2018ರ ಸೆಪ್ಟೆಂಬರ್ 25ರಂದು ಬಾಲಭಾಸ್ಕರ್ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ತಿರುವನಂತಪುರದ ಹೊರವಲಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಬಾಲಭಾಸ್ಕರ್ ಹಾಗೂ ಅವರ ಎರಡು ವರ್ಷದ ಪುತ್ರಿ ತೇಜಸ್ವಿನಿ ಸಾವಿಗೀಡಾಗಿದ್ದರು. ಪತ್ನಿ ಲಕ್ಷ್ಮಿ ಹಾಗೂ ಕಾರು ಚಾಲಕ ಅರ್ಜುನ್ ಅವರಿಗೆ ಗಾಯಗಳಾಗಿದ್ದವು. ಅರ್ಜುನ್ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.