<p><strong>ನವದೆಹಲಿ</strong>: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಘೋಷಿಸುವ ಮೂಲಕ ಜಾರ್ಖಂಡ್ನ ಎನ್ಸಿಪಿ ಶಾಸಕ ಕಮಲೇಶ್ ಸಿಂಗ್ ಅವರು, ವಿಪಕ್ಷಗಳ ನಾಯಕರು ಹುಬ್ಬೇರಿಸುವಂತೆ ಮಾಡಿದ್ದಾರೆ.</p>.<p>ಒಡಿಶಾದ ಆದಿವಾಸಿ ಜನಾಂಗದ ನಾಯಕ, ಕಾಂಗ್ರೆಸ್ನ ಹಿರಿಯ ಶಾಸಕ ಮಹಮ್ಮದ್ ಮೊಕ್ಯುಮ್ ಸಹ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಹೇಳಿದ್ದಾರೆ.</p>.<p>ತಾವು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಕಿರುವುದಾಗಿ ಸಿಂಗ್ ಮತ್ತು ಮೊಕ್ಯುಮ್ ಹೇಳಿದ್ದಾರೆ.</p>.<p>‘ರಾಷ್ಟ್ರಪತಿ ಹುದ್ದೆಗೆ ಸೂಕ್ತವಾದವರನ್ನು ಆಯ್ಕೆ ಮಾಡುವ ಹಕ್ಕು ಶಾಸಕರಿಗಿದೆ. ಒಡಿಯಾ ಭಾಷಿಕನಾಗಿ ನನ್ನ ಮತವು ಮುರ್ಮು ಅವರ ಗೆಲುವಿಗೆ ನೆರವಾದರೆ ನನಗೆ ಅತ್ಯಂತ ಹೆಮ್ಮೆ ಎನಿಸುತ್ತದೆ’ಎಂದು ಬಾರಾಬಟಿ–ಕಟಕ್ ಕ್ಷೇತ್ರದ ಶಾಸಕ ಮಹಮ್ಮದ್ ಮೊಕ್ಯುಮ್ ಹೇಳಿದ್ದಾರೆ.</p>.<p>‘ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್ ಅನ್ವಯ ಆಗುವುದಿಲ್ಲ. ಹಾಗಾಗಿ, ನನ್ನ ಆತ್ಮಸಾಕ್ಷಿಯ ಅನುಗುಣವಾಗಿ ಮತ ಹಾಕಿದ್ದೇನೆ’ಎಂದು ಅವರು ಹೇಳಿದ್ದಾರೆ.</p>.<p>ತಮ್ಮ ಹಿತೈಷಿಗಳು, ಸ್ನೇಹಿತರು ಮತ್ತು ಗಣ್ಯರು ಮುರ್ಮು ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದರು ಎಂದು ಅವರು ಹೇಳಿದ್ದಾರೆ.</p>.<p>ಒಡಿಶಾದ 81 ಶಾಸಕರ ಪೈಕಿ 51 ಮಂದಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.</p>.<p>ಇತ್ತ, ‘ಜಾರ್ಖಂಡ್ನಲ್ಲಿ ಮುರ್ಮು ಅವರಿಗೆ 65 ಶಾಸಕರು ಮತ ಹಾಕಿರಬಹುದು. ಹಲವು ಕಾಂಗ್ರೆಸ್ ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮುರ್ಮು ಅವರಿಗೆ ಮತ ಹಾಕಿದ್ದಾರೆ’ಎಂದು ಬಿಜೆಪಿ ಶಾಸಕ ಬಿರಾಂಚಿ ನಾರಾಯಣ್ ಹೇಳಿದ್ದಾರೆ.</p>.<p>ಬಿಜೆಪಿ ಶಾಸಕರಾದ ಅನಂತ್ ಓಝಾ ಮತ್ತು ಪ್ರತಾಪ್ ಶಾಹಿ ಮೊದಲಿಗರಾಗಿ ಮತದಾನ ಮಾಡಿದರು.</p>.<p>‘ದೇಶದ ಪ್ರಥಮ ಪ್ರಜೆಯ ಆಯ್ಕೆಗೆ ನಮ್ಮ ರಾಜ್ಯದಿಂದ ಮೊದಲಿಗನಾಗಿ ಮತದಾನ ಮಾಡಿದ್ದೇನೆ. ಇದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ’ ಎಂದು ಓಝಾ ಹೇಳಿದ್ದಾರೆ.</p>.<p>‘ಬಡವರು, ತುಳಿತಕ್ಕೊಳಗಾದವರು ಮತ್ತು ದಲಿತರ ಏಳಿಗೆಗೆ ಮುರ್ಮು ಶ್ರಮಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ’ ಎಂದು ಶಾಹಿ ಹೇಳಿದ್ದಾರೆ.</p>.<p>ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆ ಸೇರಿ ಜಾರ್ಖಂಡ್ನಲ್ಲಿ ಸರ್ಕಾರ ರಚನೆ ಮಾಡಿರುವ ಜೆಎಂಎಂ ಈ ಮೊದಲು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಮಬಲಿಸಿದ್ದರು. ಆದಿವಾಸಿ ಸಮುದಾಯದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಮುರ್ಮು ಅವರನ್ನು ಬೆಂಬಲಿಸಲು ತೀರ್ಮಾನಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಘೋಷಿಸುವ ಮೂಲಕ ಜಾರ್ಖಂಡ್ನ ಎನ್ಸಿಪಿ ಶಾಸಕ ಕಮಲೇಶ್ ಸಿಂಗ್ ಅವರು, ವಿಪಕ್ಷಗಳ ನಾಯಕರು ಹುಬ್ಬೇರಿಸುವಂತೆ ಮಾಡಿದ್ದಾರೆ.