ಈ ಎರಡು ಚಾನೆಲ್ಗಳನ್ನು ಪತ್ರಿಕಾಗೋಷ್ಠಿ ನಡೆಯುವ ಸ್ಥಳದಿಂದ ಹೊರಗೆ ನಡೆಯಿರಿ ಎಂದು ಹೇಳಿದ ರಾಜ್ಯಪಾಲರು, ‘ಮಾಧ್ಯಮ ಅತಿ ಮುಖ್ಯ ಎಂದು ನಾನು ಪರಿಗಣಿಸುತ್ತೇನೆ. ನಾನು ಯಾವಾಗಲೂ ಮಾಧ್ಯಮಗಳಿಗೆ ಉತ್ತರ ನೀಡಿದ್ದೇನೆ. ಆದರೆ ಮಾಧ್ಯಮ ಎನ್ನುವ ವೇಷ ಹಾಕಿದವರನ್ನು ಮನವೊಲಿಸಲು ನನಗೆ ಸಾಧ್ಯವಿಲ್ಲ. ಅವರು ಮಾಧ್ಯಮದವರಲ್ಲ, ಮಾಧ್ಯಮದ ವೇಷ ಧರಿಸಿದ ರಾಜಕೀಯ ಮಿತ್ರರು‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.