<p class="title"><strong>ನವದೆಹಲಿ:</strong> ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿಕೇರಳದ ವಕೀಲರೊಬ್ಬರನ್ನುರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.</p>.<p>ಎರ್ನಾಕುಳಂ ಜಿಲ್ಲೆಯ ಇಡವನಕ್ಕಾಡ್ ನಿವಾಸಿ ಮೊಹಮ್ಮದ್ ಮುಬಾರಕ್ ಎ. ಐ. ಬಂಧಿತ ವಕೀಲ.ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ 14ನೇ ಆರೋಪಿ.</p>.<p>‘ಕೇರಳ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸುವಮುಬಾರಕ್ ಪಿಎಫ್ಐನ ಸದಸ್ಯರಾಗಿದ್ದು, ಸಂಘಟನೆಯ ಹಿಟ್ ಸ್ಕ್ವಾಡ್ (ಪ್ರಹಾರ ಪಡೆ) ಸದಸ್ಯರಿಗೆ ಸಮರ ಕಲೆ ಮತ್ತು ಪ್ರಹಾರ ತರಬೇತಿ ನೀಡುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಶೋಧ ಕಾರ್ಯಾಚರಣೆ ವೇಳೆ ಮುಬಾರಕ್ ಮನೆಯಲ್ಲಿ ಕೊಡಲಿ, ಕತ್ತಿಗಳು ಮತ್ತು ಕುಡುಗೋಲುಗಳು ಒಳಗೊಂಡಂತೆ ಶಸ್ತಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಬ್ಯಾಡ್ಮಿಂಟನ್ ರಾಕೆಟ್ ಬ್ಯಾಗ್ ಪತ್ತೆಯಾಗಿದೆ. ಶಸ್ತ್ರಾಸ್ತ್ರಗಳ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ’ ಎಂದುವಕ್ತಾರರು ತಿಳಿಸಿದ್ದಾರೆ.</p>.<p>‘ಬೇರೆ ಸಮುದಾಯಗಳ ನಾಯಕರು ಮತ್ತು ಪ್ರಮುಖರನ್ನು ಗುರಿಯಾಗಿಸಿಪಿಎಫ್ಐ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಪ್ರಹಾರ ಪಡೆಗಳನ್ನುಹೆಚ್ಚಿಸಿಕೊಳ್ಳುತ್ತಿದೆ. ಪ್ರಹಾರ ಪಡೆಗಳಿಗೆ ತರಬೇತಿ ನೀಡಿ, ಈ ಪಡೆಗಳನ್ನು ನಿರ್ವಹಣೆ ಮಾಡುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.</p>.<p>ಪಿಎಫ್ಐ ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿಯ ಏಳು ಸದಸ್ಯರ ನಿವಾಸಗಳು ಮತ್ತು ಪಿಎಫ್ಐನ ಹಲವು ಮಂದಿ ವಲಯ ಮುಖ್ಯಸ್ಥರ ನಿವಾಸಗಳನ್ನು ಗುರಿಯಾಗಿಸಿಕೊಂಡು, ಕೇರಳದ 12 ಜಿಲ್ಲೆಗಳ 56 ಸ್ಥಳಗಳಲ್ಲಿ ಗುರುವಾರ ತನಿಖಾ ತಂಡ ಶೋಧ ನಡೆಸಿತು.</p>.<p>ಕೊಲೆ, ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಚಾಕುಗಳು, ಕಠಾರಿಗಳು, ಕತ್ತಿಗಳು ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು ಬಳಸುವ ತರಬೇತಿ ಪಡೆದ 15 ಮಂದಿ ತರಬೇತುದಾರರು ಮತ್ತು ಏಳು ಸದಸ್ಯರ ನಿವಾಸಗಳಲ್ಲೂ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p><strong>ಪಿಎಫ್ಐ ಪಿತೂರಿ: 11 ಮಂದಿ ವಿರುದ್ಧ ಚಾರ್ಜ್ಶೀಟ್ </strong></p>.