮಿಯ ಚಿತ್ರಗಳನ್ನು ಹೆಚ್ಚು ನಿಖರವಾಗಿ ಸೆರೆ ಹಿಡಿಯಬಹುದು. ಹಗಲಿರಲಿ, ರಾತ್ರಿ ಇರಲಿ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಈ ರಿಸ್ಯಾಟ್ ನಮಗೆ ಕಳುಹಿಸಬಲ್ಲದು’ ಎಂದರು.</p>.<p>‘ಈ ರಾಡಾರ್ ವ್ಯವಸ್ಥೆಯನ್ನು ಬೇರೆ ದೇಶಗಳಿಂದ ಖರೀದಿ ಮಾಡಿದರೆ, ಇಲ್ಲಿ ತಯಾರಿಸಲು ತಗಲುವ ವೆಚ್ಚಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ನೀಡಬೇಕಾಗುತ್ತದೆ’ ಎಂದೂ ಮಿಶ್ರಾ ವಿವರಿಸಿದರು.</p>.<p>‘ಮೋಡ ಕವಿದ ಇಲ್ಲವೇ ದೂಳಿನಿಂದ ಕೂಡಿದ ವಾತಾವರಣ ಇದ್ದರೂ ರಿಸ್ಯಾಟ್ ಸಹಾಯದಿಂದ ಹೆಚ್ಚು ಸ್ಪಷ್ಟ ಇರುವ ಚಿತ್ರಗಳನ್ನು ಸೆರೆ ಹಿಡಿಯಬಹುದು. ಹೀಗಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ವ್ಯವಸ್ಥೆ ಹೆಚ್ಚು ಉಪಯುಕ್ತ. ಇಂಥ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಿದರೆ, ಬೇರೆ ದೇಶಗಳ ಕಣ್ಣು ಕೆಂಪಾಗುತ್ತದೆ. ಅವರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ’ ಎಂದೂ ಹೇಳಿದರು.</p>.<p>ನಿಮ್ಮ ಕೊಲೆ ಯತ್ನಕ್ಕೆ ನಿಖರ ಕಾರಣ ಏನು ಎಂಬುದನ್ನು ಹೇಳಿ ಎಂಬ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಮಿಶ್ರಾ ಉತ್ತರಿಸಿದರು.</p>.<p>ಇಸ್ರೊದಲ್ಲಿ ಸದ್ಯ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಿಶ್ರಾ, ಈ ತಿಂಗಳಾಂತ್ಯಕ್ಕೆ ನಿವೃತ್ತಿ ಹೊಂದುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ‘ದೇಶೀಯ ತಂತ್ರಜ್ಞಾನ ಬಳಸಿ ರಾಡಾರ್ ಇಮೇಜಿಂಗ್ ಉಪಗ್ರಹಗಳನ್ನು (ರಿಸ್ಯಾಟ್) ಅಭಿವೃದ್ಧಿಪಡಿಸಿದ್ದಕ್ಕಾಗಿ ನನಗೆ ಆರ್ಸೆನಿಕ್ ಟ್ರೈ ಆಕ್ಸೈಡ್ ಎಂಬ ವಿಷಕಾರಿ ರಾಸಾಯನಿಕ ನೀಡಿ ಕೊಲ್ಲಲು ಯತ್ನಿಸಿರಬಹುದು’ ಎಂದು ಇಸ್ರೊ ವಿಜ್ಞಾನಿ ತಪನ್ ಮಿಶ್ರಾ ಬುಧವಾರ ಹೇಳಿದರು.</p>.<p>ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಡಾರ್ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಕೆಲವು ದೇಶಗಳು ಭಾರತಕ್ಕೆ ಮಾರಾಟ ಮಾಡುತ್ತಿವೆ. ದೇಶೀಯವಾಗಿ ಈ ಸಾಧನಗಳನ್ನು ಅಭಿವೃದ್ಧಿಪಡಿಸಿದಾಗ, ತನ್ನ ಉತ್ಪನ್ನಗಳಿಗೆ ಬೇಡಿಕೆ ಕಳೆದುಕೊಳ್ಳುವ ಭೀತಿಯಿಂದ ಕೆಲವು ದೇಶಗಳು ಈ ಕೃತ್ಯ ಎಸಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.</p>.<p>‘ಭವಿಷ್ಯದಲ್ಲಿ ಇಂಥ ದುಷ್ಕೃತ್ಯಗಳು ನಡೆಯದಂತೆ ತಡೆಯಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ನನ್ನ ಕೊಲೆ ಯತ್ನದ ಘಟನೆಯನ್ನು ಬಹಿರಂಗಗೊಳಿಸಲು ನಿರ್ಧರಿಸಿದೆ’ ಎಂದೂ ಹೇಳಿದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/ong-kept-secret-isro-scientist-claims-he-was-poisoned-three-years-ago-793832.html" target="_blank">ಮೂರು ವರ್ಷಗಳ ಹಿಂದೆ ವಿಷವುಣಿಸಿ ಕೊಲೆಗೆ ಯತ್ನ: ಇಸ್ರೋ ವಿಜ್ಞಾನಿ</a></p>.