<p><strong>ನವದೆಹಲಿ</strong>: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಪರಿಸರ ಹಿತರಕ್ಷಣೆಯ ವಿಷಯವಾಗಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ’ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.</p>.<p>‘ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಎನ್ಜಿಟಿ ಪರಿಸರ ಸಂಬಂಧಿ ವಿಷಯಗಳ ಮೇಲೆ ತನ್ನದೇ ವಿಚಾರಣೆ ಮಾಡಬಹುದು’ಎಂದುನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠಈ ತೀರ್ಪು ನೀಡಿದೆ.</p>.<p>‘ಎನ್ಜಿಟಿಗೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇಲ್ಲ. ಸಂವಿಧಾನಿಕ ಪೀಠಗಳಿಗೆ ಮಾತ್ರ ಈ ಅಧಿಕಾರ ಇದೆ’ಎಂದು ಎನ್ಜಿಟಿ ವಿರುದ್ಧಕೇಂದ್ರ ಸರ್ಕಾರ ಧಾವೆ ಹೂಡಿತ್ತು.</p>.<p>ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ‘ಎನ್ಜಿಟಿಗೆ ಒಂದು ವಿಷಯವನ್ನು ಸ್ವಂತಂತ್ರವಾಗಿಗ್ರಹಿಸುವ ಅಧಿಕಾರವಿಲ್ಲ. ನ್ಯಾಯಾಧೀಕರಣದ ಅಧಿಕಾರಗಳು ನಿರ್ಬಂಧಗಳಿಂದ ಮುಕ್ತವಾಗಿರುವುದಿಲ್ಲ.ಇದು ಪರಿಸರ ವಿಷಯಗಳ ಬಗ್ಗೆ ವ್ಯವಹರಿಸುವ ಒಂದು ನ್ಯಾಯಪೀಠವಾಗಿದೆ.ಪರಿಸರವು ಯಾರೋ ಒಬ್ಬರಿಗೆ ಸಂಬಂಧಿಸಿಲ್ಲ" ಎಂದು ವಾದಿಸಿದ್ದರು.</p>.<p>ಆದರೆ, ಕೇಂದ್ರದ ವಾದವನ್ನು ಮಾನ್ಯ ಮಾಡದ ನ್ಯಾಯಾಲಯ ಎನ್ಜಿಟಿಗೆ ಸು–ಮೋಟೊ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇದೆ ಎಂದು ಹೇಳಿದೆ. ಎನ್ಜಿಟಿ ಪರವಾಗಿ ಹಿರಿಯ ವಕೀಲ ಸಂಜಯ್ ಪಾರೇಖ್ ವಾದಿಸಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/cinema/pooja-hegde-new-photos-goes-viral-on-internet-873423.html" target="_blank">ಹೊಸ ಫೋಟೊಗಳನ್ನು ಹರಿಬಿಟ್ಟ ಪೂಜಾ ಹೆಗ್ಡೆ: ಬೋಲ್ಡ್ ಲುಕ್ನಲ್ಲಿ ನಟಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಪರಿಸರ ಹಿತರಕ್ಷಣೆಯ ವಿಷಯವಾಗಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ’ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.</p>.<p>‘ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಎನ್ಜಿಟಿ ಪರಿಸರ ಸಂಬಂಧಿ ವಿಷಯಗಳ ಮೇಲೆ ತನ್ನದೇ ವಿಚಾರಣೆ ಮಾಡಬಹುದು’ಎಂದುನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠಈ ತೀರ್ಪು ನೀಡಿದೆ.</p>.<p>‘ಎನ್ಜಿಟಿಗೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇಲ್ಲ. ಸಂವಿಧಾನಿಕ ಪೀಠಗಳಿಗೆ ಮಾತ್ರ ಈ ಅಧಿಕಾರ ಇದೆ’ಎಂದು ಎನ್ಜಿಟಿ ವಿರುದ್ಧಕೇಂದ್ರ ಸರ್ಕಾರ ಧಾವೆ ಹೂಡಿತ್ತು.</p>.<p>ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ‘ಎನ್ಜಿಟಿಗೆ ಒಂದು ವಿಷಯವನ್ನು ಸ್ವಂತಂತ್ರವಾಗಿಗ್ರಹಿಸುವ ಅಧಿಕಾರವಿಲ್ಲ. ನ್ಯಾಯಾಧೀಕರಣದ ಅಧಿಕಾರಗಳು ನಿರ್ಬಂಧಗಳಿಂದ ಮುಕ್ತವಾಗಿರುವುದಿಲ್ಲ.ಇದು ಪರಿಸರ ವಿಷಯಗಳ ಬಗ್ಗೆ ವ್ಯವಹರಿಸುವ ಒಂದು ನ್ಯಾಯಪೀಠವಾಗಿದೆ.ಪರಿಸರವು ಯಾರೋ ಒಬ್ಬರಿಗೆ ಸಂಬಂಧಿಸಿಲ್ಲ" ಎಂದು ವಾದಿಸಿದ್ದರು.</p>.<p>ಆದರೆ, ಕೇಂದ್ರದ ವಾದವನ್ನು ಮಾನ್ಯ ಮಾಡದ ನ್ಯಾಯಾಲಯ ಎನ್ಜಿಟಿಗೆ ಸು–ಮೋಟೊ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇದೆ ಎಂದು ಹೇಳಿದೆ. ಎನ್ಜಿಟಿ ಪರವಾಗಿ ಹಿರಿಯ ವಕೀಲ ಸಂಜಯ್ ಪಾರೇಖ್ ವಾದಿಸಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/cinema/pooja-hegde-new-photos-goes-viral-on-internet-873423.html" target="_blank">ಹೊಸ ಫೋಟೊಗಳನ್ನು ಹರಿಬಿಟ್ಟ ಪೂಜಾ ಹೆಗ್ಡೆ: ಬೋಲ್ಡ್ ಲುಕ್ನಲ್ಲಿ ನಟಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>