</p>.<p>ಒಡಿಶಾದ ಆದಿವಾಸಿ ಜನಾಂಗದ ನಾಯಕ, ಕಾಂಗ್ರೆಸ್ನ ಹಿರಿಯ ಶಾಸಕ ಮಹಮ್ಮದ್ ಮೊಕ್ಯುಮ್ ಸಹ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಹೇಳಿದ್ದಾರೆ.</p>.<p>ತಾವು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಕಿರುವುದಾಗಿ ಸಿಂಗ್ ಮತ್ತು ಮೊಕ್ಯುಮ್ ಹೇಳಿದ್ದಾರೆ.</p>.<p>‘ರಾಷ್ಟ್ರಪತಿ ಹುದ್ದೆಗೆ ಸೂಕ್ತವಾದವರನ್ನು ಆಯ್ಕೆ ಮಾಡುವ ಹಕ್ಕು ಶಾಸಕರಿಗಿದೆ. ಒಡಿಯಾ ಭಾಷಿಕನಾಗಿ ನನ್ನ ಮತವು ಮುರ್ಮು ಅವರ ಗೆಲುವಿಗೆ ನೆರವಾದರೆ ನನಗೆ ಅತ್ಯಂತ ಹೆಮ್ಮೆ ಎನಿಸುತ್ತದೆ’ಎಂದು ಬಾರಾಬಟಿ–ಕಟಕ್ ಕ್ಷೇತ್ರದ ಶಾಸಕ ಮಹಮ್ಮದ್ ಮೊಕ್ಯುಮ್ ಹೇಳಿದ್ದಾರೆ.</p>.<p>‘ರಾಷ್ಟ್ರಪತಿ ಚುನಾವಣೆಯಲ್ಲಿ ವಿಪ್ ಅನ್ವಯ ಆಗುವುದಿಲ್ಲ. ಹಾಗಾಗಿ, ನನ್ನ ಆತ್ಮಸಾಕ್ಷಿಯ ಅನುಗುಣವಾಗಿ ಮತ ಹಾಕಿದ್ದೇನೆ’ಎಂದು ಅವರು ಹೇಳಿದ್ದಾರೆ.</p>.<p>ತಮ್ಮ ಹಿತೈಷಿಗಳು, ಸ್ನೇಹಿತರು ಮತ್ತು ಗಣ್ಯರು ಮುರ್ಮು ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದರು ಎಂದು ಅವರು ಹೇಳಿದ್ದಾರೆ.</p>.<p>ಒಡಿಶಾದ 81 ಶಾಸಕರ ಪೈಕಿ 51 ಮಂದಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.</p>.<p>ಇತ್ತ, ‘ಜಾರ್ಖಂಡ್ನಲ್ಲಿ ಮುರ್ಮು ಅವರಿಗೆ 65 ಶಾಸಕರು ಮತ ಹಾಕಿರಬಹುದು. ಹಲವು ಕಾಂಗ್ರೆಸ್ ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮುರ್ಮು ಅವರಿಗೆ ಮತ ಹಾಕಿದ್ದಾರೆ’ಎಂದು ಬಿಜೆಪಿ ಶಾಸಕ ಬಿರಾಂಚಿ ನಾರಾಯಣ್ ಹೇಳಿದ್ದಾರೆ.</p>.<p>ಬಿಜೆಪಿ ಶಾಸಕರಾದ ಅನಂತ್ ಓಝಾ ಮತ್ತು ಪ್ರತಾಪ್ ಶಾಹಿ ಮೊದಲಿಗರಾಗಿ ಮತದಾನ ಮಾಡಿದರು.</p>.<p>‘ದೇಶದ ಪ್ರಥಮ ಪ್ರಜೆಯ ಆಯ್ಕೆಗೆ ನಮ್ಮ ರಾಜ್ಯದಿಂದ ಮೊದಲಿಗನಾಗಿ ಮತದಾನ ಮಾಡಿದ್ದೇನೆ. ಇದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ’ ಎಂದು ಓಝಾ ಹೇಳಿದ್ದಾರೆ.</p>.<p>‘ಬಡವರು, ತುಳಿತಕ್ಕೊಳಗಾದವರು ಮತ್ತು ದಲಿತರ ಏಳಿಗೆಗೆ ಮುರ್ಮು ಶ್ರಮಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ’ ಎಂದು ಶಾಹಿ ಹೇಳಿದ್ದಾರೆ.</p>.<p>ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆ ಸೇರಿ ಜಾರ್ಖಂಡ್ನಲ್ಲಿ ಸರ್ಕಾರ ರಚನೆ ಮಾಡಿರುವ ಜೆಎಂಎಂ ಈ ಮೊದಲು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಮಬಲಿಸಿದ್ದರು. ಆದಿವಾಸಿ ಸಮುದಾಯದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಮುರ್ಮು ಅವರನ್ನು ಬೆಂಬಲಿಸಲು ತೀರ್ಮಾನಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>