<p>ನವದೆಹಲಿ (ಪಿಟಿಐ): ನಿಷೇಧಿತ ಪಿಎಫ್ಐ ಸಂಘಟನೆಗೆ ತೆಲಂಗಾಣದಲ್ಲಿ ಯುವಕರ ನೇಮಕಾತಿ ಮತ್ತುಭಯೋತ್ಪಾದಕ ತರಬೇತಿ ಶಿಬಿರಗಳ ಆಯೋಜನೆಯಲ್ಲಿ ಭಾಗಿಯಾದ 11 ಆರೋಪಿಗಳ ವಿರುದ್ಧ ಎನ್ಐಎಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ತೆಲಂಗಾಣದ 10 ಮಂದಿ ಮತ್ತು ಆಂಧ್ರಪ್ರದೇಶದ ಒಬ್ಬ ಆರೋಪಿ ವಿರುದ್ಧಯುಎಪಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿದೋಷಾರೋಪ ಪಟ್ಟಿಯನ್ನುಗುರುವಾರ ಹೈದರಾಬಾದ್ನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.</p>.<p>‘ಆರೋಪಿಗಳು ಕೇಂದ್ರ ಸರ್ಕಾರ ಮತ್ತು ಇತರ ಸಂಸ್ಥೆಗಳ ವಿರುದ್ಧ ದ್ವೇಷ ಮತ್ತು ವಿಷಪೂರಿತ ಭಾಷಣಗಳ ಮೂಲಕಮುಸ್ಲಿಂ ಯುವಕರನ್ನು ಸೆಳೆದು, ಪಿಎಫ್ಐ ಸಂಘಟನೆಗೆ ಸೇರಿಸುತ್ತಿದ್ದರು ಮತ್ತು ಅವರನ್ನು ತರಬೇತಿ ಶಿಬಿರಗಳಿಗೆ ಕಳುಹಿಸುತ್ತಿದ್ದುದು ತನಿಖೆಯಲ್ಲಿ ಕಂಡುಬಂದಿದೆ’ ಎಂದು ವಕ್ತಾರರು ಹೇಳಿದ್ದಾರೆ.</p>.<p>ಜುಲೈ 4ರಂದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ 6ನೇ ಟೌನ್ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ನಂತರ ಇದು ಎನ್ಐಎಗೆ ವರ್ಗಾವಣೆಯಾದ ಮೇಲೆ ಆಗಸ್ಟ್ 26ರಂದು ಪ್ರಕರಣ ಮರು ದಾಖಲಿಸಿ ಎನ್ಐಎ ತನಿಖೆ ಆರಂಭಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿಕೇರಳದ ವಕೀಲರೊಬ್ಬರನ್ನುರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.</p>.<p>ಎರ್ನಾಕುಳಂ ಜಿಲ್ಲೆಯ ಇಡವನಕ್ಕಾಡ್ ನಿವಾಸಿ ಮೊಹಮ್ಮದ್ ಮುಬಾರಕ್ ಎ. ಐ. ಬಂಧಿತ ವಕೀಲ.ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ 14ನೇ ಆರೋಪಿ.</p>.<p>‘ಕೇರಳ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸುವಮುಬಾರಕ್ ಪಿಎಫ್ಐನ ಸದಸ್ಯರಾಗಿದ್ದು, ಸಂಘಟನೆಯ ಹಿಟ್ ಸ್ಕ್ವಾಡ್ (ಪ್ರಹಾರ ಪಡೆ) ಸದಸ್ಯರಿಗೆ ಸಮರ ಕಲೆ ಮತ್ತು ಪ್ರಹಾರ ತರಬೇತಿ ನೀಡುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಶೋಧ ಕಾರ್ಯಾಚರಣೆ ವೇಳೆ ಮುಬಾರಕ್ ಮನೆಯಲ್ಲಿ ಕೊಡಲಿ, ಕತ್ತಿಗಳು ಮತ್ತು ಕುಡುಗೋಲುಗಳು ಒಳಗೊಂಡಂತೆ ಶಸ್ತಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಬ್ಯಾಡ್ಮಿಂಟನ್ ರಾಕೆಟ್ ಬ್ಯಾಗ್ ಪತ್ತೆಯಾಗಿದೆ. ಶಸ್ತ್ರಾಸ್ತ್ರಗಳ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ’ ಎಂದುವಕ್ತಾರರು ತಿಳಿಸಿದ್ದಾರೆ.</p>.