ಎಲ್ಲ ರಾಜಕೀಯ ಪಕ್ಷಗಳು ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ನಡೆಸುತ್ತಿವೆ. ಸಂತರ ಜತೆ ಸಂಪರ್ಕಕ್ಕೆ ಇದು ಸೀಮಿತವಾಗಿಲ್ಲ. ಧಾರ್ಮಿಕ ಹುದ್ದೆಗಳಲ್ಲಿ ಕೂಡ ತಮ್ಮವರನ್ನೇ ತಂದು ಕೂರಿಸಿ, ತಮ್ಮ ನಿಲುವುಗಳನ್ನು ಹರಡುವ ಯತ್ನ ನಡೆಯುತ್ತಿದೆ. ಧಾರ್ಮಿಕ ಗುರುಗಳು ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಬೇಕು ಎಂದು ಕೆಲವು ವ್ಯಕ್ತಿಗಳು ಬಯಸುತ್ತಿದ್ದಾರೆ. ಹಾಗಾಗಿಯೇ, ಹಳೆಯ
ಮಾದರಿಯಲ್ಲಿ ಧರ್ಮ ಪ್ರಸಾರ ಮಾಡುವವರನ್ನು ಕಂಡರೆ ಅವರಿಗೆ ಆಗುತ್ತಿಲ್ಲ. ಅಂತಹ ಧಾರ್ಮಿಕ ಗುರುಗಳನ್ನು ನಿವಾರಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.