ಕೋಲ್ಕತ್ತದ ಸೈನ್ಸ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವ ರೆಡ್ಡಿ, ‘ರಾಜಾ ರಾಮ್ ಮೋಹನ್ ರಾಯ್ ಅವರು ಸತಿ ಅಥವಾ ಸತಿ ಸಹಗಮನದಂತಹ ಪದ್ಧತಿಯ ನಿವಾರಣೆಗೆ ಹೋರಾಡಿದ ವ್ಯಕ್ತಿ. ಅವರೊಬ್ಬ ಚಿಂತಕ, ಶಿಕ್ಷಣತಜ್ಞ, ಪತ್ರಕರ್ತ ಹಾಗೂ ದಾರ್ಶನಿಕರಾಗದ್ದರು. ಅವರು ಕೇವಲ ಬಂಗಾಳಕ್ಕಲ್ಲ; ಇಡೀ ದೇಶಕ್ಕೇ ಹೆಮ್ಮೆ. ಅವರ ಪುತ್ಥಳಿಯ ಸ್ಥಾಪನೆ ಯುವಜನತೆಗೆ ಸ್ಫೂರ್ತಿ ನೀಡುತ್ತದೆ’ ಎಂದು ತಿಳಿಸಿದರು.