<p>‘ಬೇರೆ ಸಮುದಾಯಗಳ ನಾಯಕರು ಮತ್ತು ಪ್ರಮುಖರನ್ನು ಗುರಿಯಾಗಿಸಿಪಿಎಫ್ಐ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಪ್ರಹಾರ ಪಡೆಗಳನ್ನುಹೆಚ್ಚಿಸಿಕೊಳ್ಳುತ್ತಿದೆ. ಪ್ರಹಾರ ಪಡೆಗಳಿಗೆ ತರಬೇತಿ ನೀಡಿ, ಈ ಪಡೆಗಳನ್ನು ನಿರ್ವಹಣೆ ಮಾಡುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.</p>.<p>ಪಿಎಫ್ಐ ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿಯ ಏಳು ಸದಸ್ಯರ ನಿವಾಸಗಳು ಮತ್ತು ಪಿಎಫ್ಐನ ಹಲವು ಮಂದಿ ವಲಯ ಮುಖ್ಯಸ್ಥರ ನಿವಾಸಗಳನ್ನು ಗುರಿಯಾಗಿಸಿಕೊಂಡು, ಕೇರಳದ 12 ಜಿಲ್ಲೆಗಳ 56 ಸ್ಥಳಗಳಲ್ಲಿ ಗುರುವಾರ ತನಿಖಾ ತಂಡ ಶೋಧ ನಡೆಸಿತು.</p>.<p>ಕೊಲೆ, ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಚಾಕುಗಳು, ಕಠಾರಿಗಳು, ಕತ್ತಿಗಳು ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು ಬಳಸುವ ತರಬೇತಿ ಪಡೆದ 15 ಮಂದಿ ತರಬೇತುದಾರರು ಮತ್ತು ಏಳು ಸದಸ್ಯರ ನಿವಾಸಗಳಲ್ಲೂ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p><strong>ಪಿಎಫ್ಐ ಪಿತೂರಿ: 11 ಮಂದಿ ವಿರುದ್ಧ ಚಾರ್ಜ್ಶೀಟ್ </strong></p>.<p>ನವದೆಹಲಿ (ಪಿಟಿಐ): ನಿಷೇಧಿತ ಪಿಎಫ್ಐ ಸಂಘಟನೆಗೆ ತೆಲಂಗಾಣದಲ್ಲಿ ಯುವಕರ ನೇಮಕಾತಿ ಮತ್ತುಭಯೋತ್ಪಾದಕ ತರಬೇತಿ ಶಿಬಿರಗಳ ಆಯೋಜನೆಯಲ್ಲಿ ಭಾಗಿಯಾದ 11 ಆರೋಪಿಗಳ ವಿರುದ್ಧ ಎನ್ಐಎಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ತೆಲಂಗಾಣದ 10 ಮಂದಿ ಮತ್ತು ಆಂಧ್ರಪ್ರದೇಶದ ಒಬ್ಬ ಆರೋಪಿ ವಿರುದ್ಧಯುಎಪಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿದೋಷಾರೋಪ ಪಟ್ಟಿಯನ್ನುಗುರುವಾರ ಹೈದರಾಬಾದ್ನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.</p>.<p>‘ಆರೋಪಿಗಳು ಕೇಂದ್ರ ಸರ್ಕಾರ ಮತ್ತು ಇತರ ಸಂಸ್ಥೆಗಳ ವಿರುದ್ಧ ದ್ವೇಷ ಮತ್ತು ವಿಷಪೂರಿತ ಭಾಷಣಗಳ ಮೂಲಕಮುಸ್ಲಿಂ ಯುವಕರನ್ನು ಸೆಳೆದು, ಪಿಎಫ್ಐ ಸಂಘಟನೆಗೆ ಸೇರಿಸುತ್ತಿದ್ದರು ಮತ್ತು ಅವರನ್ನು ತರಬೇತಿ ಶಿಬಿರಗಳಿಗೆ ಕಳುಹಿಸುತ್ತಿದ್ದುದು ತನಿಖೆಯಲ್ಲಿ ಕಂಡುಬಂದಿದೆ’ ಎಂದು ವಕ್ತಾರರು ಹೇಳಿದ್ದಾರೆ.</p>.<p>ಜುಲೈ 4ರಂದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ 6ನೇ ಟೌನ್ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ನಂತರ ಇದು ಎನ್ಐಎಗೆ ವರ್ಗಾವಣೆಯಾದ ಮೇಲೆ ಆಗಸ್ಟ್ 26ರಂದು ಪ್ರಕರಣ ಮರು ದಾಖಲಿಸಿ ಎನ್ಐಎ ತನಿಖೆ ಆರಂಭಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>