‘ಚುನಾವಣೆಯ ಬಳಿಕ ಬಿಜೆಪಿ ಹಾಗೂ ಎಲ್ಜೆಪಿ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಲಿವೆ. ನನ್ನ ಒಂದೇ ಒಂದು ಗುರಿ ಎಂದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೋಲಿಸಿ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗಟ್ಟುವುದು’ ಎಂದು ಚಿರಾಗ್ ತಮ್ಮ ಪ್ರತಿ ರ್ಯಾಲಿಯಲ್ಲಿಯೂ ಪುನರುಚ್ಚರಿಸಿದ್ದರು. ‘ನಾನು ಮೋದಿ ಅವರ ಬಂಟ ಹನುಮ’ ಎಂದು ಹೇಳಿದ್ದೂ ಫಲ ನೀಡಲಿಲ್ಲ.