ಲೋಕಸಭೆ ಮತ್ತು ರಾಜ್ಯಸಭೆಯ ಕೊಠಡಿಗಳ ವಿನ್ಯಾಸದ ಕುರಿತು ನಡೆದ ಆಂತರಿಕ ಚರ್ಚೆಯ ವೇಳೆ, ಸದನದ ಬಾವಿಗಿಳಿದು ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರು ಈ ಸಲಹೆ ನೀಡಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಗಳ ಜಾರಿ ವೇಳೆ, ವಿಪಕ್ಷದ ಸದಸ್ಯರು ಅಧಿಕಾರಿಗಳು ಕುಳಿತಿದ್ದ ಸದನದ ಬಾವಿಗೆ ಏಕಾಏಕಿ ನುಗ್ಗಿದ್ದ ಘಟನೆಯನ್ನೂ ಇದೇ ವೇಳೆ ಅಧಿಕಾರಿ ಪ್ರಸ್ತಾಪಿಸಿದರು. ನಿಯಮ ಮೀರುವ ಸದಸ್ಯರು, ಸಭಾಪತಿ ಮತ್ತು ಸಭಾಧ್ಯಕ್ಷರ ಪೀಠಕ್ಕೆ ಸುಲಭವಾಗಿ ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಲೂ ಇದೇ ವೇಳೆ ಸಲಹೆ ನೀಡಲಾಯಿತು.