<p><strong>ತಿರುವನಂತಪುರ</strong>: ಭಾರತದ ಅನೇಕ ನಗರ, ಪಟ್ಟಣಗಳಲ್ಲಿ ಅತ್ಯಂತ ಕಳಪೆ ರಸ್ತೆಗಳು, ಗುಂಡಿ ಬಿದ್ದ ರಸ್ತೆಗಳು ಸರ್ವೇಸಾಮಾನ್ಯ. ಇದರಿಂದ ರೊಚ್ಚಿಗೆದ್ದು ಆಗಾಗ ನಾಗರಿಕರು ಪ್ರತಿಭಟನೆಗಳನ್ನು ಮಾಡುವುದೂ ಹೊಸದೇನಲ್ಲ.</p>.<p>ಹೀಗೆ, ಕೇರಳದಲ್ಲಿ ತನ್ನ ಕ್ಷೇತ್ರದಲ್ಲಿ ತೆರಳುತ್ತಿದ್ದ ಶಾಸಕರೊಬ್ಬರಿಗೆ ಅಚ್ಚರಿ ಕಾದಿತ್ತು. ರಸ್ತೆ ಎಂಬುದೇ ಕಾಣೆಯಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟ ತಮ್ಮೂರಿನರಸ್ತೆಯ ಪರಿಸ್ಥಿತಿಯನ್ನು ಯುವಕನೊಬ್ಬ ಆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದ ವಿಡಿಯೊ ವೈರಲ್ ಆಗಿದೆ.</p>.<p>ಕೇರಳದ ಮಲಪ್ಪುರಂನ ಪಂಡಿಕ್ಕಾಡುವಿನಲ್ಲಿ ರಣಭೂಮಿ ಎನ್ಜಿಒದ ಕಾರ್ಯಕರ್ತ ಹಮ್ಜಾ ಪೂರಲಿಯಿಲ್ ಎನ್ನುವರು ನೀರು ತುಂಬಿದ ರಸ್ತೆ ಗುಂಡಿಗಳಲ್ಲಿ ಸ್ನಾನ ಮುಗಿಸಿ, ಯೋಗ ಮಾಡಿದ್ದರ ಫೋಟೊ ವಿಡಿಯೊಗಳು ವೈರಲ್ ಆಗಿವೆ.</p>.<p>ಆಕಸ್ಮಿಕವಾಗಿ ಇದೇ ಮಾರ್ಗವಾಗಿ ಹೋಗುತ್ತಿದ್ದಪಂಡಿಕ್ಕಾಡು ಶಾಸಕ ಯು.ಎ ಲತೀಫ್ ಅವರು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ತಮ್ಮ ಕ್ಷೇತ್ರದ ಪರಿಸ್ಥಿತಿ ಕಂಡು ಇರಿಸುಮುರಿಸುಗೊಂಡಿದ್ದಾರೆ.</p>.<p>ಹಮ್ಜಾ ಅವರು ಪಂಡಿಕ್ಕಾಡುವಿನ ಭಯಾನಕ ರಸ್ತೆಗಳನ್ನು ಇದೇ ರೀತಿ ವಿನೂತನವಾಗಿ ತೋರಿಸುವ ಡಾಕುಮೆಂಟರಿ ಕೂಡ ಮಾಡಿದ್ದಾರೆ.</p>.<p>ವಿಶೇಷವೆಂದರೆ ಪಂಡಿಕ್ಕಾಡು ಊಟಿ ಹಾಗೂ ಪಾಲಕ್ಕಾಡ್ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಭಾರತದ ಅನೇಕ ನಗರ, ಪಟ್ಟಣಗಳಲ್ಲಿ ಅತ್ಯಂತ ಕಳಪೆ ರಸ್ತೆಗಳು, ಗುಂಡಿ ಬಿದ್ದ ರಸ್ತೆಗಳು ಸರ್ವೇಸಾಮಾನ್ಯ. ಇದರಿಂದ ರೊಚ್ಚಿಗೆದ್ದು ಆಗಾಗ ನಾಗರಿಕರು ಪ್ರತಿಭಟನೆಗಳನ್ನು ಮಾಡುವುದೂ ಹೊಸದೇನಲ್ಲ.</p>.<p>ಹೀಗೆ, ಕೇರಳದಲ್ಲಿ ತನ್ನ ಕ್ಷೇತ್ರದಲ್ಲಿ ತೆರಳುತ್ತಿದ್ದ ಶಾಸಕರೊಬ್ಬರಿಗೆ ಅಚ್ಚರಿ ಕಾದಿತ್ತು. ರಸ್ತೆ ಎಂಬುದೇ ಕಾಣೆಯಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟ ತಮ್ಮೂರಿನರಸ್ತೆಯ ಪರಿಸ್ಥಿತಿಯನ್ನು ಯುವಕನೊಬ್ಬ ಆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದ ವಿಡಿಯೊ ವೈರಲ್ ಆಗಿದೆ.</p>.<p>ಕೇರಳದ ಮಲಪ್ಪುರಂನ ಪಂಡಿಕ್ಕಾಡುವಿನಲ್ಲಿ ರಣಭೂಮಿ ಎನ್ಜಿಒದ ಕಾರ್ಯಕರ್ತ ಹಮ್ಜಾ ಪೂರಲಿಯಿಲ್ ಎನ್ನುವರು ನೀರು ತುಂಬಿದ ರಸ್ತೆ ಗುಂಡಿಗಳಲ್ಲಿ ಸ್ನಾನ ಮುಗಿಸಿ, ಯೋಗ ಮಾಡಿದ್ದರ ಫೋಟೊ ವಿಡಿಯೊಗಳು ವೈರಲ್ ಆಗಿವೆ.</p>.<p>ಆಕಸ್ಮಿಕವಾಗಿ ಇದೇ ಮಾರ್ಗವಾಗಿ ಹೋಗುತ್ತಿದ್ದಪಂಡಿಕ್ಕಾಡು ಶಾಸಕ ಯು.ಎ ಲತೀಫ್ ಅವರು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ತಮ್ಮ ಕ್ಷೇತ್ರದ ಪರಿಸ್ಥಿತಿ ಕಂಡು ಇರಿಸುಮುರಿಸುಗೊಂಡಿದ್ದಾರೆ.</p>.<p>ಹಮ್ಜಾ ಅವರು ಪಂಡಿಕ್ಕಾಡುವಿನ ಭಯಾನಕ ರಸ್ತೆಗಳನ್ನು ಇದೇ ರೀತಿ ವಿನೂತನವಾಗಿ ತೋರಿಸುವ ಡಾಕುಮೆಂಟರಿ ಕೂಡ ಮಾಡಿದ್ದಾರೆ.</p>.<p>ವಿಶೇಷವೆಂದರೆ ಪಂಡಿಕ್ಕಾಡು ಊಟಿ ಹಾಗೂ ಪಾಲಕ್ಕಾಡ್ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>