<p>‘ನಿವೃತ್ತಿ ಹೊಂದಿದ ನಂತರ ಈ ವಿಷಯವನ್ಜು ನಾನು ಬಹಿರಂಗಪಡಿಸಬಹುದು ಎಂದು ನನ್ನ ಕೊಲೆಗೆ ಯತ್ನಿಸಿದವರು ಭಾವಿಸಿರಬೇಕು. ಅದಕ್ಕಾಗಿ ನಿವೃತ್ತಿಗೂ ಮೊದಲೇ ನನ್ನನ್ನು ಮುಗಿಸಲು ಅವರು ಸಂಚು ರೂಪಿಸಿರುವ ಸಾಧ್ಯತೆಯೂ ಇದೆ. ಒಂದು ವೇಳೆ ನನಗೆ ಏನಾದರೂ ತೊಂದರೆಯಾದರೆ ಮಾಧ್ಯಮಗಳು ದನಿ ಎತ್ತಬಹುದು’ ಎಂದೂ ಅಭಿಪ್ರಾಯಪಟ್ಟರು.</p>.<p>2017 ಮೇ 23ರಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ, ಆರ್ಸೆನಿಕ್ ಟ್ರೈ ಆಕ್ಸೆೈಡ್ ನೀಡಿ ತಮ್ಮ ಕೊಲೆಗೆ ಯತ್ನಿಸಲಾಗಿತ್ತು ಎಂದು ಅವರು ಮಂಗಳವಾರ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.</p>.<p>‘ರಾಡಾರ್ ಬಳಸಿ ಚಿತ್ರ ಸೆರೆ ಹಿಡಿಯುವುದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸುವ ಉಪಗ್ರಹಗಳ ನೆರವಿನಿಂದ ಭೂಮಿಯ ಚಿತ್ರಗಳನ್ನು ಹೆಚ್ಚು ನಿಖರವಾಗಿ ಸೆರೆ ಹಿಡಿಯಬಹುದು. ಹಗಲಿರಲಿ, ರಾತ್ರಿ ಇರಲಿ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಈ ರಿಸ್ಯಾಟ್ ನಮಗೆ ಕಳುಹಿಸಬಲ್ಲದು’ ಎಂದರು.</p>.<p>‘ಈ ರಾಡಾರ್ ವ್ಯವಸ್ಥೆಯನ್ನು ಬೇರೆ ದೇಶಗಳಿಂದ ಖರೀದಿ ಮಾಡಿದರೆ, ಇಲ್ಲಿ ತಯಾರಿಸಲು ತಗಲುವ ವೆಚ್ಚಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ನೀಡಬೇಕಾಗುತ್ತದೆ’ ಎಂದೂ ಮಿಶ್ರಾ ವಿವರಿಸಿದರು.</p>.<p>‘ಮೋಡ ಕವಿದ ಇಲ್ಲವೇ ದೂಳಿನಿಂದ ಕೂಡಿದ ವಾತಾವರಣ ಇದ್ದರೂ ರಿಸ್ಯಾಟ್ ಸಹಾಯದಿಂದ ಹೆಚ್ಚು ಸ್ಪಷ್ಟ ಇರುವ ಚಿತ್ರಗಳನ್ನು ಸೆರೆ ಹಿಡಿಯಬಹುದು. ಹೀಗಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ವ್ಯವಸ್ಥೆ ಹೆಚ್ಚು ಉಪಯುಕ್ತ. ಇಂಥ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಿದರೆ, ಬೇರೆ ದೇಶಗಳ ಕಣ್ಣು ಕೆಂಪಾಗುತ್ತದೆ. ಅವರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ’ ಎಂದೂ ಹೇಳಿದರು.</p>.<p>ನಿಮ್ಮ ಕೊಲೆ ಯತ್ನಕ್ಕೆ ನಿಖರ ಕಾರಣ ಏನು ಎಂಬುದನ್ನು ಹೇಳಿ ಎಂಬ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಮಿಶ್ರಾ ಉತ್ತರಿಸಿದರು.</p>.<p>ಇಸ್ರೊದಲ್ಲಿ ಸದ್ಯ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಿಶ್ರಾ, ಈ ತಿಂಗಳಾಂತ್ಯಕ್ಕೆ ನಿವೃತ್ತಿ ಹೊಂದುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>