<p><strong>ಭುವನೇಶ್ವರ್</strong>: ಒಡಿಶಾದ ಮಹಾನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯೊಂದನ್ನು ರಕ್ಷಿಸಲು ತೆರಳಿದ್ದ ರಕ್ಷಣಾ ಪಡೆಯ ಜೊತೆಗಿದ್ದ ಟಿವಿ ಪತ್ರಕರ್ತರೊಬ್ಬರು ದುರ್ಮರಣಕ್ಕಿಡಾಗಿದ್ದಾರೆ.</p>.<p>ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಕ್ಷಣಾಪಡೆಯ ಬೋಟ್ ಜೊತೆಗೆ ವರದಿ ಮಾಡಲು ತೆರಳಿದ್ದಪತ್ರಕರ್ತ ಒಟಿವಿಯ ಅರಿಂದಾಮ್ ದಾಸ್ (39) ಅವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತರಾಗಿದ್ದು, ಆರು ಜರನ್ನು ರಕ್ಷಿಸಲಾಗಿದೆ.</p>.<p>ಶುಕ್ರವಾರ ಕಟಕ್ ಬಳಿಯಮಹಾನದಿಯ ಮುಂದಾಲಿ ಬ್ಯಾರೇಜ್ ಮಧ್ಯದಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿತ್ತು. ಆನೆಯನ್ನು ರಕ್ಷಿಸಲು ಒಡಿಶಾದ ವಿಪತ್ತು ತುರ್ತು ಕಾರ್ಯಾಚರಣೆ ಪಡೆ ತೆರಳಿತ್ತು. ಈ ವೇಳೆ ಅರಿಂದಾಮ್ ದಾಸ್ ಅವರು ಕೂಡ ವರದಿ ಮಾಡಲು ಬೋಟ್ನಲ್ಲಿ ರಕ್ಷಣಾ ಪಡೆಯ ಬೋಟ್ನಲ್ಲಿ ತೆರಳಿದ್ದರು.</p>.<p>ರಕ್ಷಣಾ ಪಡೆಯ ಬೋಟ್ಗೆ ಹೆದರಿದ ಆನೆ ನೀರಿನ ಸೆಳೆತ ಹೆಚ್ಚಿದ್ದ ನದಿಯಲ್ಲಿ ಓಡಾಡಿದೆ. ಇದರಿಂದ ಬೋಟ್ ಮುಗುಚಿ ಅನಾಹುತ ಸಂಭಿಸಿದೆ. ಆನೆಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಅರಿಂದಾಮ್ ದಾಸ್ ಅವರು ಒಡಿಶಾದ ಪ್ರಮುಖ ಸುದ್ದಿ ಚಾನೆಲ್ ಒಟಿವಿಯಲ್ಲಿ ಮುಖ್ಯ ವರದಿದಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಚಂಡಮಾರುತ, ನಕ್ಸಲ್ ಕಾರ್ಯಾಚರಣೆ, ಪ್ರಾಕೃತಿಕ ವಿಕೋಪ ಹಾಗು ವನ್ಯಜೀವಿಗಳ ಬಗ್ಗೆ ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದರು. ಈ ಮೂಲಕ ಅವರು ಒಡಿಶಾದಲ್ಲಿ ಹೆಸರು ಗಳಿಸಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/viral/neeraj-chopras-acting-skills-in-new-ad-take-internet-by-storm-868604.html" target="_blank">ವಿಡಿಯೊ: ಅವತಾರ ಪುರುಷನಾದ ಚಿನ್ನದ ಹುಡುಗ ನೀರಜ್ಚೋಪ್ರಾ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ್</strong>: ಒಡಿಶಾದ ಮಹಾನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯೊಂದನ್ನು ರಕ್ಷಿಸಲು ತೆರಳಿದ್ದ ರಕ್ಷಣಾ ಪಡೆಯ ಜೊತೆಗಿದ್ದ ಟಿವಿ ಪತ್ರಕರ್ತರೊಬ್ಬರು ದುರ್ಮರಣಕ್ಕಿಡಾಗಿದ್ದಾರೆ.</p>.<p>ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಕ್ಷಣಾಪಡೆಯ ಬೋಟ್ ಜೊತೆಗೆ ವರದಿ ಮಾಡಲು ತೆರಳಿದ್ದಪತ್ರಕರ್ತ ಒಟಿವಿಯ ಅರಿಂದಾಮ್ ದಾಸ್ (39) ಅವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತರಾಗಿದ್ದು, ಆರು ಜರನ್ನು ರಕ್ಷಿಸಲಾಗಿದೆ.</p>.<p>ಶುಕ್ರವಾರ ಕಟಕ್ ಬಳಿಯಮಹಾನದಿಯ ಮುಂದಾಲಿ ಬ್ಯಾರೇಜ್ ಮಧ್ಯದಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿತ್ತು. ಆನೆಯನ್ನು ರಕ್ಷಿಸಲು ಒಡಿಶಾದ ವಿಪತ್ತು ತುರ್ತು ಕಾರ್ಯಾಚರಣೆ ಪಡೆ ತೆರಳಿತ್ತು. ಈ ವೇಳೆ ಅರಿಂದಾಮ್ ದಾಸ್ ಅವರು ಕೂಡ ವರದಿ ಮಾಡಲು ಬೋಟ್ನಲ್ಲಿ ರಕ್ಷಣಾ ಪಡೆಯ ಬೋಟ್ನಲ್ಲಿ ತೆರಳಿದ್ದರು.</p>.<p>ರಕ್ಷಣಾ ಪಡೆಯ ಬೋಟ್ಗೆ ಹೆದರಿದ ಆನೆ ನೀರಿನ ಸೆಳೆತ ಹೆಚ್ಚಿದ್ದ ನದಿಯಲ್ಲಿ ಓಡಾಡಿದೆ. ಇದರಿಂದ ಬೋಟ್ ಮುಗುಚಿ ಅನಾಹುತ ಸಂಭಿಸಿದೆ. ಆನೆಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಅರಿಂದಾಮ್ ದಾಸ್ ಅವರು ಒಡಿಶಾದ ಪ್ರಮುಖ ಸುದ್ದಿ ಚಾನೆಲ್ ಒಟಿವಿಯಲ್ಲಿ ಮುಖ್ಯ ವರದಿದಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಚಂಡಮಾರುತ, ನಕ್ಸಲ್ ಕಾರ್ಯಾಚರಣೆ, ಪ್ರಾಕೃತಿಕ ವಿಕೋಪ ಹಾಗು ವನ್ಯಜೀವಿಗಳ ಬಗ್ಗೆ ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದರು. ಈ ಮೂಲಕ ಅವರು ಒಡಿಶಾದಲ್ಲಿ ಹೆಸರು ಗಳಿಸಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/viral/neeraj-chopras-acting-skills-in-new-ad-take-internet-by-storm-868604.html" target="_blank">ವಿಡಿಯೊ: ಅವತಾರ ಪುರುಷನಾದ ಚಿನ್ನದ ಹುಡುಗ ನೀರಜ್ಚೋಪ್ರಾ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>