<p><strong>ಔರಂಗಾಬಾದ್: </strong>ಲಾಕ್ಡೌನ್ನಿಂದ ಎದುರಾದ ಆರ್ಥಿಕ ಸಂಕಷ್ಟಗಳಿಂದ ಪುತ್ರನೊಬ್ಬ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ ವಿಲಕ್ಷಣ ಪ್ರಸಂಗ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದಿದೆ.</p>.<p>ಸುಮಾರು 60 ವಯಸ್ಸಿನ ಕಿರಣ್ ಪಾರ್ಡಿಕರ್ ವೃದ್ಧಾಶ್ರಮ ಸೇರಿದವರು. ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅವರು, ಟೈಲರಿಂಗ್ ಕೆಲಸ ಮಾಡಿ ಮಗನನ್ನು ಬೆಳೆಸಿದ್ದರು.</p>.<p>‘ದೊಡ್ಡವನಾದ ಬಳಿಕ ಮಗ ಜೀವನೋಪಾಯಕ್ಕಾಗಿ ಪುಣೆಯ ನ್ಯಾಯಾಲಯದ ಬಳಿ ಪುಸ್ತಕದ ಅಂಗಡಿಯಿಟ್ಟ. ಆದರೆ ಕೊರೊನಾ ವೈರಸ್ ಹಾವಳಿ ಮತ್ತು ಲಾಕ್ಡೌನ್ನಿಂದ ಕಳೆದ ವರ್ಷವೇ ಅಂಗಡಿಗೆ ಬೀಗ ಬಿದ್ದು ವ್ಯವಹಾರ ಸ್ಥಗಿತವಾಗಿತ್ತು’ ಎಂದು ಪುಂಡಾಲಿಕ್ನಗರದ ಠಾಣೆಯ ಎಎಸ್ಐ ಘನಶ್ಯಾಮ್ ಸೋನಾವಾನೆ ತಿಳಿಸಿದ್ದಾರೆ.</p>.<p>ಅತ್ತೆ–ಸೊಸೆಯರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪಾರ್ಡಿಕರ್ ಅವರು ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿ ಉಳಿದಿದ್ದ ಕೊಠಡಿಯ ಬಾಡಿಗೆ ಮತ್ತು ಆಹಾರದ ವ್ಯವಸ್ಥೆಯನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದ.</p>.<p>ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಗನ ಸ್ಥಿತಿ ನೋಡಿ ತಾಯಿಯು ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ಅವರಿಗೆ ಹೊಸ ಬಟ್ಟೆಗಳನ್ನು ಕೊಡಿಸಿ, ‘ಮಾತೂಶ್ರಿ ವೃದ್ಧಾಶ್ರಮಕ್ಕೆ’ ಸೇರಿಸಿದ್ದೇವೆ. ಇದಕ್ಕೆ ಪುತ್ರನ ಸಹಮತವೂ ಇದೆ ಎಂದು ಸೋನಾವಾನೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಂಗಾಬಾದ್: </strong>ಲಾಕ್ಡೌನ್ನಿಂದ ಎದುರಾದ ಆರ್ಥಿಕ ಸಂಕಷ್ಟಗಳಿಂದ ಪುತ್ರನೊಬ್ಬ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ ವಿಲಕ್ಷಣ ಪ್ರಸಂಗ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದಿದೆ.</p>.<p>ಸುಮಾರು 60 ವಯಸ್ಸಿನ ಕಿರಣ್ ಪಾರ್ಡಿಕರ್ ವೃದ್ಧಾಶ್ರಮ ಸೇರಿದವರು. ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅವರು, ಟೈಲರಿಂಗ್ ಕೆಲಸ ಮಾಡಿ ಮಗನನ್ನು ಬೆಳೆಸಿದ್ದರು.</p>.<p>‘ದೊಡ್ಡವನಾದ ಬಳಿಕ ಮಗ ಜೀವನೋಪಾಯಕ್ಕಾಗಿ ಪುಣೆಯ ನ್ಯಾಯಾಲಯದ ಬಳಿ ಪುಸ್ತಕದ ಅಂಗಡಿಯಿಟ್ಟ. ಆದರೆ ಕೊರೊನಾ ವೈರಸ್ ಹಾವಳಿ ಮತ್ತು ಲಾಕ್ಡೌನ್ನಿಂದ ಕಳೆದ ವರ್ಷವೇ ಅಂಗಡಿಗೆ ಬೀಗ ಬಿದ್ದು ವ್ಯವಹಾರ ಸ್ಥಗಿತವಾಗಿತ್ತು’ ಎಂದು ಪುಂಡಾಲಿಕ್ನಗರದ ಠಾಣೆಯ ಎಎಸ್ಐ ಘನಶ್ಯಾಮ್ ಸೋನಾವಾನೆ ತಿಳಿಸಿದ್ದಾರೆ.</p>.<p>ಅತ್ತೆ–ಸೊಸೆಯರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪಾರ್ಡಿಕರ್ ಅವರು ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿ ಉಳಿದಿದ್ದ ಕೊಠಡಿಯ ಬಾಡಿಗೆ ಮತ್ತು ಆಹಾರದ ವ್ಯವಸ್ಥೆಯನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದ.</p>.<p>ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಗನ ಸ್ಥಿತಿ ನೋಡಿ ತಾಯಿಯು ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ಅವರಿಗೆ ಹೊಸ ಬಟ್ಟೆಗಳನ್ನು ಕೊಡಿಸಿ, ‘ಮಾತೂಶ್ರಿ ವೃದ್ಧಾಶ್ರಮಕ್ಕೆ’ ಸೇರಿಸಿದ್ದೇವೆ. ಇದಕ್ಕೆ ಪುತ್ರನ ಸಹಮತವೂ ಇದೆ ಎಂದು ಸೋನಾವಾನೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>