<p><strong>ಹೈದರಾಬಾದ್:</strong> ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿವೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾರ್ಯಾಧ್ಯಕ್ಷ, ನಗರಾಭಿವೃದ್ಧಿಸಚಿವ ಕೆ.ಟಿ ರಾಮಾರಾವ್ (ಕೆಟಿಆರ್) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಗುಜರಾತ್ನಿಂದ, ಗುಜರಾತ್ಗಾಗಿ, ಗುಜರಾತಿಗೋಸ್ಕರ’ ಇದು ಮೋಡೆಮಾಕ್ರಸಿಯ ಹೊಸ ವ್ಯಾಖ್ಯಾನ ಎಂದು ಶುಕ್ರವಾರ ಟ್ವೀಟ್ನಲ್ಲಿ ಕೆಟಿಆರ್ ವ್ಯಂಗ್ಯವಾಡಿದ್ದಾರೆ.</p>.<p>ಗುಜರಾತ್ಗೆ ಎಲೆಕ್ಟ್ರಿಕ್ ಲೋಕೋಮೋಟಿವ್ ಎಂಜಿನ್ ಯೋಜನೆಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.</p>.<p>ಸಂಸತ್ತಿನಲ್ಲೇ ಭರವಸೆ ನೀಡಿದ ಹೊರತಾಗಿಯೂ, ತೆಲಂಗಾಣದ ವಾರಂಗಲ್ಗೆ ಇಂಜಿನ್ ಕೋಚ್ ಕಾರ್ಖಾನೆ ನಿರಾಕರಿಸಲಾಗಿದೆ. ‘ಎನ್ಪಿಎ’ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅವರು ಕೆಟಿಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಕೆಟಿಆರ್ ಅವರು ಎನ್ಡಿಎ ಸರ್ಕಾರವನ್ನು ಇತ್ತೀಚೆಗೆ ಎನ್ಪಿಎ (ಅನುತ್ಪಾದಕ) ಎಂದು ಗೇಲಿ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿವೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾರ್ಯಾಧ್ಯಕ್ಷ, ನಗರಾಭಿವೃದ್ಧಿಸಚಿವ ಕೆ.ಟಿ ರಾಮಾರಾವ್ (ಕೆಟಿಆರ್) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಗುಜರಾತ್ನಿಂದ, ಗುಜರಾತ್ಗಾಗಿ, ಗುಜರಾತಿಗೋಸ್ಕರ’ ಇದು ಮೋಡೆಮಾಕ್ರಸಿಯ ಹೊಸ ವ್ಯಾಖ್ಯಾನ ಎಂದು ಶುಕ್ರವಾರ ಟ್ವೀಟ್ನಲ್ಲಿ ಕೆಟಿಆರ್ ವ್ಯಂಗ್ಯವಾಡಿದ್ದಾರೆ.</p>.<p>ಗುಜರಾತ್ಗೆ ಎಲೆಕ್ಟ್ರಿಕ್ ಲೋಕೋಮೋಟಿವ್ ಎಂಜಿನ್ ಯೋಜನೆಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.</p>.<p>ಸಂಸತ್ತಿನಲ್ಲೇ ಭರವಸೆ ನೀಡಿದ ಹೊರತಾಗಿಯೂ, ತೆಲಂಗಾಣದ ವಾರಂಗಲ್ಗೆ ಇಂಜಿನ್ ಕೋಚ್ ಕಾರ್ಖಾನೆ ನಿರಾಕರಿಸಲಾಗಿದೆ. ‘ಎನ್ಪಿಎ’ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅವರು ಕೆಟಿಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಕೆಟಿಆರ್ ಅವರು ಎನ್ಡಿಎ ಸರ್ಕಾರವನ್ನು ಇತ್ತೀಚೆಗೆ ಎನ್ಪಿಎ (ಅನುತ್ಪಾದಕ) ಎಂದು ಗೇಲಿ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>