ಜುಲೈ 15ರಂದು ಈ ಅಭಿಯಾನವನ್ನು ಆರಂಭಿಸಲಾಗಿತ್ತು. ಚಾರ್ ಧಾಮ್ ಯಾತ್ರೆ, ಅಮರನಾಥ ಯಾತ್ರೆ ಸೇರಿದಂತೆ ಹಲವು ಧಾರ್ಮಿಕ ಯಾತ್ರೆಗಳಲ್ಲಿ ಶಿಬಿರಗಳನ್ನು ಮಾಡಲಾಗಿದೆ. ಜೊತೆಗೆ, ರೈಲು, ಬಸ್, ವಿಮಾನ ನಿಲ್ದಾಣಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಖಾಸಗಿ, ಸರ್ಕಾರಿ ಕಚೇರಿಗಳಲ್ಲಿ ಮುನ್ನೆಚ್ಚರಿಕೆ ಡೋಸ್ಗಳನ್ನು ನೀಡುವ ಶಿಬಿರಗಳನ್ನು ಮಾಡಲಾಗಿತ್ತು ಎಂದಿದೆ.