ಪಂಜಾಬ್ನ ಕೆಲವು ಸಚಿವರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮೊಹಾಲಿಯಲ್ಲಿ ಗುರುವಾರ ಜಮಾಯಿಸಿದರು. ನಂತರ ಅವರು ಸಿಧು ನೇತೃತ್ವದಲ್ಲಿ ಲಖಿಂಪುರ–ಖೇರಿಯತ್ತ ಸಾಗಿದರು. ಆದರೆ, ಹರಿಯಾಣ–ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದರು. ಪೊಲೀಸರು ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.