‘ಪಕ್ಷವು ಎಲ್ಲಾ ರಾಜ್ಯಗಳಲ್ಲಿರುವ ಕಾರ್ಯಕರ್ತರು, ಮುಖಂಡರು ಸೇರಿದಂತೆ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತದೆ. ಅದೇ ರೀತಿ, ಪಕ್ಷದ ಹೈಕಮಾಂಡ್ ಮೇಲೂ ಪ್ರತಿಯೊಬ್ಬರಿಗೆ ವಿಶ್ವಾಸ ಇರುತ್ತದೆ. ಯಡಿಯೂರಪ್ಪ ಅವರೂ ಹೈಕಮಾಂಡ್ ಮಾರ್ಗದರ್ಶನದ ಮೇರೆಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಅವರು ಹೇಳಿದರು.