ಮುಂಬೈ: ಮುಂಬೈನಲ್ಲಿ ವರ್ಷಾಂತ್ಯದಲ್ಲಿ (ಡಿ.31) ಭಯೋತ್ಪಾದನಾ ದಾಳಿ ನಡೆಸಲು ಖಲಿಸ್ತಾನ ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್ಐ' ಟ್ವೀಟಿಸಿದೆ. ಭಯೋತ್ಪಾದನಾ ದಾಳಿ ಭೀತಿ ಹಿನ್ನೆಲೆಯಲ್ಲಿ ನಾಳೆ (ಶುಕ್ರವಾರ) ವಾರದ ರಜೆ ಸೇರಿದಂತೆ ರಜೆಯಲ್ಲಿರುವ ಎಲ್ಲ ಪೊಲೀಸರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
All police holidays & weekly holidays have been cancelled tomorrow and every policeman posted in Mumbai will be on duty. Information was received that Khalistani elements could carry out terrorist attacks in the city, after which the Mumbai Police has been on alert: Mumbai Police
ವಾಣಿಜ್ಯ ನಗರಿಯಲ್ಲಿ ದಾಳಿ ಭೀತಿ ಹಿನ್ನೆಲೆಯಲ್ಲಿ ಪ್ರಮುಖ ನಿಲ್ದಾಣಗಳಾದ ದಾದರ್, ಬಾಂದ್ರಾ, ಚರ್ಚ್ಗೇಟ್, ಸಿಎಸ್ಎಂಟಿ, ಕುರ್ಲಾ ಮತ್ತು ಇತರೆ ನಿಲ್ದಾಣಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ (ಮುಂಬೈ ರೈಲ್ವೆ) ತಿಳಿಸಿದ್ದಾರೆ.