ಆಡಳಿತಾರೂಢ ಎಎಪಿ ಸರ್ಕಾರದ ಶಾಸಕರು ಸೋಮವಾರ ವಿಧಾನಸಭೆಯಲ್ಲೂ ಗದ್ದಲ ನಡೆಸಿದ್ದಾರೆ. ಹೀಗಾಗಿ ದಿನದ ಕಲಾಪವನ್ನು ಮುಂದೂಡಲಾಗಿದೆ. ‘ಲೆಫ್ಟಿನೆಂಟ್ ಗವರ್ನರ್ ಸಾಹೇಬರೆ ಶಿಕ್ಷಕರನ್ನು ಫಿನ್ಲೆಂಡ್ಗೆ ಹೋಗಲು ಬಿಡಿ’ ಎಂಬ ಫಲಕಗಳನ್ನು ಹಿಡಿದಿದ್ದ ಶಾಸಕರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಕ್ಸೇನಾ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ.