ನವದೆಹಲಿ: ಲಖಿಂಪುರ–ಖೇರಿ ಹಿಂಸಾಚಾರದಲ್ಲಿ ಕೊಲೆಯಾದ ಬಿಜೆಪಿ ಕಾರ್ಯಕರ್ತರೊಬ್ಬರ ಕುಟುಂಬವನ್ನು ಭೇಟಿ ಮಾಡಿದ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರನ್ನು ತಿಂಗಳ ಅವಧಿಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ (ಎಸ್ಕೆಎಂ) ಗುರುವಾರ ಅಮಾನತು ಮಾಡಲಾಗಿದೆ.
‘ಎಸ್ಕೆೆಎಂನ ಸಾಮಾನ್ಯಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಎಸ್ಕೆಎಂನ ಸಭೆಗಳು ಹಾಗೂ ಹೋರಾಟಗಳಲ್ಲಿ ಯಾದವ್ ಪಾಲ್ಗೊಳ್ಳುವಂತಿಲ್ಲ’ ಎಂದು ಹಿರಿಯ ರೈತ ಮುಖಂಡರೊಬ್ಬರು ಸಭೆ ನಂತರ ತಿಳಿಸಿದರು.
ಯಾದವ್ ಕೂಡ ಈ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡಿದ್ದರು. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎಸ್ಕೆಎಂ ಪ್ರತಿಭಟನೆ ನಡೆಸುತ್ತಿದ್ದು, ಯಾದವ್ ಅವರು ಎಸ್ಕೆಎಂ ಕೋರ್ ಕಮಿಟಿ ಸದಸ್ಯರಾಗಿದ್ದಾರೆ.